
ಅರಸಿನಮಕ್ಕಿ: ಇಲ್ಲಿಯ ಕಾನ ಸಮೀಪ ಇನ್ನೋವಾ ಕಾರು ಬುಲೆಟ್ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಡಿಕ್ಕಿಯ
ಪರಿಣಾಮ ಬುಲೆಟ್ ಬೈಕ್ ಚಲಾಯಿಸುತ್ತಿದ್ದ ಪುತ್ತೂರಿನ ಅಂಬುಜಾ ಸಿಮೆಂಟ್ ಕಂಪನಿಯ ಪ್ರಮೋಟರ್ ಮಿಥುನ್ ಅವರ ಬಲಕಾಲಿಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ೧೦೮ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೋವಾ ಕಾರು ಮಂಗಳೂರಿನ ಖ್ಯಾತ ಉದ್ಯಮಿ ಎ.ಸಿ. ಕುರಿಯನ್ ಅವರಿಗೆ ಸೇರಿದ್ದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪಘಾತ ನಡೆದರೂ ಕಾರು ನಿಲ್ಲಿಸದೇ ಪರಾರಿಯಾಗಿದ್ದು, ಎಂಜಿರದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.













