April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ

ಲಾಯಿಲ: ಲಾಯಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ ಕೆ ಇವರ ಅಧ್ಯಕ್ಷತೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯು ಡಿ .18ರಂದು ಜರಗಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬೇನಾಡಿಕ್ಟ್ ಸಾಲ್ದಾನ, ಮರಿಯಮ್ಮ, ಮಹೇಶ ಕೆ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ ಡಿ ಪಿ, ಲೆಕ್ಕಸಹಾಯಕರಾದ ಸುಪ್ರಿತಾ ಶೆಟ್ಟಿ ಕರ್ನೋಡಿ, ಶಾಲಾ ಮುಖ್ಯ ಶಿಕ್ಷಕರಾದ ಜಗನ್ನಾಥ್ ಕುಂಟಿನಿ, ಪಡ್ಲಾಡಿ ಶಾಲಾ ಸಹಶಿಕ್ಷಕರು , ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕರ್ನೋಡಿ, ಶಾಲಾ ವಿದ್ಯಾರ್ಥಿ ನಾಯಕಿ ಹೇಮಲತಾ ರವರು ಉಪಸ್ಥಿತರಿದ್ದರು.

ಭಾರತ ಸಂವಿದಾನದ ಪ್ರಯುಕ್ತ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ 3 ಶಾಲೆಗಳ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ ಮಕ್ಕಳಿಗೆ ಸಭೆಯಲ್ಲೇ ರಸಪ್ರಶ್ನೆಗಳನ್ನು ಕೇಳಿ ಬಹುಮಾನವನ್ನು ನೀಡಲಾಯಿತು.

ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಮಹತ್ವದ ಕುರಿತು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಪ್ರಸ್ಥಾವಿಕವಾಗಿ ಮಾತಾಡಿದರು . ಮಕ್ಕಳ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಮಹೇಶ್ ಕೆ ಹಾಗೂ ಆಶಾ ಸಾಲ್ದಾನ ರವರು ತಿಳಿಸಿದರು . ಆರೋಗ್ಯ ಇಲಾಖೆಗೆ ಸಂಬಂಧ ಪಟ್ಟ ಮಾಹಿತಿಯನ್ನು ಅರೋಗ್ಯ ಕಾರ್ಯಕರ್ತೆಯದ ಸರಸ್ವತಿ ನೀಡಿದರು. ಮಕ್ಕಳಿಂದ ವಿವಿಧ ಬೇಡಿಕೆಗಳನ್ನು ಸ್ವೀಕರಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಬಿಲ್ ವಸೂಲಿಗರರಾದ ಮೋಹನ ಸ್ವಾಗತಿಸಿದರು. ಸುಪ್ರಿತಾ ಶೆಟ್ಟಿ ನಿರೂಪಿಸಿ, ಧನ್ಯವಾದವಿತ್ತರು.

Related posts

ಚಾರ್ಮಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿ

Suddi Udaya

ಫೆ.12-16: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಕೆನರಾ ಬ್ಯಾಂಕ್ ವತಿಯಿಂದ ನಿಡ್ಲೆ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆ

Suddi Udaya

ಚಾರ್ಮಾಡಿ, ಕಡಿರುದ್ಯಾವರ ಕಾಡಾನೆ ಹಾವಳಿ

Suddi Udaya

ಶ್ರೀ ರಾಮ ಗೆಳೆಯರ ಬಳಗ ನೇರೋಳ್ ಪಲ್ಕೆ ಇದರ ವತಿಯಿಂದ ಶ್ರೀ ರಾಮೋತ್ಸವ

Suddi Udaya

ಮಂಗಳೂರು ಹಾಲು ಒಕ್ಕೂಟದ ನೌಕರರ ಟ್ರಸ್ಟಿನ ವತಿಯಿಂದ ಅಶೋಕ ಕುಮಾರ್ ಕುಟುಂಬಕ್ಕೆರೂ1.50 ಲಕ್ಷ ಚೆಕ್ ಹಸ್ತಾಂತರ

Suddi Udaya
error: Content is protected !!