September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ನಡ ಸೇನೆ -ಕರ್ನಾಟಕ ಬೆಳ್ತಂಗಡಿ ಸಮಿತಿ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಳ್ತಂಗಡಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ “ ಕನ್ನಡ ಸೇನೆ -ಕರ್ನಾಟಕ” ಬೆಳ್ತಂಗಡಿ ಸಮಿತಿಯಿಂದ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ತಾಲೂಕು ಆಸ್ಪತ್ರೆಯಲ್ಲಿ ಮೂರು ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಸಂದರ್ಶಿಸಿದ ಸಮಿತಿ, ಆಸ್ಪತ್ರೆಯಲ್ಲಿನ ಚಿಕಿತ್ಸೆ, ಸೇವೆ ಮತ್ತು ಶುಚಿತ್ವದ ಬಗ್ಗೆ ಎಲ್ಲಾ ಚಿಕಿತ್ಸೆ ಪಡೆಯುವವರಲ್ಲಿ ತೃಪ್ತಿಕರ ಮನೋಭಾವನೆಯನ್ನು ಕಂಡು, ಸಂತಸ ವ್ಯಕ್ತಪಡಿಸಿ ಎಲ್ಲರೂ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಇದೇ ಸಂದರ್ಭದಲ್ಲಿ ಆಂಬುಲೆನ್ಸ್‌ನಲ್ಲಿ ವೃದ್ಧೆಯೊಬ್ಬರು ಸರಕಾರಿ ಆಸ್ಪತ್ರೆಗೆ ಬಂದ ವೇಳೆ ಆಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸೆಗೆ ಅವರನ್ನು ಒಳಪಡಿಸುವ ಬಗ್ಗೆ ಕಾಳಜಿ ವಹಿಸಿಕೊಳ್ಳುತ್ತಿರುವುದು ಕಂಡು ಬಂತು. ವೈದ್ಯರಾದ ಡಾ|ಪ್ರೇಮ್ ಮತ್ತು ಸಿಬಂದಿ ವರ್ಗದವರ ಉಪಸ್ಥಿತಿಯಲ್ಲಿ ಕನ್ನಡ ಸೇನೆ ಹಿರಿಯ ಮುಖಂಡ ಇಬ್ರಾಹಿಂ ಮತ್ತು ಶಂಶುದ್ದೀನ್ ಪಣಕಜೆ, ಕೃಷ್ಣ ಮತ್ತು ಎಡ್ವಿನ್ ಮಾಲಾಡಿ, ಅಶ್ರಫ್ ಬಸವನಗುಡಿ ಸಹಕಾರದೊಂದಿಗೆ ಸಮಿತಿ ಪರವಾಗಿ ತಾಲೂಕು ಅಧ್ಯಕ್ಷ ಗುರುಪ್ರಸಾದ್ ಮಾಲಾಡಿಯವರು ಹಣ್ಣು ಹಂಪಲು ವಿತರಿಸಿ ಶುಭಾಶಯ ಕೋರಿದರು.

Related posts

ನಿಟ್ಟಡೆ: ಬೀಯದಡಿ ನಿವಾಸಿ ಜಾನಕಿ ನಿಧನ

Suddi Udaya

ಮುಂಡಾಜೆ ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ :ರೂ .2ಲಕ್ಷಕ್ಕೂ ಅಧಿಕ ನಷ್ಟ

Suddi Udaya

ಬಂದಾರು :ಪೆರ್ಲ -ಬೈಪಾಡಿ ನಿವಾಸಿ ನಾರಾಯಣ ಪೂಜಾರಿ ನಿಧನ

Suddi Udaya

ಮಾಜಿ ಶಾಸಕ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಮೊಬೈಲ್ ರಿಟೇಲರ್ ಅಸೋಸಿಯೇಷನ್ ನಿಂದ ನಾಳೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಶ್ರದ್ಧಾಂಜಲಿ ಅರ್ಪಣೆ

Suddi Udaya

ನಡ ಬೇಲಿ ವಿವಾದ: ಜೀವ ಬೆದರಿಕೆ ವಿರುದ್ಧ ಠಾಣೆಗೆ ದೂರು

Suddi Udaya

ಜಿಲ್ಲಾ ಮಟ್ಟದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ: ಯಂಗ್ ಚಾಲೆಂಜರ್ಸ್ ತಂಡ ದ್ವಿತೀಯ

Suddi Udaya
error: Content is protected !!