July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಭಾರಿ ಮಳೆಗೆ ಅರಸಿನಮಕ್ಕಿಯ ಕಾನದಲ್ಲಿ ಗುಡ್ಡದಿಂದ ರಭಸವಾಗಿ ಬಂದ ನೀರಿನಿಂದ ಮನೆಗೆ ಹಾನಿ

ಅರಸಿನಮಕ್ಕಿ :ಅ. 24ರಂದು ಸಂಜೆ ಸುರಿದ ಭಾರಿ ಮಳೆಗೆ ಅರಸಿನಮಕ್ಕಿಯ ಕಾನ ಎಂಬಲ್ಲಿ ಹತ್ತಿರದ ಗುಡ್ಡದಿಂದ ಬಂದ ನೀರು ತೋಡಿಗೆ ಬಂದು ಅಲ್ಲಿಂದ ರಸ್ತೆಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದ ಪರಿಣಾಮ ಜಾನಕಿ ಎಂಬವರ ಮನೆಗೆ ಹಾನಿ ಉಂಟುಮಾಡಿದ್ದು ಮನೆಯ ವಸ್ತುಗಳು ನೀರಿನಲ್ಲಿ ತೇಲಿ ಹೋದ ಘಟನೆ ನಡೆದಿದೆ.

ಏಕಾಏಕಿ ಬಂದ ನೀರಿನಿಂದಾಗಿ ಮನೆಯಲ್ಲಿದ್ದ ತಾಯಿ, ಮಗಳು ಹಾಗೂ ಮಕ್ಕಳನ್ನು ರಿಕ್ಷಾ ಚಾಲಕರು ನೋಡಿ ಅವರನ್ನು ಪಕ್ಕದ ರಬ್ಬರ್ ಗುಡ್ಡೆಗೆ ಸ್ಥಳಾಂತರಿಸಿದರಿಂದ ಯಾವುದೇ ಪ್ರಾಣಪಾಯವಾಗಲಿಲ್ಲ. ಮನೆಯಲ್ಲಿದ್ದ ಕಡೆಯುವ ಕಲ್ಲು ಹಾಗೂ ಸ್ಕೂಟಿ ಕೂಡ ನೀರಿನಲ್ಲಿ ತೇಲಿ ಹೋಗಿದೆ.

ಇಂದು (ಅ.25 ) ಅರಸಿನಮಕ್ಕಿಯ ರಿಕ್ಷಾ ಚಾಲಕರು ಸೇರಿ ಹಾನಿಯಾದ ಮನೆಯ ದುರಸ್ತಿ ಕಾರ್ಯ ನಡೆಸಿದರು.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಪಿಡಿಒ ಜಯರಾಜ್, ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಗಣೇಶ್ ಹೊಸ್ತೋಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

Suddi Udaya

ನಾಳೆ(ಜೂ.25): ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಅದಾ ಸಾಮೂಹಿಕ ಪ್ರಾರ್ಥನೆ

Suddi Udaya

ಉರುವಾಲು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕುಣಿತಾ ಭಜನಾ ಉದ್ಘಾಟನೆ

Suddi Udaya

ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Suddi Udaya
error: Content is protected !!