25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಅಗಲಿದ ಸಹಕಾರಿ ಧುರೀಣ ಇಚ್ಚಿಲ ಸುಂದರ ಗೌಡರಿಗೆ ನುಡಿನಮನ

ಉಜಿರೆ : ಉಜಿರೆಯ ಇತಿಹಾಸದ ಚಿತ್ರಣ ಬದಲಿಸಿದ  ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಇಚ್ಚಿಲ ಸುಂದರ ಗೌಡರೂ ಓರ್ವರು.  ಸಹಕಾರ,ಉದ್ಯಮ,ರಾಜಕೀಯ  ನೇತಾರರಾಗಿ  ಎಲ್ಲರಲ್ಲಿ ಆತ್ಮೀಯರಾಗಿ  ಅಚ್ಚಳಿಯದ ಹೆಸರು  ಗಳಿಸಿದವರು. . ಎಲ್ಲರೊಂದಿಗೆ ಬೆರೆತು  ಸಾಮಾನ್ಯರ ಕಷ್ಟ ,ಸುಖಗಳಲ್ಲಿ  ಸಹಭಾಗಿಗಳಾಗಿ  ಸಮಾಜದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿದವರು. ಅವರ ಆದರ್ಶ,ಒಳ್ಳೆಯ ಗುಣಗಳನ್ನು ಪಾಲಿಸುವುದೇ ನಾವು  ಅವರಿಗೆ ಸಲ್ಲಿಸಬಹುದಾದ ನಿಜವಾದ ನುಡಿನಮನ .ಅವರು ಯಾವುದೇ ಜಾತಿಗೆ ಸೀಮಿತರಾಗದೆ  ಎಲ್ಲರನ್ನೂ ಕರೆದು ಮಾತನಾಡಿ,ಬಡವರಿಗೆ ಸಹಾಯಮಾಡಿ,ಬಂದವರನ್ನು ಬರಿಗೈಯಲ್ಲಿ ಹಿಂದೆ ಕಳಿಸಿದವರಲ್ಲ. ಕಷ್ಟ,ನಷ್ಟ ಅನುಭವಿಸಿಯೂ  ಸಹಕಾರ,ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅವರು ” ಉಜಿರೆಯ ರತ್ನ “.ಅವರ  ಅಗಲಿಕೆ  ಉಜಿರೆಗೆ ಮಾತ್ರವಲ್ಲ,ಇಡೀ ತಾಲೂಕಿಗೆ ತುಂಬಲಾರದ ನಷ್ಟ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ನುಡಿದರು.           

ಅವರು ಅ 18 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ  ಈಚೆಗೆ ನಿಧನರಾದ ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ,ಉದ್ಯಮಿ, ರಾಜಕೀಯ ಧುರೀಣ ಇಚ್ಚಿಲ ಸುಂದರ ಗೌಡ ರಿಗೆ ನುಡಿನಮನ  ಸಲ್ಲಿಸಿ ಮಾತನಾಡಿದರು.  ಮಾಜಿ ಸಚಿವ ಗಂಗಾಧರ ಗೌಡ  ಅವರು  ಆರೋಗ್ಯದ  ಮಹತ್ವ ಆಸ್ಪತ್ರೆಗೆ ಸೇರಿದಾಗ, ಜೈಲು ಸರಿದಾಗ  ಸ್ವಾತಂತ್ರ್ಯದ  ಮಹತ್ವ ಹಾಗು ಸ್ಮಶಾನ ದಲ್ಲಿ ವೈರಾಗ್ಯ ನೆನಪು ಮೂಡುವುದು ಸಹಜ.  ಇಚ್ಚಿಲ ಸುಂದರ ಗೌಡರು ಎಂದೂ  ಆಸ್ಪತ್ರೆಗೆ ಸೇರಿದವರಲ್ಲ.  ಅವರ ಸಾಧನೆ ಶಾಶ್ವತವಾದುದು.  ಅವರು ಉಜಿರೆಯ ಸೊಸೈಟಿಗೆ ಸರ್ವ ತ್ಯಾಗ ಮಾಡಿದವರು ಎಂದು ನುಡಿದರು.         

 ಕಾಂಗ್ರೆಸ್ ನಾಯಕ ರಕ್ಷತ್ ಶಿವರಾಂ   ಸುಂದರ ಗೌಡರು ಪಕ್ಷದ ಹೆಮ್ಮೆಯ ನಾಯಕರಾಗಿ ಶಾಸಕರಾಗುವ  ಅರ್ಹತೆ  ಹೊಂದಿದ್ದರೂ ,ರಾಜಕೀಯ ಕಾಲಚಕ್ರದಲ್ಲಿದ್ದರೂ  ಜನರ ಸಮಸ್ಯೆಗೆ  ನಿರಂತರ ಪರಿಹಾರ ಒದಗಿಸಿದವರು.  ಉತ್ಸಾಹ,ಲವಲವಿಕೆ, ಅಚಲ ನಂಬಿಕೆಯಿಂದ  ಸಹಕಾರ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದವರು.  ಅವರು ಕುಟುಂಬಕ್ಕೆ ಏನೂ ಮಾಡಿಲ್ಲ. ನಾವು ಅವರ ಕುಟುಂಬದ ಜತೆಗಿರಬೇಕು ಎಂದು ನುಡಿದರು. ಮಾಜಿ ವಿ.ಪ.ಸದಸ್ಯ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್  ಹೈ ಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ವರೆಗೆ  ಜತೆಯಾಗಿ  ಪರಿಚಿತರಾದ  ಸುಂದರ ಗೌಡರು  ಸ್ನೇಹಮಯಿ ,ಸಮಾಜಸೇವೆ,ಉದ್ಯಮದಿಂದ ಜನರ ಪ್ರೀತಿಗೆ ಪಾತ್ರರಾದವರು.  ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಾಗಿ,ಜಿ.ಪಂ ,ಗ್ರಾಮ ಪಂಚಾಯತ್ ಸದಸ್ಯರಾಗಿ,ಅಧ್ಯಕ್ಷರಾಗಿ ಕೆಲಸಮಾಡಿದ ವರು . ಧೈರ್ಯಶಾಲಿಯಾಗಿ   ಸವಾಲನ್ನು  ಎದುರಿಸಿ  ,ಉದ್ಯಮದಲ್ಲಿ ಹಣ ಸಂಪಾದನೆಗಿಂತ  ಹೆಚ್ಚು ಸಾರ್ವಜನಿಕ ಸೇವೆಯಲ್ಲಿ  ಖರ್ಚು ಮಾಡಿದವರು ಎಂದು ನುಡಿನಮನ ಸಲ್ಲಿಸಿದರು. 

ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ವ್ಯಕ್ತಿ ಸಮಾಜದಲ್ಲಿರುವವರ ಒಡನಾಟದಿಂದ  ಸ್ವರ್ಗೀಯರಾದಾಗ  ಜನರ ನುಡಿ,ಪಶ್ಚಾತ್ತಾಪದಿಂದ  ಅವರ ಗುಣದ ಅರಿವಾಗುತ್ತದೆ.   ಮಂಡಲ ಪಂಚಾಯತ್ ನಿಂದ   ಗ್ರಾಮ ಪಂಚಾಯತ್ ವರೆಗಿನ  ಕಳೆದ 3೦ ವರ್ಷಗಳಲ್ಲಿ  ತಾನು ಕಂಡುಕೊಂಡಂತೆ  ಅವರು ಜನಾನುರಾಗಿ ವ್ಯಕ್ತಿಗಳ ಮಧ್ಯೆ  ಗ್ರಾಮದ ಅಭಿವೃದ್ಧಿಯ ಮಹಾನ್ ಚೇತನ .ಅವರು ಕೈಯಾಡಿಸದ ಕ್ಷೇತ್ರವಿಲ್ಲ.  ನೂರಕ್ಕೂ ಹೆಚ್ಚು ಹಸುಗಳನ್ನು ಸಾಕಿ ಹೈನುಗಾರಿಕೆಯಿಂದ ಸಾಧಿಸಬೇಕೆಂಬ ತವಕ ಹೊಂದಿದ್ದು ಇನ್ನಷ್ಟು ಎತ್ತರಕ್ಕೆ ಏರಬೇಕಾದವರು.  ತಾಲೂಕಿನ ಎಂ ಎಲ್ ಎ ಅಭ್ಯರ್ಥಿಯಾಗಬೇಕಾಗಿದ್ದ  ಅವರು  ಉಜಿರೆಗೆ ನೀಡಿದ ಕೊಡುಗೆ ಅನನ್ಯ. .ಅವರು ಗಳಿಸಿಕೊಂಡದ್ದು ಅಪಾರವಾದರೂ ಉಳಿಸಿಕೊಂಡದ್ದು  ಕಡಿಮೆ ಎಂದರು. ಪದ್ಮ ಗೌಡ  ಅವರು ಮಾತನಾಡಿ ಸುಂದರ ಗೌಡ ಅವರು ರಾಜಕೀಯ,ಸಾಮಾಜಿಕ,ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ,  ಚುನಾವಣೆಯ ಸ್ಪರ್ಧೆಯಲ್ಲಿ ಅವರೆದುರು ತಾನು ಸೋತರೂ ಅವರ ಆತ್ಮೀಯತೆ ದೂರವಾಗ್ಲಿಲ್ಲ.  ಅವರ  ಅಗಲಿಕೆ  ನಂಬಲಸಾಧ್ಯವಾಗಿತ್ತು ಎಂದು ನುಡಿದರು.   

ಕಾರ್ಯಕ್ರಮ  ನಿರೂಪಿಸಿದ   ಉಜಿರೆ ಪ್ರಾ.ಕ್ರ.ಪ.ಸಹಕಾರಿ ಸಂಘದ ಸಿಬಂದಿ ಮೋಹನ ಗೌಡ  ಸುಂದರ ಗೌಡರು 42 ವರ್ಷಗಳ ಕಾಲ ಸಂಘದ  ಸದಸ್ಯರಾಗಿ ,39 ವರ್ಷಗಳ ಕಾಲ ಅಧ್ಯಕ್ಷರಾಗಿ, ಸಹಕಾರಿ ಯೂನಿಯನ್ ಉಪಾಧ್ಯಕ್ಷರಾಗಿ,ನವೋದಯ  ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕರಾಗಿ,ಎ ಪಿ ಎಂ ಸಿ  ಮತ್ತು ರಬ್ಬರ್ ಸೊಸೈಟಿ ನಿರ್ದೇಶಕರಾಗಿ  ಸಮಾಜದಲ್ಲಿ ಬಹುಮುಖ ಸೇವೆ ಸಲ್ಲಿಸಿ,  ಬಡವರ ಮಕ್ಕಳ ಮದುವೆಗೆ  ಆರ್ಥಿಕ ನೆರವಿನ ಸಾಲ ಒದಗಿಸಿ ಉಪಕರಿಸಿ ದವರು  ,  ಚಿನ್ಮಯಿ ಇಂಡಸ್ಟ್ರಿ ಉದ್ಯಮ ಸ್ಥಾಪಿಸಿ  ಸಿಮೆಂಟ್  ದಾರಂದ,ಕಿಟಿಕಿ,ಬಾಗಿಲು  ಉದ್ಯಮವನ್ನು  ರಚಿಸಿ  ಬೆಳೆಸಿದವರು ಎಂದು ನುಡಿದರು.   

ಅಗಲಿದ ಇಚ್ಚಿಲ ಸುಂದರ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ,ಅವರ ದಿವ್ಯಾತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.  ಸಮಾರಂಭದಲ್ಲಿ  ಎಂ ಜಿ ಶೆಟ್ಟಿ,  ರಂಜನ್ ಗೌಡ,  ಶ್ರೀಧರ ಭಿಡೆ, ರಾಜು ಶೆಟ್ಟಿ,ಯೋಗೀಶ್ ಕುಮಾರ್, ಉಜಿರೆ ಗ್ರಾ, ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ  ರವಿಕುಮಾರ್ ಬರಮೇಲು, ಪ್ರವೀಣ್ ಫೆರ್ನಾಂಡಿಸ್,  ತಾಲೂಕಿನ ಅಭಿಮಾನಿಗಳು, ಉಜಿರೆಯ  ನಾಗರಿಕರು, ಸೊಸೈಟಿಯ ನಿರ್ದೇಶಕರು,ಸಿಬ್ಬಂದಿ ವರ್ಗ, ಸುಂದರ ಗೌಡರ  ಮಕ್ಕಳು ಹಾಗೂ ಕುಟುಂಬಸ್ಥರು  ಉಪಸ್ಥಿತರಿದ್ದರು.   

Related posts

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚನೆ: 3ನೇ ಬಾರಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಆಯ್ಕೆ

Suddi Udaya

ಮಂಜೊಟ್ಟಿ : ಜಾಮಿಯಾ ಮಸ್ಜಿದ್ ಜಮಲಾಬಾದ್ ಇದರ ಅಧ್ಯಕ್ಷರಾಗಿ ಹಾಜಿ ಸಯ್ಯದ್ ಹಬೀಬ್ ಸಾಹೇಬ್, ಕಾರ್ಯದರ್ಶಿಯಾಗಿ ಅಬ್ದುಲ್ ಗಫೂರ್ ಆಯ್ಕೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆಯ ಬಗ್ಗೆ ಜಾಗೃತಿ ಅಭಿಯಾನ

Suddi Udaya

ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾ ತಿಂಗಳ ಕಾರ್ಯಕಾರಿ ಸಭೆ: ಮಾಜಿ ಶಾಸಕ ಕೆ. ವಸಂತ ಬಂಗೇರರ ನಿಧನಕ್ಕೆ ಸಂತಾಪ

Suddi Udaya

ಕಡಿರುದ್ಯಾವರ ಜೋಡು ನೆರೋಳು ಮಥಾಯಿ ಪಣಕಾಟು ಪರಂಬಿಲಿ ನಿಧನ

Suddi Udaya

ಶ್ರೀರಾಮ ಕ್ಷೇತ್ರದ ಪೀಠಾಧೀಶ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ ಸಮಾರೋಪ ಸಮಾರಂಭ-ಸೀಮೋಲ್ಲಂಘನ

Suddi Udaya
error: Content is protected !!