September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿ

ನದಿಗೆ ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಅಸಹಜವಾಗಿ ಸಾವು

ಮುಂಡಾಜೆ: ನದಿಗೆ ಬಲೆಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರ ಮೃತದೇಹ ಸ್ಥಳೀಯ ತೋಟವೊಂದರಲ್ಲಿ ಪತ್ತೆಯಾದ ಘಟನೆ ಆ.21ರಂದು ಮುಂಡಾಜೆಯಲ್ಲಿ ನಡೆದಿದೆ.ಮುಂಡಾಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಚೆನ್ನಿಗುಡ್ಡೆ ನಿವಾಸಿ ಪೂವಪ್ಪ ನಾಯ್ಕ(7೦ವ) ಅಸಹಜವಾಗಿ ಮೃತಪಟ್ಟವರಾಗಿದ್ದಾರೆ.

ಈ ಬಗ್ಗೆ ಮೃತರ ಪುತ್ರ ದಿನೇಶ್ ನಾಯ್ಕ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ನನ್ನ ತಂದೆ ಪೂವಪ್ಪ ನಾಯ್ಕ ಅವರು ಆ.21 ರಂದು ಮಧ್ಯಾಹ್ನ 3 ಗಂಟೆಗೆ ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ಸೇತುವೆಯ ಮೃತ್ಯುಂಜಯ ನದಿಗೆ ಮೀನು ಹಿಡಿಯಲೆಂದು ಬಲೆ ಹಿಡಿದುಕೊಂಡು ಹೋಗಿ ನದಿಯ ಸೇತುವೆ ಅಡಿಯಲ್ಲಿ ಬಲೆ ಹಾಕಿ ನನ್ನನ್ನು ಅಲ್ಲೇ ನಿಲ್ಲಿಸಿ, ಬೇರೆ ಸ್ಥಳದಲ್ಲಿ ಬಲೆ ಹಾಕಿ ಮೀನು ಹಿಡಿದುಕೊಂಡು ಸಂಜೆ 6.30 ಕ್ಕೆ ಬಂದವರು, ಡ್ಯಾಂ ಬಳಿ ಹಾಕಿದ ಬಲೆ ತೆಗೆಯಯಲೆಂದು ವಾಪಾಸ್ಸು ಹೋದವರು ರಾತ್ರಿ 7.30 ತನಕವೂ ಹಿಂತಿರುಗಿ ಬಾರದೇ ಇದ್ದುದರಿಂದ, ಕೂಗಿ ಕರೆದರೂ ಯಾವುದೇ ಉತ್ತರ ಬಾರದೇ ಇದ್ದು, ಈ ವಿಚಾರವನ್ನು ಮನೆಯವರಿಗೆ ,ನೆರೆಕರೆಯವರಿಗೆ ಹಾಗೂ ಸಂಬಂದಿಕರಿಗೆ ತಿಳಿಸಿ, ಹುಡುಕಾಡಿದಾಗ ರಾತ್ರಿ ತಂದೆ ಪೂವಪ್ಪ ನಾಯ್ಕರು ನದಿ ಬದಿಯಲ್ಲಿರುವ ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ಸಂಜೀವ ಶೆಟ್ಟಿಯವರ ಅಡಿಕೆ ತೋಟದಲ್ಲಿ ಬಿದ್ದುಕೊಂಡಿದ್ದವರನ್ನು ಉಪಚರಿಸಿ ನೋಡಿದಾಗ ಬಾಯಲ್ಲಿ ನೊರೆ ಬಂದಿದ್ದು, ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ: ಬಿ.ಸಿ.ರೋಡಿನಿಂದ ದೇವರ ಆಭರಣ, ಉತ್ಸವ ಮೂರ್ತಿ ಮೆರವಣಿಗೆ

Suddi Udaya

ಧರ್ಮಸ್ಥಳ: ಯುಗಾದಿ ಬಳಗದ ಸ್ನೇಹ ಪರ್ವ-2 ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾತೃ ಪೂಜನ, ಮಾತೃ ವಂದನ ಮತ್ತು ಮಾತೃ ಭೋಜನ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ

Suddi Udaya

ತುಳುಕೂಟ ಇಸ್ರೇಲ್ ವತಿಯಿಂದ ಅಶಕ್ತರಿಗೆ ಆರ್ಥಿಕ ನೆರವು: ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರಿಂದ ಹಸ್ತಾಂತರ

Suddi Udaya

ವಾಣಿ ಕಾಲೇಜು: ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ‘ವಿದ್ಯಾ ಪ್ರವೇಶಂ’ ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ಕಲ್ಮಂಜ ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಜ್ಞಾನದೀಪ ಸಭಾಂಗಣ ಲೋಕಾರ್ಪಣೆ

Suddi Udaya
error: Content is protected !!