24.4 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

ವೇಣೂರು:ಪಡ್ಡಂದಡ್ಕ ನೂರುಲ್ ಹುಧಾ ಕೇಂದ್ರ ಮಸೀದಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನರವರಿಗೆ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪತ್ರಕರ್ತ ಎಚ್ ಮೊಹಮ್ಮದ್ ವೇಣೂರು ಮಾತಾಡಿ ಖತೀಬರಿಗೆ ಶುಭ ಹಾರೈಸಿದರು.

ಪ್ರಮುಖರಾದ ಚಿಕ್ಕಮಗಳೂರಿನ ಡಾ ಸಲೀಮ್ ಗರ್ಡಾಡಿ,ಅಬ್ದುಲ್ ರಹಿಮಾನ್ ಕಟ್ಟೆ,ರಫೀಕ್ ಪಡ್ಡ ,ಮಹಮ್ಮದ್ ಪಿಜೆ, ಖಾಲಿದ್ ಪುಲಬೆ, ಅಬ್ದು ಸಲಾಂ ಕೇಶವನಗರ, ನಜೀರ್ ಪೆರಿಂಜೆ ,ಪೆರಿಂಜೆ ಮದರಸದ ಅಧ್ಯಾಪಕ ಮೊಹಮ್ಮದ್ ಅಲ್ತಾಫ್ ,ಕೆಪಿ ಬಶೀರ್ ,ಶಬ್ಬೀರ್ ಕಟ್ಟೆ , ಶಬ್ಬೀರ್ ಪಡ್ಡ,ಸದರ್ ಮೊಹಲ್ಲಿಂ ಸೇರಿದಂತೆ ಸಿಬಂದಿವರ್ಗ ಜಮಾತಿನ ಸದಸ್ಯರು ಉಪಸ್ಥಿತರಿದ್ದರು.

ಮಸೀದಿ ಸಮಿತಿ ಮತ್ತು ಜಮಾತಿನ ಸದಸ್ಯರು ಶಾಲು ಹೊದಿಸಿ ಶುಭ ಹಾರೈಸಿದ ಬಗ್ಗೆ ಮಾತಾಡಿದ ಖತೀಬ್ ಅಶ್ರಫ್ ಫೈಝಿ, ಜಮಾತಿಗೆ, ಈ ನಾಡಿಗೆ ಮತ್ತು ದೇಶದ ಉನ್ನತಿಗಾಗಿ ಪ್ರಾರ್ಥಿಸುತ್ತೇನೆಂದರು. ಇಸ್ಮಾಯಿಲ್ ಎಚ್ ಗಾಂಧಿನಗರ ಸ್ವಾಗತಿಸಿ, ವಂದಿಸಿದರು.

Related posts

ಮಹಿಳೆಯ ಬ್ಯಾಗ್ ನಲ್ಲಿ ಇರಿಸಿದ್ದ ರೂ. 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಮುಂಡಾಜೆ ವಲಯದ ಚಾರ್ಮಾಡಿ-ಬಿ ಕಾರ್ಯಕ್ಷೇತ್ರದಲ್ಲಿ ನೂತನ ಸರಸ್ವತಿ ಸ್ವಸಹಾಯ ಸಂಘ ಉದ್ಘಾಟನೆ

Suddi Udaya

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

Suddi Udaya

ಹೃದಯ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಧರ್ಮಸ್ಥಳ ಜೋಡುಸ್ಥಾನ ನಿವಾಸಿ ಶೀನ ಗೌಡ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಕೊಕ್ಕಡ: ಬಲಿಪಗುಡ್ಡೆ ಶ್ರೀಮತಿ ಸುಶೀಲ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿ: ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ: ಶೀಘ್ರವಾಗಿ ಮನೆಯವರನ್ನು ಸ್ಥಳಾಂತರಿಸುವಂತೆ ಸೂಚನೆ

Suddi Udaya

ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya
error: Content is protected !!