ಅ.23, 26 ರಂದು ಬಳಂಜ ಶಾಲೆಯಲ್ಲಿ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟ

Suddi Udaya

ಬಳಂಜ:ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಬಳಂಜ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಮಟ್ಟದ ಕ್ರೀಡಾ ಕೂಟ, ಸಂಘಟನಾ ಸಮಿತಿ ಬಳಂಜ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ, ಶಿಕ್ಷಣ ಟ್ರಸ್ಟ್ ಅಮೃತ ಮಹೋತ್ಸವ ಸಮಿತಿ, ಹಳೆವಿದ್ಯಾರ್ಥಿ ಸಂಘ , ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾ ಕೂಟ ಅ. 23,26 ರಂದು ನಡೆಯಲಿದೆ.

ಆ ಪ್ರಯುಕ್ತ ಶಾಲೆಯಲ್ಲಿ ಪೂರ್ವಾಬಾವಿಯಾಗಿ ಸಭೆಯನ್ನು ಕರೆದು ಚರ್ಚಿಸಲಾಯಿತು.ಸಭೆಯಲ್ಲಿ ಕ್ರೀಡಾಕುಯಟದ ಯಶಸ್ವಿಗೆ ಸಮಿತಿ ರಚಿಸಲಾಯಿತು.ಕ್ರೀಡಾ ಸಮಿತಿ ಗೌರವಾಧ್ಯಕ್ಷರಾಗಿ ಕೆ.ವಸಂತ ಸಾಲಿಯಾನ್, ಅಧ್ಯಕ್ಷರಾಗಿ ಬಿ ಪ್ರಮೋದ್ ಕುಮಾರ್, ಉಪಾಧ್ಯಕ್ಷರಾಗಿ ಸತೀಶ್ ದೇವಾಡಿಗ,ಕೋಶಾಧಿಕಾರಿಯಾಗಿ ಸುರೇಶ್ ಹೇವ,ಕಾರ್ಯದರ್ಶಿಗಳಾಗಿ ಶಾಲಾ ಮುಖ್ಯೋಪಾಧ್ಯಾಯರುಗಳನ್ನು ಆಯ್ಕೆಗೊಳಿಸಲಾಯಿತು.

ಸಭೆಯಲ್ಲಿ ಶಾಲಾಭಿವೃದ್ದಿ ಸಮಿತಿ,ಶಿಕ್ಷಣ ಟ್ರಸ್ಟ್,ಅಮೃತ ಮಹೋತ್ಸವ ಸಮಿತಿ,ಹಳೆ ವಿದ್ಯಾರ್ಥಿ ಸಂಘ, ಅದ್ಯಾಪಕ ವೃಂದ, ದೈಹಿಕ‌‌ ಶಿಕ್ಷಣ ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!