July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಸಮಸ್ಯೆ

ವೇಣೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ವೇಣೂರು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

ಬೆಳ್ತಂಗಡಿ : ವೇಣೂರು ವಲಯ ಅರಣ್ಯ ವ್ಯಾಪ್ತಿಯ ಚೆನ್ನೈತೋಡಿ, ಅಜ್ಜಿಬೆಟ್ಟು, ಎಲಿಯನಡುಗೋಡು, ಕುಕ್ಕಿಪಾಡಿ ಗ್ರಾಮಗಳ ವಿವಿಧ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಅಲ್ಲಲ್ಲಿ ಸಾರ್ವಜನಿಕರಿಗೆ ಕಂಡುಬರುತ್ತಿರುವ ಕಾರಣ ತುಳುನಾಡ ರಕ್ಷಣ ವೇದಿಕೆ ವಾಮದಪದವು ಘಟಕದ ವತಿಯಿಂದ ಅರಣ್ಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಾಲೋಚನ ಸಭೆಯನ್ನು 2024 ಡಿ.30 ರಂದು ನಡೆಸಿದ್ದು ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಲು ತೀರ್ಮಾನಿಸಲಾಯಿತು.

ಪ್ರಸ್ತುತ ಚಿರತೆಯ ಓಡಾಟ ಹೆಚ್ಚಾಗಿ ಕಂಡುಬಂದಿರುವ ಚೆನ್ನೈತೋಡಿ ಗ್ರಾಮದ ಚೆನ್ನೈತೋಡಿ ಗುತ್ತು , ಗೋಂಜಗುತ್ತು ಹಾಗೂ ಎಲಿಯನಡುಗೋಡು ಗ್ರಾಮದ ಕುತ್ಲೋಡಿ ಎಂಬಲ್ಲಿ ಒಟ್ಟು ಮೂರು ಜಾಗಗಳಲ್ಲಿ ಸದ್ಯ ಅರಣ್ಯ ಇಲಾಖೆಯ ವತಿಯಿಂದ ಜ.3 ರಂದು ಬೋನು ಅಳವಡಿಸಿದ್ದು ಸಾರ್ವಜನಿಕರು ಹಾಗೂ ವೇಣೂರು ಅರಣ್ಯ ಇಲಾಖೆಯ ವತಿಯಿಂದ ಪ್ರತಿನಿತ್ಯ ನಿಗಾ ವಹಿಸಲಾಗುತ್ತಿದೆ.

ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರಿಯವರ ನಿರ್ದೇಶನದಂತೆ ವೇಣೂರು ಶಾಖೆ ಉಪವಲಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ವಿಶೇಷ ಕರ್ತವ್ಯ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಸುರೇಶ್, ಅರಣ್ಯ ವೀಕ್ಷಕರಾದ ಸುಖೇಶ್, ಸಂತೋಷ್, ಕರಾವಳಿ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ , ಸಾರ್ವಜನಿಕರಾದ ನಾರಾಯಣ ಸೇವಂತ, ಜನಾರ್ಧನ ಪೂಜಾರಿ, ಸುರೇಶ, ಪ್ರಮೋದ್ ಜೊತೆಯಲ್ಲಿದ್ದರು.

ಬೆಳ್ತಂಗಡಿಯ ಅಗ್ನಿಶಾಮಕ ದಳದ ಅಧಿಕಾರಿ ಉಸ್ಮಾನ್ ಮಾಹಿತಿ ನೀಡಿದರು.

Related posts

ಬೆಳ್ತಂಗಡಿ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ಹಾಗೂ ಕ್ಷೇತ್ರ ಸಮಿತಿ ವತಿಯಿಂದ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ

Suddi Udaya

ಸೌತಡ್ಕ ಬಯಲು ಗಣಪತಿ ದೇವಸ್ಥಾನಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಭೇಟಿ

Suddi Udaya

ಕಳಿಯ ಗ್ರಾಮದ ವಾರ್ಡ್ ಗಳಲ್ಲಿ ಅಗತ್ಯವಿದ್ದ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಲ್ಲಿ ಸೋಲಾರ್ ದೀಪ ಅಳವಡಿಕೆ

Suddi Udaya

ಕುತ್ಲೂರು ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಬೃಹತ್ ಆಧಾರ್ ನೋಂದಣಿ/ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮೆ ಮೇಳ

Suddi Udaya

ನ.29: ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ನೆರಿಯ, ಪುದುವೆಟ್ಟು, ಮುಂಡಾಜೆ, ಕಲ್ಮಂಜದಲ್ಲಿ ಜನಸ್ಪಂದನಾ ಸಭೆ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀದುರ್ಗಾಟೆಕ್ಸ್ ಟೆಲ್ಸ್ ನಲ್ಲಿ ಹೊಸ ಕಲೆಕ್ಷನ್‌ನೊಂದಿಗೆ ಶೇ.10 ರಿಂದ 20ರಷ್ಟು ಡಿಸ್ಕೌಂಟ್

Suddi Udaya
error: Content is protected !!