38.8 C
ಪುತ್ತೂರು, ಬೆಳ್ತಂಗಡಿ
March 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಸ್ತೆ ಬದಿಯಲ್ಲಿ ನಿಂತು ವಾಹನಗಳಿಗೆ ಕೈ ತೋರಿಸುವ ಮಕ್ಕಳು: ಪೋಷಕರ ಆತಂಕ

ಮಚ್ಚಿನ: ಶಾಲೆ ಬಿಟ್ಟ ಕೂಡಲೇ ಕೆಲ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳಿಗೆ ಕೈ ಹಿಡಿದು ಯಾರಾದರೂ ವಾಹನ ನಿಲ್ಲಿಸಿದರೆ ಅದರಲ್ಲಿ ಹೋಗುತ್ತಿರುವುದು ಹಲವಡೆ ನಡೆಯುತ್ತಿದೆ. ಮಚ್ಚಿನ ಶಾಲೆಯಲ್ಲೂ ಶಾಲೆ ಬಿಡುವ ಸಮಯದಲ್ಲಿ ಶಾಲಾ ಮಕ್ಕಳು ರಸ್ತೆ ಬದಿಯಲ್ಲಿ ಉದ್ದಕ್ಕೆ ನಿಂತುಕೊಂಡು ಬೈಕ್ ಹಾಗೂ ಇತರ ವಾಹನಗಳಿಗೆ ಕೈ ತೋರಿಸಿ ಹತ್ತಿಕೊಂಡು ಹೋಗುವುದು ಇತ್ತೀಚಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.


ಶಾಲೆ ಬಿಟ್ಟ ಕೂಡಲೇ ರಸ್ತೆ ಬದಿಯಲ್ಲಿ ನಿಂತು ಬೈಕ್ ಹಾಗೂ ಇತರ ದ್ವಿಚಕ್ರವಾಹನದಲ್ಲಿ ಒಬ್ಬರೇ ಹೋಗುತ್ತಿದ್ದರೆ ಅದಕ್ಕೆ ಮಕ್ಕಳು ಕೈ ಹಿಡಿದು ಬರುವುದಾಗಿ ತಿಳಿಸುತ್ತಾರೆ. ಕೆಲವರು ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಾರೆ. ಆದರೆ ಹೋಗುವಾಗ ಏನಾದರೂ ಅವಘಡ ಸಂಭವಿಸಿದರೆ ಇದಕ್ಕೆ ಜವಾಬ್ದಾರಿ ಯಾರು ಎಂಬ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳು ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಹೋಗುವ ಬಗ್ಗೆ ಶಾಲೆಯವರು ಹಾಗೂ ಮಕ್ಕಳ ಪೋಷಕರು ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ವರದಿ: ಹರ್ಷ ಬಳ್ಳಮಂಜ

Related posts

ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya

ಕಲ್ಮಂಜ : ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಪಜಿರಡ್ಕ ದೇವಸ್ಥಾನದಲ್ಲಿ ಶ್ರಮದಾನ

Suddi Udaya

ಮುಳಿಯದಲ್ಲಿ ದೀಪಾವಳಿ ಸಂಭ್ರಮ: ವಜ್ರಾಭರಣ ಖರೀದಿಗೆ ಕಾರು ಗೆಲ್ಲುವ ಅವಕಾಶ- ಗ್ರಾಹಕರಿಗೆ ವಿಶೇಷ ಕೊಡುಗೆ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ “ನವನಕ್ಷತ್ರ ಸನ್ಮಾನ” ಪ್ರಶಸ್ತಿ

Suddi Udaya

ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ – 8: ನಿರಂಜನ್ ಜೈನ್ ಕುದ್ಯಾಡಿ ಅವರ ರಚನೆಯ ಬೆಳಗಾವಿಯ ವಿಶಾರದಾ ನೃತ್ಯ ತಂಡ ಪ್ರಥಮ ಸ್ಥಾನ

Suddi Udaya

ಕಳೆಂಜ ಬಿರುಗಾಳಿ ಮಳೆಗೆಮನೆಗೆ ಮರ ಬಿದ್ದು ಹಾನಿ

Suddi Udaya
error: Content is protected !!