April 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಡಿಆರ್ ಡಿಒ ಆಯೋಜಿಸಿದ ಡೇರ್ ಟು ಡ್ರೀಮ್ 5.0; ಭಾರತದ ಬಿಗ್ಗೆಸ್ಟ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಇನ್ನೋವೇಶನ್ ಸ್ಪರ್ಧೆಯಲ್ಲಿ ಪಟ್ರಮೆಯ ದೀಪಕ್ ಭಾಗಿ

ಬೆಳ್ತಂಗಡಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಆವಿಷ್ಕಾರ ಸ್ಪರ್ಧೆಯ ಐದನೇ ಆವೃತ್ತಿಯನ್ನು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ರವರು ‘ಡೇರ್ ಟು ಡ್ರೀಮ್ 5.0’ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿರವರು ನೀಡಿದ ‘ಆತ್ಮನಿರ್ಭರ್ ಭಾರತ್’ ದ ದೃಷ್ಟಿಯನ್ನು ಸಾಕಾರಗೊಳಿಸಲು ದೇಶದಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯ ಸ್ಪರ್ಧೆಯಾಗಿದ್ದು, ಸ್ಪರ್ಧೆಗೆ ಪಟ್ರಮೆಯ ದೀಪಕ್ ಎ.ಎಸ್. ರವರು ಜ.17 ರಂದು ಡೇರ್ ಟು ಡ್ರೀಮ್ 5.0′ Problem Vertical ಓಪನ್ ಚಾಲೆಂಜ್: ಯೋಚಿಸಲಾಗದ ಮತ್ತು ಊಹಿಸಲಾಗದದನ್ನು ಅನ್ವೇಷಿಸುವುದು ಎಂಬ ಸಮಸ್ಯೆ ಲಂಬ ದಲ್ಲಿ ನನ್ನ ವಿಶಿಷ್ಟ ಮತ್ತು ಉದಯೋನ್ಮುಖ ರಕ್ಷಣಾ ತಂತ್ರಜ್ಞಾನ ಯೋಜನೆಯನ್ನು ಯಶಸ್ವಿಯಾಗಿ ಸಲ್ಲಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ದೀಪಕ್ ರವರು ಡೇರ್ ಟು ಡ್ರೀಮ್ 5.0 ಆವಿಷ್ಕಾರ ಸ್ಪರ್ಧೆಗೆ ಭಾಗವಹಿಸುವುದು ನನ್ನ ಮಹತ್ವಕಾಂಕ್ಷೇ ಆಗಿತ್ತು. ದೇಶದ ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಗಮನರ್ಹವಾಗಿ ದೇಶ ಸೇವೆ ಸಲ್ಲಿಸುವುದು ನನ್ನ ಜೀವನೋದ್ದೇಶದ ದೂರದೃಷ್ಟಿಯಾಗಿದೆ ಎಂದು ತಿಳಿಸಿದರು.

ಇವರು ಪಟ್ರಮೆಯ ಅಶ್ವತಡಿ ನಿವಾಸಿ ಸದಾಶಿವ ಹಾಗೂ ಮೋಹಿನಿ ದಂಪತಿಯ ಪುತ್ರ.

Related posts

ಕೊಕ್ಕಡ: ಯುವಕ ಸಂಶಯಾಸ್ಪದ ಸಾವು: ಪೊಲೀಸರ ತನಿಖೆ

Suddi Udaya

ಗೆಳೆಯರ ಬಳಗ ಗುರುವಾಯನಕೆರೆ: 33ನೇ ವರ್ಷದ ಶ್ರೀ ಶಾರಾದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಡಂಗಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಫೇಸ್‌ ಬುಕ್‌ ಆಪ್‌ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

Suddi Udaya

ಅಂತರ್ ಕಾಲೇಜು “ತುಳು ಐಸಿರೇ- 2023” : ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!