July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಅಖಿಲ ಭಾರತ ಬ್ಯಾರಿ ಮಹಾಸಭಾ ಪ್ರತಿನಿಧಿ ಸಭೆಯ ಪೂರ್ವಭಾವಿ ಸಭೆ

ಬೆಳ್ತಂಗಡಿ: ಅಖಿಲ ಭಾರತ ಬ್ಯಾರಿ ಮಹಾ ಸಭಾ ದ.ಕ. ಮಂಗಳೂರು ವತಿಯಿಂದ ಜ.8 ರಂದು ಕುದ್ಮುಲ್ ರಂಗರಾವ್ ವೇದಿಕೆ ಪುರಭವನ ಮಂಗಳೂರಿನಲ್ಲಿ ನಡೆಯುವ ದ.ಕ.ಜಿಲ್ಲಾ ಪ್ರತಿನಿಧಿ ಸಭೆಯ ಪೂರ್ವಭಾವಿ ಸಭೆಯು ಜಮ್ಯೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಬಿ, ಶೇಕುಂಞ ಯವರು ಗುರುತು ಚೀಟಿ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿ ಹಾಗೂ ವೀಕ್ಷಕರಾಗಿ ಅ.ಭಾ.ಬ್ಯಾ.ಮಹಾಸಭದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಆಗಮಿಸಿ ಪ್ರತಿನಿಧಿ ಸಭೆಯ ಕಾರ್ಯರೂಪಗಳನ್ನು ತಿಳಿಸಿದರು.

ಅ.ಭಾ.ಬ್ಯಾ.ಮ. ಸಭೆಯ ಉಪಾಧ್ಯಕ್ಷ ಯು.ಕೆ. ಮೋನು ಪ್ರತಿನಿಧಿ ಸಭೆಯ ಜವಾಬ್ದಾರಿಗಳನ್ನು ತಿಳಿಸಿದರು. ಮಹಾ ಸಭಾದ ಸದಸ್ಯರುಗಳಾದ ಹುಸೈನ್, ಅಶ್ರಫ್ ಸುರತ್ಕಲ್, ಉಮರ್ ಮದ್ದಡ್ಕ, ಮಹಮ್ಮದ್ ಉಜಿರೆ, ಮುಸ್ತಫಾ ಜಿ.ಕೆ., ಬಿ.ಎಮ್.ಹನೀಫ್, ಅಕ್ಬರ್ ಬೆಳ್ತಂಗಡಿ, ಖಾಲಿದ್ ಪುಲಾಬೆ,ನವಾಝ್ ಕಟ್ಟೆ, ಬದ್ರುದ್ದೀನ್ ಕಾಜೂರು, ಉಮರ್ ಚಪ್ಪಲ್ ಮಾಟ್೯, ಉಮರ್ ಮಟನ್, ಹಸೈನಾರ್ ಬಿಬಿಎಸ್, ಉಮರ್ ಕುಂಞ ನಾಡ್ಜೆ ಸ್ವಾಗತಿಸಿ, ಅಬ್ಬೋನು ಮದ್ದಡ್ಕ ವಂದಿಸಿದರು.

Related posts

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೆಳಕು ಕಾರ್ಯಕ್ರಮ

Suddi Udaya

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಲೋತ್ಸವ

Suddi Udaya

ಆ. 7 -16: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಭೆ

Suddi Udaya

ಸಿಎ ಅಂತಿಮ ಪರೀಕ್ಷೆ ಫಲಿತಾಂಶ: ಮುದ್ದಾಡಿಯ ದೀಪಕ್ ಹೆಗ್ಡೆಗೆ 28ನೇ ರ್‍ಯಾಂಕ್

Suddi Udaya
error: Content is protected !!