April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪರೀಕ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪರೀಕ: ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಪರೀಕ ಇಲ್ಲಿ ಮಾ. 06 ರಂದು ಜರಗಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಡಿ ಹರ್ಷೇಂದ್ರ ಕುಮಾರ್‌ರವರ ನೇತೃತ್ವದಲ್ಲಿ ಜ.03 ರಂದು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದ ರಾಜರ್ಷಿ ಮೀಟೀಂಗ್ ಹಾಲ್‌ನಲ್ಲಿ ಜರಗಿತು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರವರು ಉಪಸ್ಥಿತರಿದ್ದು, ತಮ್ಮ ಸಂಪೂರ್ಣ ಸಹಕಾರವನ್ನು ತಿಳಿಸುತ್ತಾ ಯಾವ ರೀತಿ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ತನ್ನ ಅನುಭವದ ಮಾತುಗಳಿಂದ ತಿಳಿಸಿದರು. ಡಿ ಹರ್ಷೇಂದ್ರ ಕುಮಾರ್‌ರವರು ತಮ್ಮ ಶುಭನುಡಿಗಳಲ್ಲಿ ಊರಿನ ಎಲ್ಲಾ ಸಮುದಾಯದವರ ಸಹಕಾರವನ್ನು ಬಯಸಿ ಈ ಊರಿಗೆ ಮತ್ತು ಎಲ್ಲಾ ಜನರಿಗೆ ಅನುಕೂಲವಾಗುವಂತೆ ಶ್ರೀ ದೇವರ ಆಶೀರ್ವಾದದೊಂದಿಗೆ ಎಲ್ಲರೂ ಬಂದು ಭಾಗವಹಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಶಯವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊತ್ತೇಸರರು ಶ್ರೀನಿವಾಸ, ಪರೀಕ ಮಹಾಲಿಂಗೇಶ್ವರ ದೇವಸ್ಥಾನ, ಹೃಷಿಕೇಶ್ ಹೆಗ್ಡೆ , ಜನಜಾಗೃತಿ ವೇದಿಕೆ, ಜಿಲ್ಲಾಧ್ಯಕ್ಷ ಸತ್ಯಾನಂದ ನಾಯಕ್, ಹಿರೇಬೆಟ್ಟು ಬಿಲ್ಲವ ಸಂಘ, ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಮೊಗವೀರ ಸಭಾ ಬೆಳ್ಳಂಪಳ್ಳಿ ಅಧ್ಯಕ್ಷ ಬಾಲು ಕೋಟ್ಯಾನ್, ಪಂಚಾಯತ್ ವಾರ್ಡ್ ಸದಸ್ಯ ಇಸ್ಮಾಯಿಲ್, ನಂದಕುಮಾರ್ ಉಡುಪಿ, ಗಣೇಶ್ ರಾವ್ ಉಡುಪಿ, ಮಹಾವೀರ ಅಜ್ರಿ ಧರ್ಮಸ್ಥಳ, ದುಗ್ಗೇಗೌಡ ಉಡುಪಿ, ಶ್ರೀ ಬಿ ಸೀತಾರಾಮ ತೋಳ್ವಾಡಿತ್ತಾಯ ಕಾರ್ಯದರ್ಶಿಗಳು ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಡಾ|| ಗೋಪಾಲ ಪೂಜಾರಿ, ಮುಖ್ಯವೈದ್ಯಾಧಿಕಾರಿಗಳು ಪರೀಕ ಸೌಖ್ಯವನ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯದೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Related posts

ತಲೆಮರೆಸಿಕೊಂಡಿದ್ದ ಖತರ್ನಾಕ್ ಕಳ್ಳನ ಹೆಡೆ ಮುರಿ ಕಟ್ಟಿದ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ ತಂಡ

Suddi Udaya

ಅಪಘಾತವಾದ ಅಂಬುಲೆನ್ಸ್‌ನಲ್ಲಿ‌ದ್ದ‌ ಗಾಯಾಳು ಮಹಿಳೆ ಸಾವು

Suddi Udaya

ಜೆಸಿ ಸಪ್ತಾಹಕ್ಕೆ 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಜೆಸಿಐ ಮಡಂತ್ಯಾರಿನಿಂದ ವರ್ಣರಂಜಿತ ಜೇಸಿ ಸಪ್ತಾಹ ‘ವಿಜಯ’-2024: ವಿವಿಧ ಕ್ಷೇತ್ರದ 15 ಸಾಧಕರಿಗೆ ಜೇಸಿ ಪುರಸ್ಕಾರ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಯಕ್ಷಗಾನ

Suddi Udaya

ಉಜಿರೆ: ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ಜಾಗೃತಿ ಕಾರ್ಯಕ್ರಮ

Suddi Udaya

ಶ್ರೀ ಧ. ಮಂ.  ಆಂಗ್ಲ ಮಾಧ್ಯಮ  ಶಾಲೆಯಲ್ಲಿ  ಆಂಗ್ಲಭಾಷಾ ಶಿಕ್ಷಕರ  ಕಾರ್ಯಾಗಾರ

Suddi Udaya

ಮೈರೋಳ್ತಡ್ಕ ಪುತ್ತಿಲ ನಿವಾಸಿ ಕಮಲ ನಿಧನ

Suddi Udaya
error: Content is protected !!