July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಮಸ್ಯೆ

ಹೆದ್ದಾರಿ ಕಾಮಗಾರಿಯನ್ನು ಕಕ್ಕಿಂಜೆ ಪೇಟೆ ಮೂಲಕ ಮಾಡುವಂತೆ ಆಗ್ರಹ: ಬೈಪಾಸ್ ರಸ್ತೆ ಬೇಡ: ಪೇಟೆಯ ವರ್ತಕರ ಬೆಂಬಲ ಇದೆ

ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಪುಂಜಾಲಕಟ್ಟೆ ಮತ್ತು ಚಾರ್ಮಾಡಿ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯ ಭಾಗವಾಗಿ, ಕಕ್ಕಿಂಜೆಯಲ್ಲಿ ರಸ್ತೆ ಬೈಪಾಸ್ ಮಾರ್ಗದ ತಿರುಗಿಸಲು ಪ್ರಸ್ತಾವಿಸಲಾಗಿದೆ. ಈ ತಿರುಗುವಿಕೆಯು ಕಕ್ಕಿಂಜೆ ಪಟ್ಟಣದ ಬೆಳವಣಿಗೆ ಮತ್ತು ಸ್ಥಳೀಯ ವ್ಯಾಪಾರಿಗಳ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಮತ್ತು ಬೈಪಾಸ್ ಮೂಲಕ ರಸ್ತೆ ತಿರುಗಿಸುವುದರಿಂದ ಪಟ್ಟಣದ ಮೂಲಕ ಸಾಗುವ ಸಂಚಾರವು ಕಡಿಮೆಯಾಗುತ್ತದೆ, ಇದರಿಂದ ಸ್ಥಳೀಯ ವ್ಯಾಪಾರಿಗಳು ಮತ್ತು ವ್ಯಾಪಾರಕ್ಕೆ ಅವಲಂಬಿತರಾಗಿರುವವರು ಆರ್ಥಿಕ ಹಾನಿಯನ್ನು ಅನುಭವಿಸಬಹುದು ಎಂದು ಆಶ್ರಫ್ ಕಕ್ಕಿಂಜೆ ಹೇಳಿದರು.

ಅವರು ಜ.2ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ವ್ಯಾಪಾರಕ್ಕೆ ಬದಲಾವಣೆ ಕಕ್ಕಿಂಜೆ ಪಟ್ಟಣದ ಭವಿಷ್ಯದ ಬೆಳವಣಿಗೆಗೆ ಅಡ್ಡಿ ತರುವ ಸಾಧ್ಯತೆ ಇದೆ. ರಸ್ತೆಯ ಈಗಿನ ಸ್ಥಿತಿಯನ್ನು ಉಳಿಸುವುದು ಪಟ್ಟಣದ ಆರ್ಥಿಕ ಮತ್ತು ಸಾಮಾಜಿಕ ಸಮತೋಲನವನ್ನು ಕಾಪಾಡಲು ಅತೀ ಅಗತ್ಯವಾಗಿದೆ. ಆದ್ದರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆ ಕಾಮಗಾರಿಯನ್ನು ಪ್ರಸ್ತಾವಿತ ಬೈಪಾಸ್ ಮಾರ್ಗವನ್ನು ತಪ್ಪಿಸಿ, ಈಗಿರುವ ರಸ್ತೆಯ ಮೂಲಕ ಮುಂದುವರಿಸಬೇಕೆಂದು ಗುತ್ತಿಗೆದಾರರು ಸಂಸ್ಥೆಗೆ ಸೂಚನೆ ನೀಡುವಂತೆ ಒತ್ತಾಯಿಸಿದರು. ಈ ಕ್ರಮವು ಪಟ್ಟಣದ ಜನರ ಮತ್ತು ವ್ಯಾಪಾರಿಗಳ ಹಿತಾಶಕ್ತಿಯನ್ನು ಕಾಪಾಡುವಂತೆ ಮಾಡುತ್ತದೆ ಎಂದು ಒತ್ತಾಯಿಸಿದರು. ಪೇಟೆ ಮೂಲಕ ಹೋಗಲು ಅಂಗಡಿ ಹೊಂದಿರುವವರು, ಪೇಟೆಯಲ್ಲಿ ಜಾಗ ಹೊಂದಿರುವವರು ಬೆಂಬಲ ನೀಡಿದ್ದಾರೆ.

ಬೈಪಾಸ್ ರಸ್ತೆ ಬೇಡ:
ಈ ವಿಷಯದ ಕುರಿತು ತಾವುಗಳು ಸೂಕ್ತ ಕ್ರಮ ಸೂಕ್ಷ್ಮ ಕ್ರಮ ಕೈಗೊಳ್ಳುವಂತೆ ಹಾಗೂ ಕಕ್ಕಿಂಜೆ ಮತ್ತು ಇಲ್ಲಿ ನೆಲೆಸಿರುವ ಗ್ರಾಮಸ್ಥರಿಗೆ ಬೆಂಬಲ ನೀಡುವಂತೆ ಪತ್ರಿಕಾಗೋಷ್ಠಿಯಲ್ಲಿ ಈ ಭಾಗದ ನಾಗರಿಕರು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ರಹೀಂ, ತಾ.ಪಂ. ಮಾಜಿ ಸದಸ್ಯ ಪಿ.ಟಿ. ಸೆಬಾಸ್ಟಿನ್, ಇಲ್ಯಾಸ್, ಜಬೈದ್ ಭಂಡಸಾಲೆ, ಸಂಶುದ್ಧೀನ್ ಬೀಟಿಗೆ, ಸಿದ್ಧಿಕ್ ಅರೆಕ್ಕಲ್, ಹರೀಶ್ ಬಾಬಾ, ತೌಸಿಫ್, ಮಹಮ್ಮದ್ ಶಬೀರ್ ಉಪಸ್ಥಿತರಿದ್ದರು.

Related posts

ಮಡಂತ್ಯಾರು ಗ್ರಾಮ ಪಂಚಾಯತ್ ಆಕರ್ಷಣೀಯ ಸಖೀ ಮತಗಟ್ಟೆ

Suddi Udaya

ಎಲ್‌.ಸಿ.ಆರ್‌. ಇಂಡಿಯನ್ ಡಿಗ್ರಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

Suddi Udaya

ಕೊಯ್ಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ: ಅಧ್ಯಕ್ಷರಾಗಿ ಕೇಶವ ಗೌಡ , ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್

Suddi Udaya

ಶ್ರೀ ಧ. ಮಂ. ಕಾಲೇಜಿನಲ್ಲಿ ತುಳು ಜಾನಪದ ಮಹಾಕವಿ ಮಾಚಾರ್ ಗೋಪಾಲ ನಾಯ್ಕ ಸಂಸ್ಮರಣೆ ಮತ್ತು ತುಳುವ ಮೌಖಿಕ ಪರಂಪರೆ ವಿಷಯದ ಕುರಿತು ವಿಶೇಷ ಉಪನ್ಯಾಸ

Suddi Udaya

ಚಾರ್ಮಾಡಿ ಗ್ರಾ.ಪಂ. ಎದುರು ನಿರ್ಮಿತ ಗುಡಿಸಲು ತೆರವುಗೊಳಿಸುವಂತೆ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿ ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ

Suddi Udaya

ಶ್ರೀ ಗುರುದೇವ ಸಹಕಾರ ಸಂಘದ 28ನೇ ಶಾಖೆ ಗುರುಪುರ-ಕೈಕಂಬದಲ್ಲಿ ಉದ್ಘಾಟನೆ

Suddi Udaya
error: Content is protected !!