ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಶಾರದಾ ಕುಟುಂಬ ವಿಕಸನ ಮಂಡಳಿ ವತಿಯಿಂದ ‘ವಿದ್ಯಾರ್ಥಿ ಸಬಲೀಕರಣ ಮತ್ತು ರಕ್ಷಾನಿಧಿ’ ಕಾರ್ಯಯಾನ ಉದ್ಘಾಟನೆ

ಬೆಳ್ತಂಗಡಿ : ಶಾರದಾ ಕುಟುಂಬ ವಿಕಸನ ಮಂಡಳಿ, ಕೆ.ಸಿ.ಇ ಸಂಸ್ಥೆ ಪುತ್ತೂರು ಜಿಲ್ಲಾ ಮಾತೃ ಸಮನ್ವಯ ಸಮಿತಿ ದ. ಕ
ತಾಲೂಕು ಕಾರ್ಯ ನಿರ್ದೇಶಕರ ಸಂಯುಕ್ತ ಘಟಕ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸಂಚಾಲಕತ್ವದಲ್ಲಿ ಪ್ರಗತಿ ಮಹಿಳಾ ಮಂಡಲ ಉಜಿರೆ ಇದರ ಸಹಕಾರದೊಂದಿಗೆ ನನ್ನ ವಿದ್ಯೆ, ನನ್ನ ಪ್ರತಿಭೆ, ನನ್ನ ಸಾಧನೆ, ನನ್ನ ಹಕ್ಕು ಎಂಬ ದ್ಯೇಯ ವಾಕ್ಯದೊಂದಿಗೆ ಆಯೋಜಿಸಿರುವ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರಾಥಮಿಕ ಯೋಜನೆಯ ವಿದ್ಯಾರ್ಥಿ ಪ್ರತಿಭಾ ಸದಸ್ಯರ ನೋಂದಣಿ ಅಭಿಯಾನ ಮತ್ತು ರಕ್ಷಾನಿಧಿ ಕಾರ್ಯಯಾನದ ಬೆಳ್ತಂಗಡಿ ತಾಲೂಕು ವಿಭಾಗೀಯ, ಉಜಿರೆ ಗ್ರಾಮ ವ್ಯಾಪ್ತಿ
ಉದ್ಘಾಟನೆ ಮತ್ತು ದೀಪಪ್ರಜ್ವಲನೆ ಕಾರ್ಯಕ್ರಮ ಡಿ. 01ರಂದು ಪ್ರಗತಿ ಮಹಿಳಾ ಮಂಡಲ ಉಜಿರೆ ಇಲ್ಲಿ ನಡೆಯಿತು.


ಮಾತೃ ಸಮನ್ವಯ ಸಮಿತಿ, ಶಾ.ಕು. ವಿ. ಮಂಡಳಿ ಇದರ ನಿರ್ದೇಶರಾದ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ಹಾಗೂ ಪ್ರಗತಿ ಮಹಿಳಾ ಮಂಡಲ ಇದರ ಸದಸ್ಯರಾದ ಶ್ರೀಮತಿ ಚೇತನಾ ಉಜಿರೆ ದೀಪ ಬೆಳಗಿಸಿ ಉದ್ಘಾಟಿಸಿದರು.


ಶಾ.ಕು. ವಿ. ಮಂಡಳಿಯ ಸಾಂಸ್ಕೃತಿಕ ವಿಭಾಗ ನಿರ್ದೇಶಕರಾದ ಸುಧೀರ್ ಎಮ್. ಎಸ್ ಪ್ರಾಸ್ತವಿಕ ಮಾತನಾಡಿದರು.
ಮಂಡಳಿಯ ಕಾರ್ಯಾಲಯ ಪ್ರತಿನಿಧಿ ಕು. ನವ್ಯ ಮಂಡಳಿಯ ಕಾರ್ಯಯಾನ ಯೋಜನಾ ಮಾಹಿತಿ ಮಂಡಿಸಿದರು.
ನಂತರ ಮಂಡಳಿಯ ವಿದ್ಯಾರ್ಥಿ ಪ್ರತಿಭಾ ಸದಸ್ಯರು ‘ದೀಪಪ್ರಜ್ವಲನೆ’ ನಡೆಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಪ್ರಗತಿ ಮಹಿಳಾ ಮಂಡಲದ ಸದಸ್ಯರಾದ ಶ್ರೀಮತಿ ದಿವ್ಯ ಸೂರಜ್ ಹಾಗೂ ಶಾರದಾ ಕುಟುಂಬ ವಿಕಸನ ಮಂಡಳಿಯ ಲೆಕ್ಕ ಪರಿಶೋದಕಿ ಶ್ರೀಮತಿ ಸವಿತಾ ಹಾರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ಸ್ವಾಗತಿಸಿ ವಂದಿಸಿದರು. ಶಮಂತ್. ಕೆ. ಸುಬ್ರಮಣ್ಯ ಸಹಕರಿಸಿದರು. ಮಂಡಳಿಯ ಮಾತೃ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ವಿದ್ವತ್ ಜೆಇಇ ಸಾಧಕರಿಗೆ ಕಾಲೇಜು ವತಿಯಿಂದ ಅಭಿನಂದನೆ: 35 ವಿದ್ಯಾರ್ಥಿಗಳ ಪೈಕಿ 21 ಮಂದಿ ಶೇ.90 ಅಧಿಕ ಪರ್ಸೆಂಟೈಲ್ ಪಡೆದ ದಾಖಲೆ

Suddi Udaya

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ: ಬಿರ್ವ ಸಂಜೀವ ಪೂಜಾರಿಯವರಿಂದ ನವರಾತ್ರಿ ಮಹೋತ್ಸವ ಉದ್ಘಾಟನೆ

Suddi Udaya

ನಡ ಗ್ರಾ.ಪಂ ಸದಸ್ಯೆಯಿಂದ ರಸ್ತೆ ದುರಸ್ತಿ ಕಾರ್ಯ

Suddi Udaya

ಬಳಂಜ: ಯುವ ಬಿಲ್ಲವ ವೇದಿಕೆಯಿಂದ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾವಳಿ,ಸನ್ಮಾನ

Suddi Udaya

ಧರ್ಮಸಂರಕ್ಷಣಾ ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್ ಪಕ್ಕದಲ್ಲೇ ಸೌಹಾರ್ದಕ್ಕೆ ಬಾಧಕವಾಗುವಂತಹ ಬರವಣೆಗೆಗಳನ್ನು ಹೊಂದಿರುವ ಬ್ಯಾನರ್ ಅಳವಡಿಕೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲು

Suddi Udaya

ಎಸ್. ಎಸ್.ಎಲ್.ಸಿ ಫಲಿತಾಂಶ: ಮುಂಡಾಜೆ ಅನುದಾನಿತ ಪ್ರೌಢಶಾಲೆಗೆ ಶೇ. 98.24 ಫಲಿತಾಂಶ

Suddi Udaya
error: Content is protected !!