25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಂಸತ್ತಿನಲ್ಲೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ತಮ್ಮ ದೇಶದ ಜನರೆದುರು ಕ್ಷಮೆಯಾಚಿಸಲಿ: ರಕ್ಷಿತ್ ಶಿವರಾಂ

ಬೆಳ್ತಂಗಡಿ: “ನಿತ್ಯವೂ ಅಂಬೇಡ್ಕರ್ ಅವರ ಹೆಸರನ್ನು ಜಪಿಸುವುದು ವ್ಯಸನ” ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳುವ ಮೂಲಕ ಬಾಬಾ ಸಾಹೇಬರ ಬಗ್ಗೆ ಗೃಹ ಸಚಿವರಿಗಿರುವ ದ್ವೇಷವನ್ನು ಹೊರಹಾಕಿದ್ದಾರೆ. ಸಂವಿಧಾನ ರಚನೆಯೂ ಸೇರಿದಂತೆ ಇಡೀ ಭಾರತ ದೇಶದ ಶೋಷಿತರ ಧ್ವನಿಯಾಗಿರುವ ಬಾಬಾ ಸಾಹೇಬರನ್ನ ಅವಮಾನಿಸಿವುದು ಈ ನೆಲಕ್ಕೆ ಬಗೆದ ದ್ರೋಹ.

ಬಹು ಸಂಖ್ಯಾತ ದಲಿತ, ಆದಿವಾಸಿ, ಹಿಂದುಳಿದ ವರ್ಗದ ಜನರು ಸ್ವಾಭಿಮಾನ, ಘನತೆ ಹಾಗೂ‌ ಗರ್ವದಿಂದ ಬದುಕಲು ಬಾಬಾ ಸಾಹೇಬರು ನೀಡಿದ ಹಕ್ಕುಗಳ ಕಾರಣಕ್ಕಾಗಿ ನಿತ್ಯವೂ ಅವರ ಜಪ ಮಾಡುವುದರಲ್ಲಿ ತಪ್ಪೇನಿದೆ? ಸಾವಿರಾರು ವರ್ಷಗಳಿಂದ ಶೋಷಣೆ ಅನುಭವಿಸಿದ ಜನರು ಸ್ವಾಭಿಮಾನದಿಂದ ಬಾಬಾ ಸಾಹೇಬರ ಹೆಸರು ಜಪಿಸುವುದು ತಪ್ಪೇ? ಗೃಹ ಸಚಿವ ಅಮಿತಾ ಶಾ ಅವರಲ್ಲಿ ಯಾಕಿಷ್ಟು ಬಾಬಾ ಸಾಹೇಬರ ಬಗ್ಗೆ ತಾತ್ಸಾರ ಎಂದು ದೇಶದ ಜನರೆದುರು ಸತ್ಯ ಹೇಳಲಿ.

ಬಿಜೆಪಿ ಪಕ್ಷ ನಿತ್ಯವೂ ಬಾಬಾ ಸಾಹೇಬರನ್ನು ಹಾಗೂ ಅವರ ಚಿಂತನೆಯನ್ನು ಅವಮಾನಿಸುತ್ತಾ, ಅಪಮಾನಿಸುತ್ತಾ ಅವರು ನೀಡಿದ ಸಂವಿಧಾನದ ಬಗ್ಗೆ ದ್ವೇಷ ಕಾರುತ್ತಲೇ ಬರುತ್ತಿರುವದಕ್ಕೆ ಇತಿಹಾಸವೇ ಸಾಕ್ಷಿ.
ತಮ್ಮ ಹುದ್ದೆಯ ಘನತೆಗೆ ಅಗೌರವವಾಗಿ ನಡೆದುಕೊಳ್ಳುವುದು ಸಾರ್ವಜನಿಕ ರಾಜಕೀಯ ಜೀವನದಲ್ಲಿ ಮುಂದುವರೆಯಲು ಅರ್ಹರಲ್ಲ. ಕೂಡಲೇ ಗೃಹ ಸಚಿವ ಈ ದೇಶದ ಎದುರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ತಿಳಿಸಿದ್ದಾರೆ.

Related posts

ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರ ಪ್ರಕರಣ: ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ ಖ್ಯಾತ ವಕೀಲ ಸಿ.ವಿ.ನಾಗೇಶ್

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಅನುಗ್ರಹ ಆಂ.ಮಾ. ಪ್ರೌಢ ಶಾಲೆಗೆ 96.42% ಫಲಿತಾಂಶ

Suddi Udaya

ಧರ್ಮಸ್ಥಳದಿಂದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಬೆಳಾಲು ಪ್ರೌಢಶಾಲೆ ಆರಂಭೋತ್ಸವ

Suddi Udaya

ಇಂದಿನಿಂದ ಧರ್ಮಸ್ಥಳ- ಪಾಂಗಳ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ

Suddi Udaya

ಪೆರಿಂಜೆ : ಪಡ್ಡಾಯಿಬೆಟ್ಟು ನಿವಾಸಿ ಕೃಷಿಕ ವಿಠಲ ಹೆಗ್ಡೆ ನಿಧನ

Suddi Udaya
error: Content is protected !!