30.4 C
ಪುತ್ತೂರು, ಬೆಳ್ತಂಗಡಿ
June 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

ಬೆಳ್ತಂಗಡಿ : ಯುಗಾದಿ ನವ ಪಲ್ಲವಕೆ ನಾಂದಿ ತಂಡದಿಂದ ಅ.20 ರಂದು ಧರ್ಮಸ್ಥಳದ ಗ್ರಾ.ಪಂ ಸಮುದಾಯ ಭವನ (ನೇತ್ರಾವತಿ ಸಭಾಂಗಣ)ದಲ್ಲಿ ಸ್ನೇಹಕೂಟ ನಡೆಯಲಿರುವುದು.

ಸ್ನೇಹಕೂಟದ ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ವಿಜಯ ಕುಮಾರ್ ಜೈನ್ ಅಳದಂಗಡಿ ನೆರವೇರಿಸಲಿದ್ದಾರೆ. ಹಿರಿಯ ಸಾಹಿತಿಗಳಾದ, ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶ್ಯಾಮಲಾ ಗೋಪಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಉಪಸ್ಥಿತಿ ಹಿರಿಯ ಸಾಹಿತಿಗಳಾದ ಪೆರ್ಮುಖ ಸುಬ್ರಹ್ಮಣ್ಯ ಭಟ್, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀಮತಿ ಕಲಾವತಿ ಪ್ರಕಾಶ್, ಶರಣ ಬಸಪ್ಪ ಕುಂಬಾರ್,ಶ್ರೀಮತಿ ಡಾ.ಶ್ವೇತಾ ಪ್ರಕಾಶ್, ಹೆಚ್.ಡಿ.ದಿವಾಕರ್, ಭಾಗವಹಿಸಲಿದ್ದಾರೆ.

ಶ್ರೀಮತಿ ಜ್ಞಾನೇಶ್ವರಿ ಉಡುಪ ಮತ್ತು ಶ್ರೀಮತಿ ಸೌಮ್ಯ ಗುರು ಕಾರ್ಲೆ ಯುಗಾದಿ ಧ್ಯೇಯ ಗೀತೆ ಗಾಯನ ಮಾಡಲಿದ್ದಾರೆ.


ಈ ಸಂದರ್ಭದಲ್ಲಿ ಹಲವಾರು ಸಾಹಿತಿಗಳ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಮಾರಂಭದ ವ್ಯವಸ್ಥಾಪಕರಾದ
ಬೆಳ್ತಂಗಡಿ ತಾಲೂಕಿನ ಆಶಾ ಅಡೂರ್, ಶ್ರೀಮತಿ ಶ್ರೀಲತಾ ಭಾರ್ಗವ,ಶ್ರೀಮತಿ ವೀಣಾ ಉಮೇಶ್,ಶ್ರೀಮತಿ ಸುಜಾತ ಭಟ್, ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಲಿದ್ದಾರೆ. ಆಡಳಿತ ಮಂಡಳಿಯ ಎಂದು ಯುಗಾದಿ ನವ ಪಲ್ಲವಕೆ ನಾಂದಿ ಆಡಳಿತ ಮಂಡಳಿಯ ಶ್ರೀನಾಗ್ ಪಿ.ಎಸ್.ಹೊನ್ನಾವರ ತಿಳಿಸಿದ್ದಾರೆ.

Related posts

ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಗೆ ರೂ.31 ಸಾವಿರ ಹಸ್ತಾಂತರ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ: ವಿಜ್ಞಾನ-ವಿಸ್ಮಯ ಮತ್ತು ಕುತೂಹಲ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಕಾರ್ಯಾಗಾರ

Suddi Udaya

ಅ.4: ಕೊಕ್ಕಡ ಜೇಸಿಐಗೆ ಜೇಸಿ ವಲಯಾಧ್ಯಕ್ಷರ ಭೇಟಿ

Suddi Udaya

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕನ್ನಡ ಪ್ರಬಂಧ ಸ್ಪರ್ಧೆ: ಅಂಡಿಂಜೆ ಸ.ಉ. ಪ್ರಾ. ಶಾಲೆಯ ವಿದ್ಯಾರ್ಥಿ ಪ್ರಜ್ಞಾ ಪ್ರಥಮ ಸ್ಥಾನ

Suddi Udaya

ಅರಸಿನಮಕ್ಕಿ: ಶ್ರೀ ಕ್ಷೇತ್ರ ಅರಿಕೆಗುಡ್ಡೆ ವನದುರ್ಗ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಸಭೆ

Suddi Udaya

ಎ.10: ಧರ್ಮಸ್ಥಳ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಮತ್ತು ಪ್ರಥಮ ವರ್ಷದ ಸಂಭ್ರಮ

Suddi Udaya
error: Content is protected !!