24.8 C
ಪುತ್ತೂರು, ಬೆಳ್ತಂಗಡಿ
April 1, 2025
Uncategorized

ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿ ರಚನೆ

ಕಾಜೂರು : ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿಯ ಸಹಕಾರದೊಂದಿಗೆ ಜಮಾಅತ್‌ನ ಧಾರ್ಮಿಕ – ಶರೀಅತ್ ವಿಷಯದಲ್ಲಿ ಕಾರ್ಯಾಚರಿಸುವ ಗುರಿಯೊಂದಿಗೆ ರಚನೆಗೊಂಡ ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಅಲ್ ಹಾಜಿ ಕೆ.ಎಮ್ ಉಮರ್ ಸಖಾಫಿ ಉಸ್ತಾದ್ ರವರ ನೇತೃತ್ವದೊಂದಿಗೆ ಕಾಜೂರು ರಹ್ಮಾನಿಯಾ ಮಸೀದಿಯಲ್ಲಿ ಅಂಗೀಕಾರ ಮಾಡಲಾಯಿತು.

ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯು ದೀನೀ ದಅವತ್ ಮಾಡಲು ಅನುಮತಿ ಹಾಗೂ ಅನುಮೋದನಾ ಸಭೆಯು ಡಿ.05 ರಂದು ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಚೇರಿಯಲ್ಲಿ ನಡೆಯಿತು. ಪ್ರಸ್ತುತ ಸಭೆಯಲ್ಲಿ ಕಾಜೂರು ದರ್ಗಾ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಕೆ.ಯು ಇಬ್ರಾಹಿಂ ರವರು ಮಾತನಾಡಿ, ಈ ಉಲಮಾ ಒಕ್ಕೂಟವು ಕಾಜೂರು ಕೇಂದ್ರ ಆಡಳಿತ ಸಮಿತಿಯ ಸಹಕಾರದಲ್ಲಿ ಕಾರ್ಯಾಚರಿಸುತ್ತಿದ್ದು, ಜಮಾಅತಿನ ಧಾರ್ಮಿಕ- ಶರೀಅತ್ ವಿಷಯದಲ್ಲಿ ಸಲಹೆ ಮತ್ತು ನಿರ್ದೇಶನಗಳನ್ನು ನೀಡಬೇಕೆಂದೂ, ಯಾವುದಾದರೂ ಸಮಸ್ಯೆ ಬರುವಾಗ ಉಲಮಾ-‌ ಉಮರಾ ಜತೆಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿ ನೂತನ ಸಮಿತಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್, ಕೋಶಾಧಿಕಾರಿ ಮಹಮ್ಮದ್ ಕಮಾಲ್ ಹಾಗೂ ದರ್ಗಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಕಾಜೂರು ಜಂಇಯ್ಯತುಲ್ ಉಲಮಾ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಅಲ್ ಹಾಜ್ ಕೆ.ಎಂ ಉಮರ್ ಸಖಾಫಿ ಕಾಜೂರು, ಅಧ್ಯಕ್ಷರಾಗಿ ಮುಹಮ್ಮದ್ ಬಶೀರ್ ಅಹ್ಸನಿ ಕಾಜೂರು ಉಪಾಧ್ಯಕ್ಷರುಗಳಾಗಿ ಕೆ ಯು ಮಹಮ್ಮದ್ ಸಖಾಫಿ ಕಾಜೂರು, ಅಬ್ದುಲ್ಲತೀಫ್ ಮದದಿ ಕಾಜೂರು ಪ್ರ.ಕಾರ್ಯದರ್ಶಿಯಾಗಿ ಹಮೀದ್ ಮುಸ್ಲಿಯಾರ್ ಕುಕ್ಕಾವು ಜೊತೆ ಕಾರ್ಯದರ್ಶಿಗಳಾಗಿ ಸವಾದ್ ಹಿಕಮಿ ದಿಡುಪೆ, ಮಹಮ್ಮದ್ ಫಾಳಿಲಿ ದಿಡುಪೆ ಕೋಶಾಧಿಕಾರಿಯಾಗಿ ಹಮೀದ್ ಸಅದಿ ಕುಕ್ಕಾವು ನಿರ್ದೇಶಕರು ಶಂಸುದ್ದೀನ್ ಝುಹ್ರಿ ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ ಸದಸ್ಯರುಗಳಾಗಿ ಕೆ.ಕೆ.ಉಸ್ಮಾನ್ ಮುಸ್ಲಿಯಾರ್, ಕೆ.ಎಂ.ಹಕೀಂ ಮುಸ್ಲಿಯಾರ್, ಶರೀಫ್ ಸಅದಿ ದಿಡುಪೆ ಅಲ್ಫಾಝ್ ಸಅದಿ ಕುಕ್ಕಾವು,ಶರ್ವಾನ್ ಸಅದಿ ಕಾಜೂರು.

Related posts

ವಾಣಿ ಪದವಿ ಪೂರ್ವ ಕಾಲೇಜ್ ತಂಡಗಳು ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಉಮೇಶ್ ಮುಂಡತ್ತೋಡಿ ರವರ ಮನೆಗೆ ಬಿಜೆಪಿ ಎಸ್.ಸಿ ಮೋರ್ಚಾದ ಪದಾಧಿಕಾರಿಗಳ ಭೇಟಿ

Suddi Udaya

ಧರ್ಮಸ್ಥಳ : ಶ್ರೀ ಧ.  ಮಂ.  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಾಯಕತ್ವ ತರಬೇತಿ ಕಾರ್ಯಾಗಾರ

Suddi Udaya

ಫೆ.26 ಬಳಂಜದಲ್ಲಿ ಗುರುಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ- ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಂಚಿಮಾರ್ ಟೈಗರ್ಸ್ ಧರ್ಮಸ್ಥಳ ನೇತೃತ್ವದಲ್ಲಿ ಹುಲಿವೇಷ

Suddi Udaya

ನೆರಿಯ ಕಾರಿನ ಮೇಲೆ ಒಂಟಿ ಸಲಗ ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಎಸಿಎಫ್ ಶ್ರೀಧರ್ ಭೇಟಿ ನೀಡಿ ಪರಿಶೀಲನೆ

Suddi Udaya
error: Content is protected !!