23.8 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಡ ಗ್ರಾ.ಪಂ. ಕಾರ್ಯದರ್ಶಿ ಕಿರಣ್‌ರಿಂದ ಮಾದರಿ ಕಾರ್ಯ: ಹಾರೆ ಹಿಡಿದು ಕೊಳವೆ ಬಾವಿಯ ಗುಂಡಿ ಮುಚ್ಚಿದ ಸರಕಾರಿ ನೌಕರ

ನಡ: ನೀರು ಸಿಗದ ಬೋರ್‌ವೆಲ್‌ಗಳನ್ನು (ಕೊಳವೆ ಬಾವಿ) ಮುಚ್ಚಾದೇ ಹಾಗೆಯೇ ಬಿಟ್ಟು ರಾಜ್ಯದಲ್ಲಿ ಹಲವು ಮಕ್ಕಳು ಪ್ರಾಣ ಕಳೆದುಕೊಂಡ ಘಟನೆಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದಕ್ಕೆ ಕಾರಣ ಬೋರ್‌ವೆಲ್ ಕೊರೆದ ನಂತರ ನೀರು ಸಿಗದಿದ್ದಾಗ ಮಾಲಕರು ಇದರ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸುತ್ತಿರುವುದೇ ಕಾರಣವಾಗಿದೆ.

ಇದೇ ರೀತಿಯ ಅಪಾಯಕಾರಿ ಕೊಳವೆ ಬಾವಿಯೊಂದು ನಡ ಶಾಲಾ ಬಳಿ ಇತ್ತು. ನಡ ಕಿರಿಯ ಪ್ರಾಥಮಿಕ ಶಾಲೆಯ ಬಳಿ 1 ತಿಂಗಳ ಹಿಂದೆ ಪಂಚಾಯತ್ ವತಿಯಿಂದ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ನೀರು ಸಿಗದೆ ಇದ್ದ ಕಾರಣ ಅದರ ಕೇಸಿಂಗ್ ಪೈಪ್ ಹೊರತೆಗೆದು ಗುಂಡಿಯನ್ನು ಮುಚ್ಚದೆ ಅದರ ಮೇಲೆ ಗೋಣಿಯನ್ನು ಹಾಕಿ ಕೊರೆದ ಕಂಪೆನಿಯವರು ಹಾಗೆ ಬಿಟ್ಟು ಹೋಗಿದ್ದರು. ಕೊರೆದ ಬೋರ್‌ವೆಲ್ ಗುಂಡಿಯನ್ನು ಹಾಗೆಯೇ ಬಿಟ್ಟಿರುವುದು ಕಂಡ ಒಬ್ಬ ಸರಕಾರಿ ನೌಕರ ತಾನೇ ಮುಂದೇ ಬಂದು ಹಾರೆ ಹಿಡಿದು ಗುಂಡಿ ಮುಚ್ಚಿದ ಘಟನೆ ನಡೆದಿದೆ.

ಬೋರ್‌ವೆಲ್ ಕೊರೆದು ಹಾಗೆಯೇ ಬಿಟ್ಟಿದ್ದ ಗುಂಡಿಯನ್ನು ಪಂಚಾಯತ್ ಕಾರ್ಯದರ್ಶಿ ಕಿರಣ್ ರವರು ತಾನೇ ಹಾರೆ ಹಿಡಿದು ಗುಂಡಿ ಮುಚ್ಚಿ, ಸಾರ್ವಜನಿಕರಿಗೆ ಆಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾರೆ. ಇಂತಹ ಒಬ್ಬ ಸರಕಾರಿ ನೌಕರ ನಮಗೆ ಕಾಣಸಿಗುವುದು ಬಹಳ ಅಪರೂಪ. ಅವರಲ್ಲಿ ಇರುವ ಈ ಗುಣ ಇತರರಿಗೆ ಪ್ರೇರಣೆಯಾಗಲಿ ಎಂದು ಗ್ರಾಮದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ಗೇರುಕಟ್ಟೆ ಎಸ್.ಎಸ್.ಎಫ್. ಯೂನಿಟ್ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಸಂತಾಪ

Suddi Udaya

ಡಾ. ಪ್ರಸನ್ನಕುಮಾರ ಐತಾಳರಿಗೆ “ಎ. ಶಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ” ಪ್ರಶಸ್ತಿ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ.ಯಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya

ಧರ್ಮಸ್ಥಳ: ಬೋಳಿಯರ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಗುದ್ದಿದ್ದ ಕಾಡಾನೆ: ಸ್ಕೂಟರ್ ಗೆ ಹಾನಿ

Suddi Udaya
error: Content is protected !!