24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ: ರಾಷ್ಟ್ರೀಯ ತುಳು ಗುಡಿಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕೆಸರು ಗದ್ದೆ ಕಾರ್ಯಕ್ರಮ

ಧರ್ಮಸ್ಥಳ : ರಾಷ್ಟ್ರೀಯ ತುಳು ಗುಡಿಗಾರರ ಸಂಘ ದಕ್ಷಿಣ ಕನ್ನಡ ಜಿಲ್ಲೆ -ಉಡುಪಿ ಜಿಲ್ಲೆ ಕಟ್ಟದಬೈಲು ಧರ್ಮಸ್ಥಳ ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮ ನ.17 ರಂದು ಶ್ರೀ ರಾಮಭಜನಾ ಮಂದಿರ ಕಟ್ಟದಬೈಲು ಇಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ರಾಷ್ಟ್ರೀಯ ತುಳು ಗುಡಿಗಾರ್ ಸಂಘದ ಅಧ್ಯಕ್ಷ ರವೀಂದ್ರ ಗುಡಿಗಾರ್ ವಹಿಸಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ತುಳು ಗುಡಿಗಾರ್ ಸಂಘ ಉಪಾಧ್ಯಕ್ಷರಾದ ಮಂಜುನಾಥ ಗುಡಿಗಾರ್ ಕಟ್ಟದಬೈಲು, ಶಾಂತಿರಾಜ್ ಗುಡಿಗಾರ್ ಅಳದಂಗಡಿ, ಜೊತೆ ಕಾರ್ಯದರ್ಶಿ ಆದರ್ಶ ಗುಡಿಗಾರ್, ಕೋಶಾಧಿಕಾರಿ ಕವಿತಾ ರಾಜೇಂದ್ರ ಗುಡಿಗಾರ್ ಅಂತರಬೈಲು, ನಿರ್ದೇಶಕರಾದ ರಮೇಶ್ ಗುಡಿಗಾರ್ ಅಂತರಬೈಲು, ಉದಯ ಗುಡಿಗಾರ್, ಮುಂಬೈ, ಗಣೇಶ ಗುಡಿಗಾರ್ ನಾವೂರು, ದೇವಿಪ್ರಸಾದ್ ಎನ್. ಗುಡಿಗಾರ್ ಉಡುಪಿ, ಚಂದ್ರಶೇಖರ ಗುಡಿಗಾರ್ ಸವಣಾಲು, ಪ್ರಮೋದ್ ಗುಡಿಗಾರ್ ಉಡುಪಿ, ಸತ್ಯನಾರಾಯಣ ಗುಡಿಗಾರ್ ಅಂತರಬೈಲು, ವಿಶ್ವೇಶ್ ಗುಡಿಗಾರ್ ಅಂತರಬೈಲು ಉಪಸ್ಥಿತರಿದ್ದರು.

ಈ ವೇಳೆ ಮಕ್ಕಳಿಗೆ ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಂಜೆ ನಡೆದ ಸಮಾರೋಪದಲ್ಲಿ ಹಲವು ಗಣ್ಯರು ಭಾಗವಹಿಸಿ ಆಟೋಟ ಸ್ಪರ್ಧೆಯಲ್ಲಿ ಜಯಶಾಲಿಯಾದ ಎಲ್ಲಾ ಸ್ಪರ್ಧಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು..

ಈ ಸಂದರ್ಭದಲ್ಲಿ ರಾಷ್ಟ್ರೀಯ ತುಳು ಗುಡಿಗಾರರ ಸಂಘ ಸರ್ವ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ಉಗ್ರಾಹ ಮುಹೂರ್ತ, ವಿವಿಧ ಗ್ರಾಮಗಳಿಂದ ಆಗಮಿಸಿದ ತರಕಾರಿ, ಬೊಂಡ, ಅಕ್ಕಿ, ಅಡಿಕೆ, ತೆಂಗು ಸಮರ್ಪಣೆ,

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಗಡಾಯಿಕಲ್ಲು ಚಾರಣ: ತಾತ್ಕಾಲಿಕ ನಿಷೇಧ

Suddi Udaya

ನಾಲ್ಕೂರು: ರಾಮನಗರದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯಿಂದ ರಕ್ಷಾಬಂಧನ ಕಾರ್ಯಕ್ರಮ

Suddi Udaya

ಮಡಂತ್ಯಾರು : ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಕ್ಕೆರಕಾಡು ಪರನೀರು ಕಾಂಕ್ರೀಟ್ ರಸ್ತೆ ಉದ್ಘಾಟನೆ

Suddi Udaya

ಮಡಂತ್ಯಾರು: ಬುಲೆಟ್ ಟ್ಯಾಂಕರ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿ

Suddi Udaya
error: Content is protected !!