ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಮಡಂತ್ಯಾರು ವಿಜಯ 2024 ರ ಶಾಶ್ವತ ಯೋಜನೆಗಳ ಆನಾವರಣ

ಮಡಂತ್ಯಾರು : ಜೆಸಿಐ ಮಡಂತ್ಯಾರಿನ 2024 ರ ಶಾಶ್ವತ ಯೋಜನೆಗಳಾದ ಶಿಶು ವಿಹಾರದ ಇಂಟರ್ಲಾಕ್ ಅಳವಡಿಕೆ ಮತ್ತು ಜೆಸಿ ವೃತ್ತದ ನವೀಕರಣದ ಅನಾವರಣ ಕಾರ್ಯಕ್ರಮವು ಜ.14 ರಂದು ನೆರವೇರಿತು.

ಮುಖ್ಯ ಅತಿಥಿಗಳಾಗಿ ಪೂರ್ವಾದ್ಯಕ್ಷ ಜೆಸಿ ಪ್ರವೀಣ್ ಕುಮಾರ್ ದೋಟ, ನಿಕಟ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆಸಿಐ ಪಿಪಿಪಿ ಕಾರ್ತಿಕೇಯ ಮಧ್ಯಸ್ಥ, ಗೌರವ ಅತಿಥಿಗಳಾಗಿ ವಲಯಾಧ್ಯಕ್ಷರು ಜೆಸಿಐ ಸೆನೆಟರ್ ಅಭಿಲಾಷ್ ಬಿ ಎ, ವಲಯ ಉಪಾಧ್ಯಕ್ಷರಾದ ಜೆಎಫ್ಎಮ್ ರಂಜಿತ್ ಹೆಚ್. , ಶಿಶುವಿಹಾರ ಮಹಿಳಾಮಂಡಲ ಮಡಂತ್ಯಾರು ಇದರ ಅಧ್ಯಕ್ಷೆ ಶ್ರೀಮತಿ ಲೂಸಿ ಕಾರ್ಲೊ ಇವರಿಂದ ನಡೆಯಿತು.

ಈ ಸಂದರ್ಭದಲ್ಲಿ ಘಟಕಾಧ್ಯಕ್ಷ ಜೇಸಿ ವಿಕೇಶ್ ಮಾನ್ಯ, ವಲಯ ನಿರ್ದೇಶಕರಾದ ಜೇಸಿ ಅಶೋಕ್ ಗುಂಡಿಯಲ್ಕೆ, ನಿಯೋಜಿತ ಅಧ್ಯಕ್ಷ ಜೇಸಿ ಅಮಿತಾ ಅಶೋಕ್, ಕಾರ್ಯದರ್ಶಿ ಜೇಸಿ ಸಂಯುಕ್ತ್ ಪೂಜಾರಿ, ನಿಯೋಜಿತ ಕಾರ್ಯದರ್ಶಿ ಜೇಸಿ ಆದರ್ಶ್ ಹಟ್ಟತ್ತೋಡಿ, ಮಹಿಳಾಮಂಡಲದ ಸದಸ್ಯರಾದ ಶ್ರೀಮತಿ ರೋಹಿಣಿ ಪಕಳ, ಶ್ರೀಮತಿ ಸವಿತ, ಶ್ರೀಮತಿ ಚಂದ್ರಕಲಾ, ಜೇಸಿ ಘಟಕದ ಸದಸ್ಯರಾದ ಜೇಸಿ ಯತೀಶ್ ರೈ, ಜೇಸಿ ಮನೋಜ್ ಮೈಲೋಡಿ, ಜೇಸಿ ಸಾಯಿಸುಮ ಎಂ.ನಾವಡ, ಜೇಸಿ ತೃಪ್ತಿ ವಿಕೇಶ್, ಬೆಳ್ತಂಗಡಿ ಮಂಜುಶ್ರೀ ಇದರ ನಿಕಟ ಪೂರ್ವ ಮಹಿಳಾ ಸಂಯೋಜಕಿ ಜೇಸಿ ಶ್ರುತಿ ರಂಜಿತ್ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕಿನ ಕೊಲ್ಲಿ,ದಿಡುಪೆ,ಮಿತ್ತಬಾಗಿಲು,ಮಲವಂತಿಗೆ,ಕೊಳಂಬೆ ಪ್ರದೇಶದಲ್ಲಿ ಭೀಕರ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ಹಠತ್ ಪ್ರವಾಹ

Suddi Udaya

ಪುದುವೆಟ್ಟಿನ ಮಹಿಳೆ ಪುಣ್ಯಶ್ರೀ ಪುತ್ತೂರು ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತ್ಯು

Suddi Udaya

ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ನಾವರ, ಉಪಾಧ್ಯಕ್ಷರಾಗಿ ಶುಭಕರ ಪೂಜಾರಿ

Suddi Udaya

ಏಪ್ರಿಲ್ 1 ರಿಂದ ಮತ್ತೆ ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

Suddi Udaya

ಸೋಣಂದೂರು: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿ

Suddi Udaya

ಪದ್ಮುಂಜ ಪ್ರಾ.ಕೃ.ಪ. ಸಹಕಾರಿ ಸಂಘದ ಪ್ರಭಾರ ಸಿಇಒ ಆಗಿ ಅಂಕಿತಾ ಬಿ ಅಧಿಕಾರ ಸ್ವೀಕಾರ

Suddi Udaya
error: Content is protected !!