37.5 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪರೀಕ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪರೀಕ: ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಪರೀಕ ಇಲ್ಲಿ ಮಾ. 06 ರಂದು ಜರಗಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಡಿ ಹರ್ಷೇಂದ್ರ ಕುಮಾರ್‌ರವರ ನೇತೃತ್ವದಲ್ಲಿ ಜ.03 ರಂದು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದ ರಾಜರ್ಷಿ ಮೀಟೀಂಗ್ ಹಾಲ್‌ನಲ್ಲಿ ಜರಗಿತು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರವರು ಉಪಸ್ಥಿತರಿದ್ದು, ತಮ್ಮ ಸಂಪೂರ್ಣ ಸಹಕಾರವನ್ನು ತಿಳಿಸುತ್ತಾ ಯಾವ ರೀತಿ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ತನ್ನ ಅನುಭವದ ಮಾತುಗಳಿಂದ ತಿಳಿಸಿದರು. ಡಿ ಹರ್ಷೇಂದ್ರ ಕುಮಾರ್‌ರವರು ತಮ್ಮ ಶುಭನುಡಿಗಳಲ್ಲಿ ಊರಿನ ಎಲ್ಲಾ ಸಮುದಾಯದವರ ಸಹಕಾರವನ್ನು ಬಯಸಿ ಈ ಊರಿಗೆ ಮತ್ತು ಎಲ್ಲಾ ಜನರಿಗೆ ಅನುಕೂಲವಾಗುವಂತೆ ಶ್ರೀ ದೇವರ ಆಶೀರ್ವಾದದೊಂದಿಗೆ ಎಲ್ಲರೂ ಬಂದು ಭಾಗವಹಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಶಯವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊತ್ತೇಸರರು ಶ್ರೀನಿವಾಸ, ಪರೀಕ ಮಹಾಲಿಂಗೇಶ್ವರ ದೇವಸ್ಥಾನ, ಹೃಷಿಕೇಶ್ ಹೆಗ್ಡೆ , ಜನಜಾಗೃತಿ ವೇದಿಕೆ, ಜಿಲ್ಲಾಧ್ಯಕ್ಷ ಸತ್ಯಾನಂದ ನಾಯಕ್, ಹಿರೇಬೆಟ್ಟು ಬಿಲ್ಲವ ಸಂಘ, ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಮೊಗವೀರ ಸಭಾ ಬೆಳ್ಳಂಪಳ್ಳಿ ಅಧ್ಯಕ್ಷ ಬಾಲು ಕೋಟ್ಯಾನ್, ಪಂಚಾಯತ್ ವಾರ್ಡ್ ಸದಸ್ಯ ಇಸ್ಮಾಯಿಲ್, ನಂದಕುಮಾರ್ ಉಡುಪಿ, ಗಣೇಶ್ ರಾವ್ ಉಡುಪಿ, ಮಹಾವೀರ ಅಜ್ರಿ ಧರ್ಮಸ್ಥಳ, ದುಗ್ಗೇಗೌಡ ಉಡುಪಿ, ಶ್ರೀ ಬಿ ಸೀತಾರಾಮ ತೋಳ್ವಾಡಿತ್ತಾಯ ಕಾರ್ಯದರ್ಶಿಗಳು ಶಾಂತಿವನ ಟ್ರಸ್ಟ್ ಧರ್ಮಸ್ಥಳ, ಡಾ|| ಗೋಪಾಲ ಪೂಜಾರಿ, ಮುಖ್ಯವೈದ್ಯಾಧಿಕಾರಿಗಳು ಪರೀಕ ಸೌಖ್ಯವನ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯದೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Related posts

ಗೇರುಕಟ್ಟೆ: ಕೊರಂಜ ನಿವಾಸಿ ದೇವಕಿ ಆಳ್ವ ನಿಧನ

Suddi Udaya

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಗೌರವ

Suddi Udaya

ಕೊಲ್ಲಿ ಶ್ರೀ ದುರ್ಗಾಪಮೇಶ್ವರಿ ದೇವಸ್ಥಾನಕ್ಕೆ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್ ಭೇಟಿ, ಕೆಲಸಕಾರ್ಯಗಳ ವೀಕ್ಷಣೆ

Suddi Udaya

ವಿಜಯ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಗೆ ‘ದ.ಕ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ’ ಪ್ರಶಸ್ತಿ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಾವೂರು ಗ್ರಾಮ ಸಮಿತಿಯ ಸಭೆ

Suddi Udaya

ಕಳೆಂಜ: ನಂದಗೋಕುಲ ಗೋಶಾಲೆಗೆ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭೇಟಿ

Suddi Udaya
error: Content is protected !!