25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಬೈ – ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಭ್ಯವಿದ್ದಂತಹ ವಿವಿಧ ಕೋರ್ಸ್ ಗಳೆಲ್ಲಾ ಇದೀಗ ಪುತ್ತೂರಿನಲ್ಲೂ: VFX, AI, SAP ಕೋರ್ಸ್ ಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ; ಅತೀ ಕಡಿಮೆ ಶುಲ್ಕದೊಂದಿಗೆ ನುರಿತ ತಂಡದಿಂದ ತರಬೇತಿ ನೀಡಲಿದೆ ವಿದ್ಯಾಮಾತಾ

ಪುತ್ತೂರು : ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ಹೊಸ ವರುಷದ ಸುಸಂದರ್ಭದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮೂಹಕ್ಕೆ ಹೊಸ -ಹೊಸ ಬಗೆಯ ತರಬೇತಿಯನ್ನು ಪರಿಚಯಿಸುವ ಪುಟ್ಟದೊಂದು ಪ್ರಯತ್ನ ಮಾಡಿದೆ.


ಪ್ರೌಢ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಥವಾ ಪಡೆಯುತ್ತಿರುವಂತಹ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ತಯಾರಿಗೊಳಿಸುವ ಹಾಗೂ ಶಿಕ್ಷಣದೊಂದಿಗೆ ಅತ್ಯುತ್ತಮ ಉದ್ಯೋಗ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅತ್ಯುತ್ತಮ ವೇದಿಕೆಯನ್ನು ಸಜ್ಜುಗೊಳಿಸಿ , ಅವರ ಭವಿಷ್ಯ ಬೆಳಗುವ ಕಾರ್ಯ ಕೈಗೆತ್ತಿಕೊಂಡಿದೆ.
ಯುವ ಸಮೂಹ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತಹ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯವೆಸಗುತ್ತಿದ್ದು , ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ವಿವಿಧ ಕೋರ್ಸ್ ಗಳನ್ನು ಪರಿಚಯಿಸುವ ಕಾಯಕವನ್ನು ಶುರು ಮಾಡಿದೆ.


ಗ್ರಾಮೀಣ ವಿದ್ಯಾರ್ಥಿಗಳಿಗೂ ಕೈಗೆಟಕುವ ಸೇವಾ ಶುಲ್ಕದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಿ , ನೂರಾರು ವಿದ್ಯಾರ್ಥಿಗಳು ಸರಕಾರಿ ಸೇವೆ ಸಲ್ಲಿಸುವಂತೆ ಅವರನ್ನು ಅಣಿಗೊಳಿಸಿರುವ ಕೀರ್ತಿ ವಿದ್ಯಾಮಾತಾ ಅಕಾಡೆಮಿಯ ತಂಡಕ್ಕೆ ಸಲ್ಲುತ್ತಿದ್ದು , ವಾಣಿಜ್ಯ ನಗರಿ ಮುಂಬೈ , ಸಿಲಿಕಾನ್ ಸಿಟಿ ಬೆಂಗಳೂರು ಸಹಿತ ಚೆನೈಯಂತಹ ಬೃಹತ್ ಮಹಾನಗರಗಳಲ್ಲಿ Visual Effect, Artificial Intelligence ಈ ಮೊದಲಾದ ತರಬೇತಿಯು ಅತೀ ದುಬಾರಿಯಾಗಿದ್ದು , ತರಬೇತಿ ಪಡೆಯಲು ಲಕ್ಷಾಂತರ ರೂ ವ್ಯಯಿಸಬೇಕಾಗಿರುತ್ತದೆ.


ಆದರೆ , ಇದೀಗ ಇದೇ ತರಬೇತಿಯನ್ನು ಹೆಸರಾಂತ ವಿದ್ಯಾಮಾತಾ ಕೂಡ ಆರಂಭಿಸಲು ಮುಂದೆ ಬಂದಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಹೆಚ್ಚು ಸಹಾಯವಾಗುವ ನಿಟ್ಟಿನಲ್ಲಿ ವಿನೂತನ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.
ತರಬೇತುದಾರರ ಗೌರವಧನ ಸಹಿತ ಕನಿಷ್ಠ ಸೇವಾ ಶುಲ್ಕದೊಂದಿಗೆ ಮೇಲಿನ ತರಬೇತಿಗಳನ್ನು ಈ ಕೂಡಲೇ ಪ್ರಾರಂಭಗೊಳ್ಳಲಿದ್ದು , ಆಸಕ್ತ ವಿದ್ಯಾರ್ಥಿಗಳು ಮತ್ತು ಯುವ ಜನತೆ ಈ ತರಬೇತಿಯ ಸದುಪಯೋಗ ಪಡೆಯುವಂತೆ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ವಿನಂತಿಸಿದ್ದಾರೆ.


ಲಭ್ಯವಿರುವ ತರಬೇತಿಗಳು :
VFX Plus , Graphics Pro , Graphics Prime , Artificial Hyper , Digital World , SAP-FICO , Tally Trade , Tax Fluence ಕೋರ್ಸ್ ಲಭ್ಯವಿದ್ದು , ಪ್ರವೇಶಾತಿಯೂ ಪ್ರಾರಂಭಗೊಂಡಿದೆ. ಇನ್ನೂ ಹೆಚ್ಚಿನ ವಿವರಗಳಿಗೆ ವಿದ್ಯಾಮಾತಾ ಅಕಾಡೆಮಿಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.


ಪುತ್ತೂರು :9148935808 , 96204 68869. ಸುಳ್ಯ ಶಾಖೆ : 9448527606 ಮತ್ತು ಕಾರ್ಕಳ ಶಾಖೆ : 8310484380 ಸಂಪರ್ಕಿಸಬಹುದು.

Related posts

ಉಜಿರೆ ಬೆನಕ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

Suddi Udaya

ಜೂ.23 : ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವ ಸಂಭ್ರಮ: 1 ಕೋಟಿ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಅಂತಿಮ ಸಿದ್ಧತೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

Suddi Udaya

ಸೆ.12: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬ್ರಹ್ಮಾನಂದ ಶ್ರೀ ಯವರಿಂದ ಕನ್ಯಾಡಿ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳದಲ್ಲಿ “ಕೆಸರ್‌ಡ್ ಒಂಜಿ ದಿನ”

Suddi Udaya
error: Content is protected !!