April 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ ನೂತನ ದೇವಾಲಯದ ಶಿಲಾನ್ಯಾಸ

ಮಚ್ಚಿನ: ಮಾಣೂರು ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನದ ನೂತನ ದೇವಾಲಯದ ಶಿಲಾನ್ಯಾಸವು ವೇದಮೂರ್ತಿ ಬ್ರಹ್ಮಶ್ರೀ ವಳಕುಂಜ ವೆಂಕಟರಮಣ ಜೋಯಿಸರ ಮಾರ್ಗದರ್ಶನದಲ್ಲಿ, ವೇದಮೂರ್ತಿ ವಾಸ್ತುಶಿಲ್ಪ ಬ್ರಹ್ಮಶ್ರೀ ಗಿರೀಶ ಶರ್ಮರ ನಿರ್ದೇಶಾನುಸಾರ, ಬ್ರಹ್ಮಶ್ರೀ ಪರಕ್ಕಜೆ ಆನಂತನಾರಾಯಣ ಭಟ್ಟರ ಆಚಾರ್ಯತ್ವದಲ್ಲಿ ಜ.11 ರಂದು ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಎಂ.ಹರ್ಷ ಸಂಪಿಗೆತ್ತಾಯ ವಹಿಸಿದ್ದರು. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ದೀಪ ಪ್ರಜ್ವಲನೆ ಮಾಡಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶುಭಶಂಸನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಸಿಂಹ ನಾಯಕ್, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ, ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ‍್ಯಾರು, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ವಿಠಲ ಶೆಟ್ಟಿ ಮೂಡಾಯೂರು, ಮಾಣೂರು ಸಪರಿವಾರ ದೇವಸ್ಥಾನದ ಆಡಳಿತಾಧಿಕಾರಿ ಗೌರಿಶಂಕರ ಎಚ್.ಎಸ್., ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕುಲಾಲ್, ಅರ್ಚಕರಾದ ರಾಮಚಂದ್ರ ಭಟ್, ಎಂ.ಕೃಷ್ಣಭಟ್, ಮಚ್ಚಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೋಮವತಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ, ಯಶೋಧರ ಶೆಟ್ಟಿ ಅರ್ಕಜೆ, ಪ್ರಭಾಕರ ಪೂಜಾರಿ ಮುದಲಡ್ಕ, ಪ್ರಭಾಕರ ಪ್ರಭು, ಚಿತ್ತರಂಜನ್ ಕುರುಡಂಗೆ, ಡೀಕಯ್ಯ ಮೂಲ್ಯ ಹರ್ಮಾಡಿ,ಅವಿನಾಶ್ ಕುಲಾಲ್ ಮಾಣೂರು,ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಮಾಣೂರು,ಜೊತೆ ಕಾರ್ಯದರ್ಶಿ ನವೀನ್ ಮೂಲ್ಯ,ಕೋಶಾಧಿಕಾರಿ ಪ್ರಸಾದ್ ಎಮ್.ಕೆ ಮಾಣೂರು,ನಿಶಾಪ್ರಸಾದ್ ಮಾಣೂರು,ಗೌರವ ಸಲಹೆಗಾರಾರದ ಗೋಪಾಲ ಪೂಜಾರಿ ಕೋಲಾಜೆ, ಸದಸ್ಯರಾದ ಶಿವಪ್ಪ ಪೂಜಾರಿ ಮಾಣೂರು, ಸುಬ್ರಹ್ಮಣ್ಯ ಭಟ್ ಹರ್ಮಾಡಿ, ಮಂಜುನಾಥ ಮಾಣೂರು, ಹರೀಶ್ ಪ್ರಭು ಮುದಲಡ್ಕ, ಯತೀಶ್ ರೈ ಕೈಲ,ಶಾಂತ ಕುಲಾಲ್ ಹರ್ಮಾಡಿ, ಶಶಿಕಲಾ ಮಾಣೂರು, ಎಚ್.ಎಸ್. ಉಪಸ್ಥಿತರಿದ್ದರು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಸ್ವಾಗತಿಸಿ, ವಕೀಲ ವಸಂತ ಮರಕಡ ಕಾರ್ಯಕ್ರಮ ನಿರೂಪಿಸಿ, ವಕೀಲ ಜಗದೀಶ್ ಧನ್ಯವಾದವಿತ್ತರು.

Related posts

ಲಾಯಿಲ ಗ್ರಾ.ಪಂ. ಅಧ್ಯಕ್ಷರಾಗಿ ಜಯಂತಿ ಎಂ.ಕೆ. ಉಪಾಧ್ಯಕ್ಷರಾಗಿ ಸುಗಂಧಿ ಜಗನ್ನಾಥ್ ಆಯ್ಕೆ

Suddi Udaya

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: 6 ಕ್ಷೇತ್ರಕ್ಕೆ ಅವಿರೋಧ ಆಯ್ಕೆ: 6 ಸ್ಥಾನ ಪದ್ಮಗೌಡ ನೇತೃತ್ವದ ತಂಡಕ್ಕೆ ಜಯ

Suddi Udaya

ಉಜಿರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳಾಲು ಪೆರಿಯಡ್ಕ ಶಾಲಾ ಅಭಿವೃದ್ದಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ಅವರಿಗೆ ಸನ್ಮಾನ

Suddi Udaya

ಕೊಕ್ಕಡ: ಯುವಕ ಸಂಶಯಾಸ್ಪದ ಸಾವು: ಪೊಲೀಸರ ತನಿಖೆ

Suddi Udaya

ಬಳಂಜ: ಶ್ರೀಮಾತ ನಾಲ್ಕೂರು ಸಂಘಟನೆಯಿಂದ ವಾಲಿಬಾಲ್ ಪಂದ್ಯಾವಳಿ, ಸಾಧಕರಿಗೆ ಸನ್ಮಾನ

Suddi Udaya
error: Content is protected !!