24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕರಾಯ ಅಲ್ ಬಿರ್ರ್ ಸ್ಕೂಲಿನಲ್ಲಿ ಇಶ್ಕೇ ರಸೂಲ್ ಮೀಲಾದ್ ಕಾರ್ಯಕ್ರಮ: ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ

ಉಪ್ಪಿನಂಗಡಿ: ಇಲ್ಲಿಯ ಸಮೀಪದ ಕರಾಯದಲ್ಲಿ ಮತ ಬೌತಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ ಪ್ರತಿಷ್ಠಿತ ಅಲ್ ಬರ್ರ್ ಶಾಲೆಯಲ್ಲಿ ಮೀಲಾದ್ ಪ್ರಯುಕ್ತ ಇಶ್ಕೇ ರಸೂಲ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಕಲಾ ಪ್ರದರ್ಶನ, ವಿವಿಧ ರೀತಿಯ ಸ್ಪರ್ಧೆ ಗಳು, ಪ್ಲವರ್ ಶೋ, ಮೌಲಿದ್ ಮಜ್ಲಿಸ್ ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಹಬೀಬು ರ್ರಹ್ಮಾನ್ ತಂಙಳ್ ಕಲ್ಲೇರಿ ದುಹಾ ಮೂಲಕ ನೆರವೇರಿಸಿದರು.

ಮುಖ್ಯ ಭಾಷಣಗೈದ ಎಸ್ ಬಿ ದಾರಿಮಿ ಮಾತನಾಡಿ ಅಲ್ ಬಿರ್ರ್ ಶಾಲೆಯು ಮುಂದೆ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ. ಎಲ್ಲಾ ಕ್ಷೇತ್ರದಲ್ಲೂ ದೈನಂದಿನ ಬದಲಾವಣೆಗಳು ಆಗುತ್ತಿರುವಾಗ ಕಾಲದ ಕರೆಗೆ ಓಗೊಟ್ಟು ಮೂಲ ಧರ್ಮದ ಆಶಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಸಮುದಾಯ ಹಿಂದುಳಿಯ ಬೇಕಾಗುತ್ತದೆ ಎಂದರು.

ಸಯ್ಯಿದ್ ಅನಸ್ ತಂಙಳ್, ಕರ್ವೇಲು ಸಯ್ಯಿದ್, ಹಬೀಬುರ್ರಹ್ಮಾನ್ ತಙಳ್, ಇಸ್ಮಾಯಿಲ್ ತಙಳ್ ಉಪ್ಪಿನಂಗಡಿ ,
ಶಿಹಾಬುದ್ದೀನ್ ತಙಳ್, ಖಾಸಿಂ ಮದನಿ ಕರಾಯ, ಸಿದ್ದೀಕ್ ಫೈಝೀ, ಅಝೀಝ್ ಫೈಝೀ, ಯಾಕೂಬ್ ಫೈಝಿ, ಅಬ್ದುಲ್ ಜಬ್ಬಾರ್ ಅಸ್ಲಮಿ, ಇಲ್ಯಾಸ್ ಅರ್ಷದಿ ಆತೂರು, ಅಬ್ದುಲ್ ನಾಸಿರ್ ಅನ್ಸಾರಿ, ಇಲ್ಯಾಸ್ ದಾರಿಮಿ, ಅಶ್ರಫ್ ಹನೀಫಿ, ಜಬ್ಬಾರ್ ಅಶ್ಶಾಫಿ, ಸೇಕುಞಿ ಕಡಂಬಿಲ, ಮುಹಮ್ಮದ್ ಕೋಟ್ರಸ್, ಅಬ್ದುಲ್ಲಾ ಕೆ.ಎಂ, ಅಶ್ರಫ್ ಕೊಲ್ಲೆಜಾಲು, ಯು.ಟಿ ಫಯಾಜ್ ಉಪ್ಪಿನಂಗಡಿ, ಯೂಸುಫ್ ಹಾಜಿ ಫೆಧಮಲೆ, ಯಾಕೂಬ್ ಹುಸೈನ್ ಅಗ್ನಾಡಿ, ಕಾಸಿಂ ಕೊರಿಂಜ, ಶರೀಫ್ ಮಾಸ್ಟರ್, ಅಬ್ಬಾಸ್ ಹಾಜಿ ಮುರಿಯಾಲ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಮೀಲಾದ್ ಪ್ರಯುಕ್ತ ನಡೆದ ಸ್ಪರ್ಧಾ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ನಪ್ಸೀರಾ ಹಾಗೂ ಸಹಶಿಕ್ಷಕಿ ಯರಾದ
ಫಾತಿಮಾ ಜಂಶೀರಾ, ಹಬೀಬಾ ಸುನೈನಾ, ಉಮ್ಮುಲ್ ಖೈರ್ ಆಮಿನಾ, ಮೈಮೂನಾ ಮಿಶ್ರಿಯಾ ಆಯಿಷಾ, ರಂಶೀನಾ, ನಡೆಸಿಕೊಟ್ಟರು.

ಮಹಮ್ಮದ್ ಅಶ್ರಫ್ ಉರುವಾಲುಪದವು ಅಧ್ಯಕ್ಷತೆ ವಹಿಸಿದ್ದರು . ಅಬ್ದುಲ್ ಶುಕೂರ್ ದಾರಿಮಿ ಸ್ವಾಗತಿಸಿದರು.

Related posts

ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಸುಲ್ಕೇರಿ ಒಕ್ಕೂಟದ ಸಹಯೋಗದಿಂದ ಜಲಸಂರಕ್ಷಣೆಯ ಅರಿವು ಕಾರ್ಯಕ್ರಮ

Suddi Udaya

ಧರ್ಮಸ್ಥಳ: ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಹಾಗೂ ಖ್ಯಾತ ಚಲನಚಿತ್ರ ನಟ ಸಿಹಿಕಹಿ ಚಂದ್ರು ರವರಿಂದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

Suddi Udaya

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವ: ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ನಾಲ್ಕೂರು: ಕೆಲ ಸಮಯದಿಂದ ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಕಾಟ ಮನೆಯ ಸಾಕು ಪ್ರಾಣಿಗಳ ಮೇಲೆ ದಾಳಿ, ಭಯಬೀತರಾದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಮಾಹಿತಿ, ಸ್ಪಂದನೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ಧರ್ಮ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಪ್ರಸಾದ್ ಬೆಳಾಲು ಆಯ್ಕೆ

Suddi Udaya
error: Content is protected !!