September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳ್ಳಮಂಜ 27ನೇ ವರ್ಷದ ಶೇಷ-ನಾಗ ಕೋಡುಕರೆ ಕಂಬಳ: ಫಲಿತಾಂಶ

ಮಡಂತ್ಯಾರು: ಬಳ್ಳಮಂಜ 27ನೇ ವರ್ಷದ ಶೇಷ-ನಾಗ ಕೋಡುಕರೆ ಕಂಬಳವು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ಡಿ.29ರಂದು ನಡೆಯಿತು.

ಕಂಬಳದ ಉದ್ಘಾಟನೆಯನ್ನು ಮಾಧವ ಜೋಗಿತ್ತಾಯರವರು ನೆರವೇರಿಸಿದರು.ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಾವೀರ ಕಾಲೇಜಿನ ಪ್ರಾಚಾರ್ಯ ಡಾ. ರಾಧಕೃಷ್ಣ ಶೆಟ್ಟಿ, ಸದಾನಂದ ಪೂಜಾರಿ, ಮಚ್ಚಿನ ಎಸ್.ಸಿ.ಎಸ್. ನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ದುಗ್ಗಪ್ಪ ಗೌಡ ಪೊಸಂದೋಡಿ, ಗ್ರಾಮ ಆಡಳಿತಾಧಿಕಾರಿ ಸತೀಶ್ ಪಿಂಟೋ ಉಪಸ್ಥಿತರಿದ್ದರು .

ಬಳ್ಳಮಂಜ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾಂಶ:

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ:
ಅಡ್ಡಹಲಗೆ: 03 ಜೊತೆ
ಹಗ್ಗ ಹಿರಿಯ: 06 ಜೊತೆ
ನೇಗಿಲು ಹಿರಿಯ: 05 ಜೊತೆ
ಹಗ್ಗ ಕಿರಿಯ: 10 ಜೊತೆ
ನೇಗಿಲು ಕಿರಿಯ: 66 ಜೊತೆ
ಒಟ್ಟು ಕೋಣಗಳ ಸಂಖ್ಯೆ: 90 ಜೊತೆ

ಅಡ್ಡ ಹಲಗೆ: ಪ್ರಥಮ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು
ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ಹಗ್ಗ ಹಿರಿಯ: ಪ್ರಥಮ: ಮಾಣಿ ಗುತ್ತು ಪ್ರಸನ್ನ ರಘರಾಮ ನಾಯ್ಗ್
ಓಡಿಸಿದವರು: ಅಜಿಲಮೊಗರು ಸೇವುದಕೋಡಿ ಗಣೇಶ್
ದ್ವಿತೀಯ: ಅರಸಿನಮಕ್ಕಿ ನಾವಳಪಡ್ಪು ಕುಶಲ್ ಕೇಶವ ಆಚಾರ್ಯ
ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್

ಹಗ್ಗ ಕಿರಿಯ: ಪ್ರಥಮ: ಮೊಗರು ಕೋಡ್ಯಾರಗುತ್ತು ಯತೀಕ್ಷ ಗೌಡ
ಓಡಿಸಿದವರು: ಬೆಳಾಲು ಸಂತೋಷ್
ದ್ವಿತೀಯ: ಹಳೆಯಂಗಡಿ ಕೊಪ್ಪಳ ನಂದಗೋಕುಲ ಕೃತಿ ಕೃಷ್ಣ ಪೂಜಾರಿ
ಓಡಿಸಿದವರು: ತೋಕೂರು ಮೂಡುಮನೆ ಅಭಿಲಾಷ್ ಶೆಟ್ಟಿ

ನೇಗಿಲು ಹಿರಿಯ:ಪ್ರಥಮ: ಶ್ರೀ ಗಣೇಶ್ ಕರ್ನೋಡಿ ವಿಜೇತ್ ಜಗನ್ನಾಥ ಶೆಟ್ಟಿ
ಓಡಿಸಿದವರು: ವಾಲ್ಪಾಡಿ ಶಂಕರ್
ದ್ವಿತೀಯ: ಹೆಜಮಾಡಿ ಶ್ರೀ ಕಮಲ್ ರಾಹುಲ್ ಸಂಜೀವ ಪೂಜಾರಿ
ಓಡಿಸಿದವರು: ಒಂಟಿಕಟ್ಟೆ ರಿತೇಶ್ ಪೂಜಾರಿ

ನೇಗಿಲು ಕಿರಿಯ: ಪ್ರಥಮ: ಅನಂತಾಡಿ ವೈಶಾಕ್ ವೈಭವ್ ಮಡಿವಾಳ್
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಶರತ್ ನಾಯ್ಕ್
ದ್ವಿತೀಯ: ಶ್ರೀ ನಂದಿಕೇಶ್ವರ ಗೆಳೆಯರ ಬಳಗ
ಓಡಿಸಿದವರು: ಪುತ್ತೂರು ಬೆದ್ರಾಳ ರಕ್ಷಿತ್ ಆಚಾರ್ಯ

Related posts

ಮಚ್ಚಿನ : ಹಿರಿಯ ದೈವ ನರ್ತಕ ಬೊಮ್ಮಣ್ಣ ನಿಧನ

Suddi Udaya

ಬೆಳ್ತಂಗಡಿಯ ಹಿರಿಯ ಹೊಟೇಲ್ ಉದ್ಯಮಿ ಅಬೂಬಕ್ಕರ್ ಹೃದಯಾಘಾತದಿಂದ ನಿಧನ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಾಗಾರ

Suddi Udaya

ಜ.25: ಉಜಿರೆ ವಿಜಯನಗರ ಅಜಿತ್‌ನಗರ (ಕಲ್ಲೆ) ದಲ್ಲಿ ಶ್ರೀ ವನದುರ್ಗಾ, ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ವಾರ್ಷಿಕ ಆರಾಧನೆ

Suddi Udaya

ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

Suddi Udaya

ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ರಿಂದ ಮತ ಚಲಾವಣೆ

Suddi Udaya
error: Content is protected !!