ಧರ್ಮರಕ್ಷಾ ವೇದಿಕೆ ತೋಟತ್ತಾಡಿ ಆಶ್ರಯದಲ್ಲಿ ಎಂಟನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮ

Suddi Udaya

ತೋಟತ್ತಾಡಿ ಅ:9
ಧರ್ಮರಕ್ಷಾ ವೇದಿಕೆ ತೋಟತ್ತಾಡಿ ಆಶ್ರಯದಲ್ಲಿ ಎಂಟನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮವು ಉಜಿರೆ ವೇದಮೂರ್ತಿ ಶ್ರೀ ವಾದಿರಾಜ ಶಬರಾಯ ಇವರ ನೆತೃತ್ವದಲ್ಲಿ ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ (ಎಸ್ಎನ್ ಡಿಪಿ) ಶಾಖೆ ತೋಟತ್ತಾಡಿಯಲ್ಲಿ ಇಂದು ನಡೆಯಿತು, ಕಾರ್ಯಕ್ರಮದಲ್ಲಿ ಬೆಳಿಗ್ಗೆ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠಾಪನೆ ನಂತರ ಭಜನಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ.ವಂದನಾ ಎಂ ಇರ್ವತ್ರಾಯ, ನವರಾತ್ರಿಯಲ್ಲಿ ಶ್ರೀ ಶಾರದಾ ದೇವಿಯ ಆರಾಧನೆ ಬಹಳ ವಿಶೇಷವಾದದ್ದು, ಮತ್ತು ಶ್ರೀ ಶಾರದಾ ದೇವಿಯ ಆರಾಧನೆ ಮಹತ್ವವನ್ನು ವಿವರಿಸಿದರು, ಕಾರ್ಯಕ್ರಮದಲ್ಲಿ, ವಿದೂಷಿ ಪ್ರೀಯ ಸತೀಶ್, ಶ್ರೀಮತಿ ಜಯಂತಿ ಚಿದಾನಂದ ಹೊಸಮನೆ,ಎಸ್ ಎನ್ ಡಿ ಪಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸಿಂಧು, ಸದಸ್ಯರಾದ ಶ್ರೀಮತಿ ಮಲ್ಲಿಕಾ,ನೇರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸಜೀತಾ, ಧರ್ಮರಕ್ಷಾ ವೇದಿಕೆ ತೋಟತ್ತಾಡಿ ಅಧ್ಯಕ್ಷರಾದ ಪ್ರಸಾದ್ ಎಂ, ಕಾರ್ಯದರ್ಶಿ ಗಣೇಶ್ ಮೊದಲಾದವರಿದ್ದರು, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಂತರ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಬೆಂದ್ರಾಳ ನದಿಯಲ್ಲಿ ಜಲಸ್ತಂಭನ ನಡೆಯಿತು.

Leave a Comment

error: Content is protected !!