July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ 1008ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮವು ಡಿ.೨೯ರಂದು ನಡೆಯಿತು.

ಪರಮಪೂಜ್ಯ 108ಮುನಿಶ್ರೀ ಆದಿತ್ಯ ಸಾಗರ ಮಹಾರಾಜರು ಪಂಚಕಲ್ಯಾಣಗೊಂಡ 24 ತೀಥಂಕರರ ಜಿನ ಬಿಂಬಗಳನ್ನು ಶ್ರೀ ಕ್ಷೇತ್ರ ಚಂದ್ರಪುರಕ್ಕೆ ಆಶೀರ್ವಾದ ಮೂಲಕ ಪವನ್ ಪಂಡಿತ್ ಹಾಗೂ ಶ್ರೀವೀರ ಇಂದ್ರರವರ ಮೂಲಕ ಜಿನಬಿಂಬಗಳಿಗೆ ಜಲ, ಗಂಧ, ಸಿಯಾಳ ಹಾಲು ಮುಂತಾದ ದ್ರವ್ಯಗಳಿಂದ ಶ್ರಾವಕ ಶ್ರಾವಕಿಯರು ಅಭಿಷೇಕದೊಂದಿಗೆ ಅರಿಹಂತ ಇಂದ್ರರು 24 ಜಿನ ಬಿಂಬಗಳನ್ನು ಗಂಧಕುಟಿಯಲ್ಲಿ ಪ್ರತಿಷ್ಠಾಪಿಸಿದರು.

ಈ ಸಂದರ್ಭದಲ್ಲಿ ತ್ರಿಲೋಕ ಚಿಹ್ನೆಯ ನಾಮಫಲಕವನ್ನು ದಾನಿಗಳಾದ ಧರ್ಮಸ್ಥಳ ಕನ್ಯಾಡಿ ಆದೀಶ ಲಾಡ್ಜ್‌ನ ಮಾಲಕ ಪದ್ಮಪ್ರಸಾದ್ ಜೈನ್ ಇವರು ಅನಾವರಣಗೊಳಿಸಿದರು.

ಶ್ರಾವಕಿಯರಿಂದ ಭಜನೆ, ಗ್ರೀಷ್ಮ ಇಜಿಲಾಂಪಾಡಿ ಅವರಿಂದ ಜಿನಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಹೊಂಬುಜದ ಪೀಠಾಧಿಪತಿಗಳಾದ ಜಗದ್ಗುರು ಪರಮಪೂಜ್ಯ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ನೀಡಿದ ಇಂದ್ರಧ್ವಜವನ್ನು ಪ್ರತಿಷ್ಠಾಪಿಸಲಾಯಿತು.

ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಪಣಿರಾಜ್ ಜೈನ್ ಕೊಕ್ಕಡ ಇವರು ಮಾಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ವಿಜಯ ಕುಮಾರ್ ಜೈನ್, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಪಿ.ಎನ್. ರವಿರಾಜ್ ಬಂಗ, ಜಿನರಾಜ ಪೂವಣಿ, ರಾಜೇಂದ್ರ ಜೈನ್, ಫಣಿರಾಜ್ ಜೈನ್, ಸಂತೋಷ್ ಕುಮಾರ್, ವೀರೇಂದ್ರ ಕುಮಾರ್, ಅಭಿನಂದನ್ ಜೈನ್, ಅತೀಶಯ್ ಜೈನ್, ಜಿನೇಂದ್ರ ಕುಮಾರ್, ಗುಣಪಾಲ ಬಂಗ ಹಾಗೂ ಬಾರಿ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.

ಪೂಜಾ ಕಾರ್ಯಕ್ರಮವನ್ನು ಪವನ್ ಪಂಡಿತ್, ವೀರಇಂದ್ರ ನೆರವೇರಿಸಿದರು. ಆಡಳಿತ ಮಂಡಳಿ ಸಂಚಾಲಕರಾದ ಡಾ. ಕೆ. ಜಯಕೀರ್ತಿ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related posts

ಸೋಮಂತಡ್ಕ: ನಿಯಂತ್ರಣ ತಪ್ಪಿ ಚರಂಡಿಗೆ ಗುದ್ದಿದ ಕೆಎಸ್ಆರ್ ಟಿಸಿ ಬಸ್

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಆಚರಣೆ

Suddi Udaya

ಮಾ.30: ಲಕ್ಷ್ಮೀ ಇಂಡಸ್ಟೀಸ್ “ಕನಸಿನ ಮನೆ” ವಾಮದಪದವು ಶಾಖೆ ಶುಭಾರಂಭ

Suddi Udaya

ಉಜಿರೆ : ಪ್ರಗತಿ ಮಹಿಳಾ ಮಂಡಲ ನೇತೃತ್ವದಲ್ಲಿ ಚಿಲಿಪಿಲಿ 2024 ಬೇಸಿಗೆ ಶಿಬಿರದ ಸಮಾರೋಪ

Suddi Udaya

ಮಚ್ಚಿನ ಅಂಚೆ ಕಚೇರಿ ಹಾಗೂ ಮಚ್ಚಿನ ಗ್ರಾ.ಪಂ. ಸಹಯೋಗದಲ್ಲಿ ಆಧಾರ್ ಸೀಡಿಂಗ್ ಕ್ಯಾಂಪ್

Suddi Udaya

ಕಾಶಿಪಟ್ಣ ಸ.ಪ್ರೌ. ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!