25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟ ಇದರ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿದ್ಯಾ ಎಮ್ಎಚ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪಂಚಾಯತ್ ಅಧ್ಯಕ್ಷರು ದೀಪ ಪ್ರಜ್ವಲಿಸುವ ಮೂಲಕ ಸಭೆಗೆ ಚಾಲನೆಯನ್ನು ನೀಡಿದರು. ಉದ್ಘಾಟಕರ ಮಾತಿನೊಂದಿಗೆ ಆರಂಭಗೊಂಡ ಸಭೆಯ ವರದಿಯನ್ನು ಕಾರ್ಯದರ್ಶಿ ಅನಿತಾ ಫೆರ್ನಾಂಡಿಸ್ ರವರು ಮಂಡಿಸಿದರು.

ವಲಯ ಮೇಲ್ವಿಚಾರಕಿ ವೀಣಾ ರವರು ಒಕ್ಕೂಟವು ಹೇಗೆ ಇರಬೇಕು, ಒಕ್ಕೂಟದಿಂದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನಗಳಿವೆ, ಬ್ಯಾಂಕಿನಲ್ಲಿ ಯಾವ ತರದ ಸಾಲ ಸೌಲಭ್ಯಗಳಿವೆ, ಸಂಘದ ಸದಸ್ಯರು ಯಾವೆಲ್ಲ ರೀತಿಯಲ್ಲಿ ಸ್ವ-ಉದ್ಯೋಗವನ್ನು ನಡೆಸಬಹುದೆಂದು ಸವಿಸ್ತಾರವಾಗಿ ವಿವರಿಸಿದ್ದರು.

ನಂತರ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಒಕ್ಕೂಟದ ಸದಸ್ಯತ್ವದಿಂದ ನಿರ್ಗಮಿಸುವ ಸದಸ್ಯರುಗಳಿಗೆ ಗೌರವ ಸ್ಮರಣಿಕೆ ನೀಡಲಾಯಿತು. ಒಕ್ಕೂಟದಲ್ಲಿ ಸಿಐಎಫ್ ಸಾಲ ಪಡೆದು ಉತ್ತಮ ಸಾಧಕಿ ಎಂದು ಗುರುತಿಸಿ ಶ್ರೀಮತಿ ಅನಿತಾ ಗೀತಾ ಫೆರ್ನಾಂಡಿಸ್ ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಒಕ್ಕೂಟದ ಎಲ್ ಸಿ ಆರ್ ಪಿ ಶ್ವೇತಾರವರು ತಯಾರಿಸಿದ ಫಿನೈಲ್ ಹಾಗೂ ಶ್ರೀದೇವಿ ಶ್ರೀ ಶಕ್ತಿ ಸಂಘದ ಸದಸ್ಯೆ ಆರತಿರವರು ತಯಾರಿಸಿದ ಫಿನೈಲ್ ಹಾಗೂ ಸೋಪ್ ಆಯಿಲ್ ಅನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು .

ಜಮಾ ಖರ್ಚಿನ ವಿವರವನ್ನು ಬ್ಯಾಂಕ್ ಸಖಿ ಶ್ರೀಮತಿ ಶ್ರೀಕಲ ನೆರವೇರಿಸಿದರು. ಸಿಎ ಆಡಿಟ್ಟು ರಿಪೋರ್ಟ್ ಅನ್ನು ಉಪಾಧ್ಯಕ್ಷೆ ಅಕ್ಷತಾ ಮಂಡಿಸಿದರು. ಕೃಷಿ ಸಖಿ ವಿಜಯ ರವರ ಪ್ರಾರ್ಥಿಸಿ, ಎಲ್ ಸಿ ಆರ್ ಪಿ ಶ್ವೇತ ಸ್ವಾಗತಿಸಿದರು. ಎಂಬಿಕೆ ನಿಶಾಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ ಸಿ ಆರ್ ಪಿ ಪುಷ್ಪಾ ಧನ್ಯವಾದವಿತ್ತರು,

Related posts

ಮುಂಡಾಜೆ: ಮೂಲಾರು ದರ್ಖಾಸು ನಿವಾಸಿ ಕಮಲಾ ನಾಯ್ಕ ನಿಧನ

Suddi Udaya

ಉಜಿರೆ: ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ‘ಯಶೋವನ’ ಲೋಕಾರ್ಪಣೆ

Suddi Udaya

ಹೊಸಂಗಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

Suddi Udaya

ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಶಾಂತ್ ಹಾಗೂ ಕು. ಕಮಲರವರಿಗೆ ಮುಖ್ಯಮಂತ್ರಿ ಪದಕ ಪುರಸ್ಕಾರ

Suddi Udaya

ಸುಲ್ಕೇರಿ ಕುಲಾಲ ಕುಂಭಶ್ರೀ ಸಂಘದ ವತಿಯಿಂದ ಕುಲಾಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಸಾಧಕಿ ಪೂರ್ವಿಕ ರಿಗೆ ಸನ್ಮಾನ

Suddi Udaya
error: Content is protected !!