23.5 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿ ರಚನೆ

ಕಾಜೂರು : ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿಯ ಸಹಕಾರದೊಂದಿಗೆ ಜಮಾಅತ್‌ನ ಧಾರ್ಮಿಕ – ಶರೀಅತ್ ವಿಷಯದಲ್ಲಿ ಕಾರ್ಯಾಚರಿಸುವ ಗುರಿಯೊಂದಿಗೆ ರಚನೆಗೊಂಡ ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಅಲ್ ಹಾಜಿ ಕೆ.ಎಮ್ ಉಮರ್ ಸಖಾಫಿ ಉಸ್ತಾದ್ ರವರ ನೇತೃತ್ವದೊಂದಿಗೆ ಕಾಜೂರು ರಹ್ಮಾನಿಯಾ ಮಸೀದಿಯಲ್ಲಿ ಅಂಗೀಕಾರ ಮಾಡಲಾಯಿತು.

ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯು ದೀನೀ ದಅವತ್ ಮಾಡಲು ಅನುಮತಿ ಹಾಗೂ ಅನುಮೋದನಾ ಸಭೆಯು ಡಿ.05 ರಂದು ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಚೇರಿಯಲ್ಲಿ ನಡೆಯಿತು. ಪ್ರಸ್ತುತ ಸಭೆಯಲ್ಲಿ ಕಾಜೂರು ದರ್ಗಾ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಕೆ.ಯು ಇಬ್ರಾಹಿಂ ರವರು ಮಾತನಾಡಿ, ಈ ಉಲಮಾ ಒಕ್ಕೂಟವು ಕಾಜೂರು ಕೇಂದ್ರ ಆಡಳಿತ ಸಮಿತಿಯ ಸಹಕಾರದಲ್ಲಿ ಕಾರ್ಯಾಚರಿಸುತ್ತಿದ್ದು, ಜಮಾಅತಿನ ಧಾರ್ಮಿಕ- ಶರೀಅತ್ ವಿಷಯದಲ್ಲಿ ಸಲಹೆ ಮತ್ತು ನಿರ್ದೇಶನಗಳನ್ನು ನೀಡಬೇಕೆಂದೂ, ಯಾವುದಾದರೂ ಸಮಸ್ಯೆ ಬರುವಾಗ ಉಲಮಾ-‌ ಉಮರಾ ಜತೆಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿ ನೂತನ ಸಮಿತಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್, ಕೋಶಾಧಿಕಾರಿ ಮಹಮ್ಮದ್ ಕಮಾಲ್ ಹಾಗೂ ದರ್ಗಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಕಾಜೂರು ಜಂಇಯ್ಯತುಲ್ ಉಲಮಾ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಅಲ್ ಹಾಜ್ ಕೆ.ಎಂ ಉಮರ್ ಸಖಾಫಿ ಕಾಜೂರು, ಅಧ್ಯಕ್ಷರಾಗಿ ಮುಹಮ್ಮದ್ ಬಶೀರ್ ಅಹ್ಸನಿ ಕಾಜೂರು ಉಪಾಧ್ಯಕ್ಷರುಗಳಾಗಿ ಕೆ ಯು ಮಹಮ್ಮದ್ ಸಖಾಫಿ ಕಾಜೂರು, ಅಬ್ದುಲ್ಲತೀಫ್ ಮದದಿ ಕಾಜೂರು ಪ್ರ.ಕಾರ್ಯದರ್ಶಿಯಾಗಿ ಹಮೀದ್ ಮುಸ್ಲಿಯಾರ್ ಕುಕ್ಕಾವು ಜೊತೆ ಕಾರ್ಯದರ್ಶಿಗಳಾಗಿ ಸವಾದ್ ಹಿಕಮಿ ದಿಡುಪೆ, ಮಹಮ್ಮದ್ ಫಾಳಿಲಿ ದಿಡುಪೆ ಕೋಶಾಧಿಕಾರಿಯಾಗಿ ಹಮೀದ್ ಸಅದಿ ಕುಕ್ಕಾವು ನಿರ್ದೇಶಕರು ಶಂಸುದ್ದೀನ್ ಝುಹ್ರಿ ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ ಸದಸ್ಯರುಗಳಾಗಿ ಕೆ.ಕೆ.ಉಸ್ಮಾನ್ ಮುಸ್ಲಿಯಾರ್, ಕೆ.ಎಂ.ಹಕೀಂ ಮುಸ್ಲಿಯಾರ್, ಶರೀಫ್ ಸಅದಿ ದಿಡುಪೆ ಅಲ್ಫಾಝ್ ಸಅದಿ ಕುಕ್ಕಾವು,ಶರ್ವಾನ್ ಸಅದಿ ಕಾಜೂರು.

Related posts

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದಿಂದ ಡಿ.2 ಯಕ್ಷ ಸಂಭ್ರಮ 2023

Suddi Udaya

ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ: ಕುಸುಮಾವತಿಯವರೊಂದಿಗೆ ಮಾತುಕತೆ

Suddi Udaya

ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

Suddi Udaya

ಬುರುಡೆ ಚಿನ್ನಯ್ಯನ ಎರಡನೇ ಪತ್ನಿ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರು

Suddi Udaya

ನಾರಾವಿ ವಲಯ ಹೆಗ್ಗಡೆ ಸಂಘದ ನೂತನ ಅಧ್ಯಕ್ಷ ಕಾರ್ಯದರ್ಶಿ ಆಯ್ಕೆ

Suddi Udaya

ಜೂ.30 : ಕೊಕ್ಕಡ ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya
error: Content is protected !!