23.5 C
ಪುತ್ತೂರು, ಬೆಳ್ತಂಗಡಿ
June 4, 2025
ಗ್ರಾಮಾಂತರ ಸುದ್ದಿ

ಮಾಲಾಡಿ: ಪುರಿಯ-ಕುರಿಯೋಡಿರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ವಿರೋಧ: ಶೀಘ್ರ ಕಾಮಗಾರಿಗೆ ನಾಗರಿಕರ ಒತ್ತಾಯ

ಮಾಲಾಡಿ: ಇಲ್ಲಿಯ ಪುರಿಯ-ಕುರಿಯೋಡಿ ರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ನಾಗರಿಕರು ವಿರೋಧ ವ್ಯಕ್ತಪಡಿಸಿ, ಶೀಘ್ರ ಕಾಮಗಾರಿಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.
ಪುರಿಯ ಕುರಿಯೋಡಿ ಗ್ರಾ.ಪ.ರಸ್ತೆಯಲ್ಲಿ ದಂಪತಿ ತನ್ನ ಮಗುವನ್ನು ಬೈಕಿನಲ್ಲಿ ಕುಳ್ಳಿರಿಸಿ ಸಂಚಾರ ಮಾಡುವಾಗ ಬೈಕ್ ಮಗುಚಿ ಬಿದ್ದು. ಮಗು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಗ್ರಾಮೀಣ ರಸ್ತೆಯಾದ ಪುರಿಯ-ಅಂಗನವಾಡಿ ಶಾಲೆಯ ಎದುರಿನ ಮಣ್ಣಿನ ಮಾರ್ಗ ಮುಂದುವರಿದು ಪ್ರಥಮ ತಿರುವಿನಲ್ಲಿ ರಸ್ತೆ ತೀರಾ ಅಪಾಯಕಾರಿ ಹಂತದಲ್ಲಿ ಇದ್ದು, ಕಾಂಕ್ರಿಟೀಕರಣ ಅವಶ್ಯಕತೆ ಇದೆ ಸದ್ರಿ ಪ್ರದೇಶದಲ್ಲಿ ಗೊಂದಲದ ಕಾರಣ ನೀಡಿ ಕಾಮಗಾರಿ ಸ್ಥಳಾಂತರ ಮಾಡಬಾರದು,
ನೀರು ಹೋಗುವ ಚರಂಡಿಗೆ ನೀರಾವರಿ ಪೈಪ್ ಹಾಕಿ ಮುಚ್ಚಲಾಗಿದ್ದು, ಸದ್ರಿ ರಸ್ತೆ ಚರಂಡಿಯನ್ನು ಸಮರ್ಪಕಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಲ್ಲದೆ ಊರ ಪ್ರದೇಶದಲ್ಲಿ ರಸ್ತೆ ಅಗೆದು ಜಲ್ಲಿ ಹಾಕಿ ಹಲವು ಸಮಯಗಳಾಗಿದ್ದು, ಜಿಲ್ಲಾ ಪಂಚಾಯತಗೆ ಮನವಿ ಮಾಡಲಾಗಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿದಾರರಿಗೆ ಸೂಚನೆ ಕೊಟ್ಟಿದೆ ಎಂಬ ಪತ್ರ ಮುಖೇನ ಮಾಹಿತಿ ಲಭ್ಯವಾಗಿದ್ದು, ಈ ಕಾಮಗಾರಿ ಸಾರ್ವಜನಿಕ ಹಿತದೃಷ್ಟಿಯಿಂದ ಶೀಘ್ರವಾಗಬೇಕು,ಅಲ್ಲದೆ ಪುಂಜಾಲಕಟ್ಟೆ-ಕುಕ್ಕೇಡಿ ಜಿ.ಪ.ರಸ್ತೆ ಕಾಮಗಾರಿ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು
ಮಾಜಿ.ಗ್ರಾ.ಸದಸ್ಯ ಗುರುಪ್ರಸಾದ್ ಮಾಲಾಡಿ ಒತ್ತಾಯಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಗುರುಪ್ರಸಾದ್ ಮಾಲಾಡಿ. ಸಾಮಾಜಿಕ ಕಾರ್ಯಕರ್ತರಾದ ರಾಘವ ದೇವಾಡಿಗ, ಬಾಬು ದೇವಾಡಿಗ, ಚಂದ್ರಯ ದೇವಾಡಿಗ ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಉಜಿರೆ: ರತ್ನಮಾನಸದಲ್ಲಿ ಮಾತೃ, ಪಿತೃ ,ಪೋಷಕರ ಸಭೆ ಹಾಗೂ ಗುರು ವಂದನ ಕಾರ್ಯಕ್ರಮ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಬಳಂಜ ಶಾಲೆಯಲ್ಲಿ ಕಾರ್ಯಾಗಾರ

Suddi Udaya

ಲಾಯಿಲ ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಧರ್ಮಸ್ಥಳ : ಇಬ್ಬರು ಸರಕಳ್ಳಿಯರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಪ್ರವೀಣ್ ಮದ್ದಡ್ಕ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ಜಾತಿ ನಿಂದನೆ ಪೋಸ್ಟ್: ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ರಾಜ್ಯಮಟ್ಟದ ವಿಜ್ಞಾನ ಸಮಾವೇಶ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳ ಎರಡು ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya
error: Content is protected !!