ಬೆಳ್ತಂಗಡಿ: ದೇಶದ ಹಿತ, ಕೈಗಾರಿಕಾ ಹಿತ, ಕಾರ್ಮಿಕ ಹಿತ ಎಂಬ ಧ್ಯೇಯದೊಂದಿಗೆ, ಕಾರ್ಮಿಕರಲ್ಲಿ ರಾಷ್ಟ್ರೀಯತೆ ಜಾಗೃತಿ ಮೂಡಿಸಿ ರಾಷ್ಟ್ರ ಪ್ರೇಮಿ ಕಾರ್ಮಿಕರನ್ನು ಒಂದು ಮಾಡಲು ಭಾರತೀಯ ಮಜ್ದೂರು ಸಂಘವು ಪ್ರಾರಂಭವಾಯಿತು. ಈ ಸಂಘವು ಪ್ರಾರಂಭವಾಗಿ ಇವತ್ತಿಗೆ 70 ವರ್ಷ ವಾಗಿದೆ ಈ ಸಮಯದಲ್ಲಿ ಸಂಘದ 70 ವರ್ಷಗಳ ಪ್ರಯಾಣ ಮತ್ತು ಸಾಧನೆಗಳನ್ನು ಜನತೆಯ ನಡುವೆ ಹಂಚಿಕೊಳ್ಳುವುದಕ್ಕಾಗಿ ಸಂಘವು ಸಂಪರ್ಕ ಅಭಿಯಾನ ವನ್ನು ಆಯೋಜನೆ ಮಾಡಿದೆ ಈ ಸಂಪರ್ಕ ಅಭಿಯಾನ ವನ್ನು ಜಿಲ್ಲೆಯ ಜಿಲ್ಲಾ ಕಾರ್ಯಾಲಯದಲ್ಲಿ ಹಿರಿಯ ಕಾರ್ಮಿಕ ನೇತಾರರಾದ ವಿಶ್ವನಾಥ್ ಶೆಟ್ಟಿ ಯವರಿಗೆ ಕರಪತ್ರವನ್ನು ನೀಡುವ ಮೂಲಕ ಪ್ರಾರಂಭ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಎನ್ ಕೆ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹೆಚ್ ಎಲ್, ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು, ಕಾರ್ಯದರ್ಶಿ ಗೋಪಾಲ ಕೃಷ್ಣ ಹಾಗೂ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರುಗಳು ಉಪಸ್ಥಿತರಿದ್ದರು.













