23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ತುಲು ಕಥೆ ಬರಹಗಾರರಿಗೆ ಸುವರ್ಣ ವೇದಿಕೆ; “ಕುದ್ಕ ಬಚ್ಚಿರೆ” ತುಲು ಸಣ್ಣ ಕಥಾ ಸ್ಪರ್ಧೆ: 10 ವಿಜೇತರಿಗೆ ನಗದು ಬಹುಮಾನ

ತುಲು ಕಥೆ ಬರಹಗಾರರಿಗೆ ಮಾಯಿಲು ಫಿಲ್ಮ್ಸ್ ಮತ್ತು ಕಡಲ್ ಸ್ಟುಡಿಯೋಸ್ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ನಿಮ್ಮ ಸ್ವಂತ ಕಥೆಗೆ “ಕುದ್ಕ ಬಚ್ಚಿರೆ” ಎಂಬ ವೇದಿಕೆಯನ್ನು ಸಿದ್ದಪಡಿಸಿ ತುಲು ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.

ಮೂರು ಉತ್ತಮ ಕಥೆಗಳಿಗೆ 3,000ರೂ.ಗಳಂತೆ ಮತ್ತು 7 ಮೆಚ್ಚಿದ ಕಥೆಗಳಿಗೆ 1,500ರೂ. ಗಳಂತೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಆಯ್ದ ಕತೆಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಜ.31ರ ಒಳಗಾಗಿ 800 ಪದಗಳ ಮಿತಿಯಲ್ಲಿ ತುಲು ಭಾಷೆಯಲ್ಲಿ ಸ್ವಂತ ಕಥೆ ಬರೆದು [email protected]ಗೆ ಇ-ಮೇಲ್ ಅಥವಾ 9900634405 ನಂಬರಿಗೆ ಪಿಡಿಎಫ್ ಅಥವಾ ವರ್ಡ್ ಫಾರ್ಮ್ಯಾಟ್ ನಲ್ಲಿ ವಾಟ್ಸಾಪ್ ಮೂಲಕ ಕಳುಹಿಸಬಹುದು

ಕೈ ಬರಹದ ಮೂಲಕ ಕತೆ ಬರೆಯುವವರು 2 A4 ಹಾಳೆ ಪುಟದಲ್ಲಿ ಕತೆ ಬರೆದು “ಆರ್ ಪ್ರದೀಪ್, ತಿರ್ತಗುತ್ತು ಗರ್ಡಾಡಿ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, 574217” ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಬಹುದು.

ಕಥೆ ಬರೆದವರ ಹೆಸರು, ವಿಳಾಸ, ವಯಸ್ಸು ಮತ್ತು ಕಥೆಯ ತಲೆಬರಹವನ್ನು ಪೋಸ್ಟ್ ಮೂಲಕ ಕಳಿಸುವವರು ಬೇರೆ ಒಂದು ಹಾಳೆಯಲ್ಲಿ ಹಾಗೂ ವಾಟ್ಸಾಪ್, ಮೇಲ್ ಮಾಡುವವರು ಬೇರೆ ಪುಟದಲ್ಲಿ ಕಳಿಸಬೇಕು.

ನಿಮ್ಮದೇ ಸ್ವಂತ ವಿಷಯದ ಆಧಾರದ ಮೇಲೆ ಕತೆ ಬರೆಯಬಹುದು. ಆದರೆ 14 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ಆಯೋಜಕರ ಸೋಷಿಯಲ್ ಮೀಡಿಯಾವನ್ನು ಫಾಲೋ ಮಾಡಬಹುದು ಅಥವಾ 9900634405, 8762686433 ಈ ನಂಬರಿಗೆ ಕರೆಮಾಡಬಹುದು.

Related posts

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಚಿಕಿತ್ಸಾ ನೆರವು

Suddi Udaya

ಮುರಳಿ ಬಲಿಪ ವಕೀಲರ ಕಚೇರಿ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಕೊಕ್ಕಡ : ಕುಡಾಲ ವ್ಯಾಪ್ತಿಯಲ್ಲಿ ಆನೆ ಸಂಚಾರ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya

ಗಾಳಿ ಮಳೆ: ಕಳಿಯ-ನ್ಯಾಯತರ್ಪು ವ್ಯಾಪಕ ಹಾನಿ15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

Suddi Udaya

ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ್ ರವರಿಗೆ ರಾಜ್ಯ ಸರಕಾರಿ ನೌಕರರ ಸಹಕಾರಿ ಸಂಘದಿಂದ ಅಭಿನಂದನೆ

Suddi Udaya
error: Content is protected !!