July 24, 2026
ಜಿಲ್ಲಾ ಸುದ್ದಿ

ಉಜಿರೆಯಲ್ಲಿ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್ ಉದ್ಘಾಟನೆ

  • ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 8,9 ಹಾಗೂ 10ನೇ ತರಗತಿಯ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಬೆಳ್ತಂಗಡಿ : ರೋಟರಿ ಇಂಟರಾಕ್ಟ್ ಜಿಲ್ಲೆ 3181 ನ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್ – 2024ನ್ನು ನ.17ರಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಇಂಟರಾಕ್ಟ್ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ರೊ. ವಿಕ್ರಂದತ್ತ, ಜಿಲ್ಲಾ ಡಿಐಆರ್ ಲಿಖಿತ, ಡಿಸ್ಟ್ರಿಕ್ಟ್ ಗವನ೯ರ್ ಇಲೆಕ್ಟ್ ರಾಮಕೃಷ್ಣ, ಡಿಸ್ಟ್ರಿಕ್ಟ್ ಗವನ೯ರ್ ನಾಮಿನಿ ಸತೀಶ್ ಬೊಳಾರ್, ಡಿಸ್ಟ್ರಿಕ್ಟ್ ಕೌನ್ಸಿಲರ್ ದೇವದಾಸ್, ಕ್ಲಬ್ ನ ಎ.ಜಿ ಮಹಮ್ಮದ್ ವಳವೂರು ಮತ್ತು ಜಯರಾಮ, ಜಿಲ್ಲಾ ಕಾಯ೯ದಶಿ೯ ವಿತೇಶ್ ಬಾಳಿಗಾ, ಝೊನಲ್ ಲೆಫ್ಟಿನೆಂಟ್ ಮನೋರಮಾ, ಇಂಟರ್ ಚೇಯರ್ ಮೆನ್ ಡಾ.ಜಯಕುಮಾರ್ , ಬೆಳ್ತಂಗಡಿ ರೋಟರಿ ಕಾಯ೯ದಶಿ೯ ಸಂದೇಶ ರಾವ್ ಭಾಗವಹಿಸಿದ್ದರು.ರೋ. ಪೂರನ್ ವರ್ಮ ಅಧ್ಯಕ್ಷರು ರೋಟರಿ ಕ್ಲಬ್, ಬೆಳ್ತಂಗಡಿ ಸ್ವಾಗತಿಸಿದರು.
ರೋಟರಿಯ ಜಿಲ್ಲೆಯ ವಿವಿಧ ಪದಾಧಿಕಾರಿಗಳುಭಾಗವಹಿಸಿದ್ದಾರೆ.

ಯೂತ್ ಕಾರ್ನಿವಾಲ್ ಪ್ರಯುಕ್ತ ನ.16 ರ ಸಂಜೆ 5 ಗಂಟೆಯಿಂದ ವಿಷಯಾಧಾರಿತ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ ನಡೆಯಿತು .ಜೊತೆಗೆ ಹಾಡು, ರಸಪ್ರಶ್ನೆ, ಭಾಷಣ ಸ್ಪರ್ಧೆ, ಛದ್ಮವೇಷ ಹಾಗೂ ಪ್ರಬಂಧ ಬರಹ ಸ್ಪರ್ಧೆಗಳು ನಡೆಯಿತು.
ಇದರ ಜೊತೆಗೆ ವ್ಯಕ್ತಿತ್ವ ವಿಕಸನ ಶಿಬಿರಗಳು, ಇಂಟರಾಕ್ಟರ್-ಗಳ ಕೌಶಲ್ಯ ಪ್ರದರ್ಶಿಸುವ ವಸ್ತುಪ್ರದರ್ಶನ ಹಾಗೂ ವೈವಿಧ್ಯಮಯ ಆಹಾರದ ವ್ಯವಸ್ಥೆ. ಅಂತೆಯೇ ಯೂತ್ ಕಾರ್ನಿವಾಲ್ ಪುಯುಕ್ತ ಲಕ್ಕಿ ಗೇಮ್ಸ್, ಕರಾವಳಿಯ ಸಾಂಪ್ರದಾಯಿಕ ಆಟಗಳ ಸ್ಪರ್ಧೆ ಮೊದಲಾದ ಚಟುವಟಿಕೆಗಳನ್ನು ಕೂಡಾ ನಡೆಯಲಿದೆ.

ಬೆಳ್ತಂಗಡಿಯ ರೋಟರಿ ಕ್ಲಬ್ ಆಯೋಜಿಸಿರುವ ಈ ಯೂತ್ ಕಾರ್ನಿವಾಲ್-ನಲ್ಲಿ ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 8,9 ಹಾಗೂ 10ನೇ ತರಗತಿಯ ಸುಮಾರು 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

Related posts

ಬಾನಾಡಿಗಳ ಬಾಯಾರಿಕೆ ಇಂಗಿಸಲು ಎಸ್ ಡಿ ಎಮ್ ನಲ್ಲಿ ವಿಶೇಷ ಯೋಜನೆ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಮೇ.13: ಸುರತ್ಕಲ್ ಎನ್‌ಐಟಿಕೆಯಲ್ಲಿ ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ: ಸ್ಟ್ರಾಂಗ್ ರೂಮ್‌ಗೆ ಕೇಂದ್ರೀಯ ಅರೆಸೇನಾ ಪಡೆಯಿಂದ ಬಿಗು ಭದ್ರತೆ

Suddi Udaya

ಎ.18: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ನಾಮಪತ್ರ ಸಲ್ಲಿಕೆ

Suddi Udaya

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ:ಆರೋಪಿಗೆ ನ್ಯಾಯಾಂಗ ಬಂಧನ

Suddi Udaya

ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಮೂರನೇ ಶನಿವಾರ ಬ್ಯಾಗ್ ರಹಿತ ದಿನ

Suddi Udaya
error: Content is protected !!