25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ರಾಡಿ : ಗೋಳಿಯಂಗಡಿಯಲ್ಲಿ ಸ್ಕಿಡ್‌ ಆಗಿ ಬಿದ್ದ ಬೈಕ್ : ಸವಾರರಿಗೆ ಗಾಯ

ಕೊಕ್ರಾಡಿ : ಗೋಳಿಯಂಗಡಿ ಎಂಬಲ್ಲಿ ನಾರಾವಿ- ವೇಣೂರು ರಸ್ತೆಯಲ್ಲಿ ದ್ವಿಚಕ್ರ ವಾಹನವು ಚಾಲನಾ ಹತೋಟಿ ತಪ್ಪಿ ಸ್ಕಿಡ್‌ ಆಗಿ ಬಿದ್ದು ಸವಾರರಿಗೆ ಗಾಯಗಳಾದ ಘಟನೆ ಜ.13ರಂದು ನಡೆದಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.

ಜ.13 ರಂದು ರಾತ್ರಿ ಕೊಕ್ರಾಡಿ ಗ್ರಾಮದ ಗೋಳಿಯಂಗಡಿ ಎಂಬಲ್ಲಿ ನಾರಾವಿ- ವೇಣೂರು ರಸ್ತೆಯಲ್ಲಿ ದ್ವಿಚಕ್ರ ವಾಹನ ಅದರ ಸವಾರ ಚಾಲನಾ ಹತೋಟಿ ತಪ್ಪಿ ಸ್ಕಿಡ್‌ ಆಗಿ ಬಿದ್ದು ಸಹ ಸವಾರ ಲೋಹಿತ್‌ ರವರ ಕಾಲಿಗೆ ಹಾಗೂ ಸವಾರ ತಿಲಕೇಶ ರವರ ಕೈ ಕಾಲಿಗೆ ತರಚಿದ ಹಾಗೂ ಗುದ್ದಿದ ಗಾಯಗಳಾಗಿದ್ದು ಅಪಘಾತದಿಂದ ಉಂಟಾದ ನೋವು ಉಲ್ಬಣಿಸಿರುವುದರಿಂದ ಗಾಯಾಳುಗಳು ಉಜಿರೆ ಬೆನಕ ಆಸ್ಪತ್ರೆಗೆ ಹೋದ ಸಮಯ ಸಹ ಸವಾರ ಲೋಹಿತ್‌ ರವರ ಕಾಲಿನ ಎಕ್ಸರೇ ತೆಗೆದು ನೋಡಲಾಗಿ ಮೂಳೆ ಮುರಿತದ ಗಾಯಗಳಾಗಿ ಚಿಕಿತ್ಸೆಗೆ ದಾಖಲಾಗಿದ್ದು, ಸವಾರ ತಿಲಕೇಶ ಹೋರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಈ ಬಗ್ಗೆ ಪ್ರಥಮವಾಗಿ ಸವಾರರಿಬ್ಬರು ಅಣ್ಣ-ತಮ್ಮಂದಿರಾಗಿದ್ದರಿಂದ ದೂರು ನೀಡದೇ ಇದ್ದು ಈಗ ಸಹ ಸವಾರ ಲೋಹಿತ್‌ ರವರಿಗೆ ಉಂಟಾದ ಗಾಯ ತೀವ್ರಸ್ವರೂಪದ್ದಾಗಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ.

Related posts

ಡಿ.21: ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕದಲ್ಲಿ ಬೃಹತ್ ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ

Suddi Udaya

ಬಂದಾರು: ಕುಂಟಾಲಪಲ್ಕೆ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಪುನರ್ ರಚನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿವಾನಂದ ಪ್ರಭು ಅವರಿಗೆ ಶ್ರದ್ಧಾಂಜಲಿ

Suddi Udaya

ಕಾರಿಂಜ ಮಧ್ವ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಬೆಳ್ತಂಗಡಿಯ ಯುವಕ ಸ್ಥಳದಲ್ಲೆ ಸಾವು

Suddi Udaya

ಮುಂಡಾಜೆ: ಪಡೀಲು ಆನಂದ ನಾಯ್ಕ ನಿಧನ

Suddi Udaya

ಮದ್ದಡ್ಕ, ನೇರಳಕಟ್ಟೆ, ಪಣಕಜೆ ಭಾಗದಲ್ಲಿ ಪ್ರಯೋಜನಕ್ಕೆ ಬಾರದ ಏರ್ ಟೆಲ್ ಹಾಗೂ ಬಿಎಸ್.ಎನ್.ಎಲ್ ಟವರ್: ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಸ್ಥಳೀಯರು

Suddi Udaya
error: Content is protected !!