26.9 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮೋತ್ಸವ

ಮಡಂತ್ಯಾರು: ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಲೋಕಾರ್ಪಣೆಯ ಮೊದಲ ಸಂಭ್ರಮಾಚರಣೆಯ ಪ್ರಯುಕ್ತ ಶ್ರೀರಾಮೋತ್ಸವ ಕಾರ್ಯಕ್ರಮವು ಜ. 22 ರಂದು ಗಣಪತಿ ಮಂಟಪ, ಮಡಂತ್ಯಾರಿನಲ್ಲಿ ನಡೆಯಿತು.

ಬಳಿಕ ಗೋಪೂಜೆ, ದೀಪಾಲಂಕಾರ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ ಹಾಗೂ ಮಹಿಳಾ ಭಜನಾ ತಂಡ ಪಾರೆಂಕಿ ರವರಿಂದ ಭಜನೆ ಕಾರ್ಯಕ್ರಮ ನಡೆಯಿತು.

ಸರಸ್ವತಿ ಭಜನಾ ಮಂಡಳಿಯ ಭಜನಕಾರರಿಂದ ಭಜನಾ ಸೇವೆ ನಡೆಯಿತು. ಗೋ ಪೂಜೆ ಮತ್ತು ಹಣತೆ ಹಚ್ಚಿ ವಿಜೃಂಭಣೆಯಿಂದ ಸಂಭ್ರಮಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾರ್ಯಕರ್ತರಾದ ಪುರುಷೋತ್ತಮ ರೈ ಅರ್ಮುಡ ವಹಿಸಿದ್ದರು. ಗಣೇಶ್ ಕಾರ್ಣಿಕ್ ಮಾಜಿ ವಿಧಾನ ಪರಿಷತ್ ಸದಸ್ಯರು, ಶ್ರೀರಾಮ ಮಂದಿರ ಹೋರಾಟದ ವಿಷಯವನ್ನು ಹಾಗೂ, ಹಿಂದೂ ಸಮಾಜದ ಮುಂದಿರುವ ಸವಾಲುಗಳು, ಮುಂದೆ ಎದುರಿಸಬೇಕಾದ ರೀತಿಯನ್ನು ವಿವರಿಸಿದರು. ವಿ. ಹಿಂ. ಪ. ತಾಲೂಕು ಕಾರ್ಯದರ್ಶಿ ಮೋಹನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಮಡಂತ್ಯಾರು ಪಂಚಾಯತ್ ಅಧ್ಯಕ್ಷೆ ರೂಪಾ ಮತ್ತು ಸದಸ್ಯರು ಮತ್ತು ಪರಿವಾರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ತೆಂಕಕಾರಂದೂರು: ಶಾಲಾ ಆವರಣದಲ್ಲಿ ಹೂವಿನ ಕುಂಡಗಳನ್ನು ಪುಡಿಗೊಳಿಸಿದ ಕಿಡಿಗೇಡಿಗಳು

Suddi Udaya

ಹಿರಿಯ ವ್ಯಂಗ್ಯಚಿತ್ರ ಕಲಾವಿದ ಬಿ. ವಿಲ್ಸನ್‌ ರಿಂದ ಹುಬ್ಬಳ್ಳಿಯಲ್ಲಿ ವ್ಯಂಗ್ಯಚಿತ್ರ ತರಬೇತಿ

Suddi Udaya

ಮದ್ದಡ್ಕ ವಿ.ಹಿಂ.ಪ. ಭಜರಂಗದಳ ಘಟಕದಿಂದ ಅನಾರೋಗ್ಯ ಪಿಡೀತರಿಗೆ ಆರ್ಥಿಕ ನೆರವು

Suddi Udaya

ಸಮಾಜ ಕಾರ್ಯ ವಿಭಾಗದಿಂದ ಆರ್ಥಿಕ ಶಿಸ್ತು ಕುರಿತು ಸಂವಾದ ಕಾರ್ಯಕ್ರಮ

Suddi Udaya

ಜ್ವರದಿಂದ ಬಳಲಿ ಗಂಡಿಬಾಗಿಲಿನ ಯುವತಿ ಸಾವು

Suddi Udaya

ಬೆಳ್ತಂಗಡಿ: ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮೂವರು ಕಲಾಸಾಧಕರಿಗೆ ರಂಗ ಸಮ್ಮಾನ್ ಗೌರವ

Suddi Udaya
error: Content is protected !!