23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ 13ನೇ ಶಾಖೆ ಶುಭಾರಂಭ: ಆರ್ಥಿಕ ವರ್ಷದಲ್ಲಿ 350 ಕೋಟಿ ವಹಿವಾಟನ್ನು ತಲುಪುವ ಗುರಿ: ಅಮೋಘ ಜೆ.ರೈ

ಬೆಳ್ತಂಗಡಿ:1994ರಲ್ಲಿ ಪ್ರಾರಂಭಗೊಂಡ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ 13ನೇ ಶಾಖೆಯು ಬೆಳ್ತಂಗಡಿಯ ಹನುಮಾನ್ ಕಾಂಪ್ಲೆಕ್ಸ್, ಬಾಳಿಗ ಕಟ್ಟಡದ ಒಂದನೇ ಮಹಡಿಯಲ್ಲಿ ನ.8 ರಂದು ಉದ್ಘಾಟನೆಗೊಂಡಿತು.

ಸಂಸ್ಥೆಯ ಉದ್ಘಾಟನೆಯನ್ನು ಶಾರದಾ ಟ್ರೇಡರ್ಸ್ ಮಾಲಿಕ ರಮೇಶ್ ಭಟ್ ನೇರವೇರಿಸಿ ಶುಭ ಕೋರಿದರು.

ಸಿಇಒ ಅಮೋಘ ಜೆ.ರೈ ದೀಪ ಬೆಳಗಿಸಿ ಮಾತನಾಡಿ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಹಣಕಾಸು ಕ್ಷೇತ್ರದಲ್ಲಿ 30 ವರ್ಷಗಳ ಅನುಭವದೊಂದಿಗೆ ಕರ್ನಾಟಕ ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಹಕರನ್ನು ಹೊಂದಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಡಿಜಿಎಮ್ ಶ್ರೀವತ್ಸರಾಜ್, ರಿಜಿನಲ್ ಮ್ಯಾನೇಜರ್ ಉದಯ್ ಶ್ಯಾಮ್, ಬ್ರಾಂಚ್ ಮ್ಯಾನೇಜರ್ ಪ್ರದೀಪ್ ಬಂಗೇರ, ಚಾರ್ಟೆಡ್ ಅಕೌಂಟೆಂಟ್ ಹೇಮಂತ್ ಪೈ, ಬೆಳ್ತಂಗಡಿ ಹನುಮಾನ್ ಕಾಂಪ್ಲೆಕ್ಸ್ ಮಾಲಕ ಯಶವಂತ ಬಾಳಿಗ,
ತಾ.ಪಂ ಮಾಜಿ ಸದಸ್ಯರು ಶಶಿಧರ ಕಲ್ಮಂಜ,ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀ‌ನ್ ನೆರಿಯ,ವಕೀಲ ಪ್ರಶಾಂತ್, ಸ್ಪಂದನ ಲ್ಯಾಬೋರೇಟರಿ ಮುಖ್ಯಸ್ಥ ಮೆಲ್ಬಿ, ಪುತ್ತೂರು ಬ್ರಾಂಚ್ ಮ್ಯಾನೇಜರ್ ಶಿವ ಕುಮಾರ್, ಸಂಜೀವ ಎ ಬೆಳ್ತಂಗಡಿ, ಭಾರತ್ ಆಟೋ ಕಾರ್ಸ್ ನ ಪ್ರವೀಣ್ ಕುಮಾರ್ ಹೆಚ್.ಎಸ್, ಶ್ರೀರಾಮ್ ಪೈನಾನ್ಸ್ ನ ಮ್ಯಾನೇಜರ್ ಸುಭಾಶ್ ಪುದ್ದರಬೈಲು, ಪ್ರಮೋದ್ ಬಂಗೇರ ನೆರಿಯ ಮೊದಲಾದವರು ಉಪಸ್ಥಿತರಿದ್ದರು.

Related posts

ಉಜಿರೆ: ಎಸ್. ಡಿ. ಎಂ ಅಂತರ್ ಕಾಲೇಜು ಗೂಡುದೀಪ ಸ್ಪರ್ಧೆ

Suddi Udaya

ಅರಣ್ಯ ಒತ್ತುವರಿ ಮತ್ತು ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ತೆರವುಗೊಳಿಸುವಂತಿಲ್ಲ: ಪ್ರತಾಪ್ ಸಿಂಹ ನಾಯಕ್

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಆಚರಣೆ

Suddi Udaya

ಕಳೆಂಜ ಕ್ರಿಶ್ಚಿಯನ್  ಬ್ರದರ್‍ಸ್ ಸಂಘದ ವತಿಯಿಂದ ವೈದ್ಯಕೀಯ ನೆರವು

Suddi Udaya

ಕಲ್ಲೇರಿ: ನಿಸರ್ಗ ರಿಕ್ಷಾ ಚಾಲಕ – ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ರವರ ಮನೆಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!