September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಭಾರಿ ಮಳೆಗೆ ಅರಸಿನಮಕ್ಕಿಯ ಕಾನದಲ್ಲಿ ಗುಡ್ಡದಿಂದ ರಭಸವಾಗಿ ಬಂದ ನೀರಿನಿಂದ ಮನೆಗೆ ಹಾನಿ

ಅರಸಿನಮಕ್ಕಿ :ಅ. 24ರಂದು ಸಂಜೆ ಸುರಿದ ಭಾರಿ ಮಳೆಗೆ ಅರಸಿನಮಕ್ಕಿಯ ಕಾನ ಎಂಬಲ್ಲಿ ಹತ್ತಿರದ ಗುಡ್ಡದಿಂದ ಬಂದ ನೀರು ತೋಡಿಗೆ ಬಂದು ಅಲ್ಲಿಂದ ರಸ್ತೆಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದ ಪರಿಣಾಮ ಜಾನಕಿ ಎಂಬವರ ಮನೆಗೆ ಹಾನಿ ಉಂಟುಮಾಡಿದ್ದು ಮನೆಯ ವಸ್ತುಗಳು ನೀರಿನಲ್ಲಿ ತೇಲಿ ಹೋದ ಘಟನೆ ನಡೆದಿದೆ.

ಏಕಾಏಕಿ ಬಂದ ನೀರಿನಿಂದಾಗಿ ಮನೆಯಲ್ಲಿದ್ದ ತಾಯಿ, ಮಗಳು ಹಾಗೂ ಮಕ್ಕಳನ್ನು ರಿಕ್ಷಾ ಚಾಲಕರು ನೋಡಿ ಅವರನ್ನು ಪಕ್ಕದ ರಬ್ಬರ್ ಗುಡ್ಡೆಗೆ ಸ್ಥಳಾಂತರಿಸಿದರಿಂದ ಯಾವುದೇ ಪ್ರಾಣಪಾಯವಾಗಲಿಲ್ಲ. ಮನೆಯಲ್ಲಿದ್ದ ಕಡೆಯುವ ಕಲ್ಲು ಹಾಗೂ ಸ್ಕೂಟಿ ಕೂಡ ನೀರಿನಲ್ಲಿ ತೇಲಿ ಹೋಗಿದೆ.

ಇಂದು (ಅ.25 ) ಅರಸಿನಮಕ್ಕಿಯ ರಿಕ್ಷಾ ಚಾಲಕರು ಸೇರಿ ಹಾನಿಯಾದ ಮನೆಯ ದುರಸ್ತಿ ಕಾರ್ಯ ನಡೆಸಿದರು.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಪಿಡಿಒ ಜಯರಾಜ್, ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಗಣೇಶ್ ಹೊಸ್ತೋಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

ಬೆಳ್ತಂಗಡಿ ವಾಣಿ ಆಂ.ಮಾ. ಪ್ರೌ. ಶಾಲಾ ಮಂತ್ರಿಮಂಡಲ ರಚನೆ: ಶಾಲಾ ನಾಯಕಿಯಾಗಿ ಕು.ನವಮಿ ಎಮ್ ಆಯ್ಕೆ

Suddi Udaya

ಶಿಕ್ಷಕಿ ಮಾಲತಿ ಶಿಶಿಲ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ

Suddi Udaya

ಉಜಿರೆ ಅಮೃತ್‌ ಸಿಲ್ಕ್ ನಲ್ಲಿ ಮನ್ಸೂನ್ (ಆಷಾಢ) ಸೇಲ್ಸ್: ಪ್ರತಿ ಖರೀದಿಯ ಮೇಲೆ ಶೇ.10 ರಿಂದ 50 ರಷ್ಟು ಡಿಸ್ಕೌಂಟ್

Suddi Udaya

ಕುಂಟಿನಿ ಮದ್ರಸದಲ್ಲಿ 79 ನೇ ಸ್ವಾತಂತ್ರ್ಯ ಸಂಭ್ರಮ ಆಚರಣೆ

Suddi Udaya

ಜ.10-11: ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ನಾಗಬ್ರಹ್ಮಮಂಡಲೋತ್ಸವ

Suddi Udaya

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವೀನ್ ಮತ್ತು ಹರಿಣಾಕ್ಷಿ ನವ ದಂಪತಿಗಳಿಂದ ನಂದಗೋಕುಲ ಗೋಶಾಲೆಗೆ ರೂ 1.47 ಲಕ್ಷ ಗೋ ನಿಧಿ ಹಸ್ತಾಂತರ

Suddi Udaya
error: Content is protected !!