September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ತರಬೇತಿ

ಬೆಳ್ತಂಗಡಿ: ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಮೊದಲ ಕಾರ್ಯಕ್ರಮವಾದ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ತರಬೇತಿ ಕಾರ್ಯಕ್ರಮವನ್ನು ಲಾಯಿಲ ವಿಘ್ನೇಶ್ವರ ಕಲಾಮಂದಿರದಲ್ಲಿ ಜ.24ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಘಟಕದ ಪೂರ್ವ ಅಧ್ಯಕ್ಷರು, ರಮ್ಯ 1 ಗ್ರಾಂ ಗೋಲ್ಡ್ ಉಜಿರೆಯ ಇದರ ಮಾಲಕ ಜೆಸಿ ಪ್ರಸಾದ್ ಬಿ.ಎಸ್ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ತರಬೇತುದಾರರಾಗಿ ಜೆಸಿಐ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷರು, ವಲಯ ತರಬೇತುದಾರರಾದ ಜೆಸಿ ಶಂಕರ್ ರಾವ್ ಸುಸ್ಥಿರ ಭವಿಷ್ಯಕ್ಕಾಗಿ ಯುವ ಜನತೆ ಎನ್ನುವ ವಿಷಯದ ಬಗ್ಗೆ ತರಬೇತಿಯನ್ನು ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ಬಲಮುರಿ ಭಜನಾ ಮಂಡಳಿ, ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ, ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಇದರ ಸದಸ್ಯರು ಹಾಗೂ ಬಜಕರು, ಜೇಸಿಐ ಬೆಳ್ತಂಗಡಿಯ ಸದಸ್ಯರು ಜೂನಿಯರ್ ಜೇಸಿ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ವಹಿಸಿ ಸ್ವಾಗತಿಸಿದರು. ಜೆಸಿ ವಾಣಿಯನ್ನು ಜೂನಿಯರ್ ಜೆಸಿ ಸದಸ್ಯರಾದ ಜೆಸಿ ತ್ರಿಷಾ ಉದ್ಘೋಷಿಸಿ, ತರಬೇತುದಾರರ ಪರಿಚಯಯನ್ನು ಜೂನಿಯರ್ ಜೆಸಿ ಸದಸ್ಯರಾದ ಜೆಜೆಸಿ ನೇವಿಲ್ ನವೀನ್ ಮೋರಸ್ ತಿಳಿಸಿದರು, ಘಟಕದ ಕಾರ್ಯದರ್ಶಿ ಜೆಸಿ ಶೈಲೇಶ್ ವಂದಿಸಿದರು.

Related posts

ಉಜಿರೆ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ವತಿಯಿಂದ ಸಾಧಕರಿಗೆ ಸನ್ಮಾನ

Suddi Udaya

ಕರುಂ ಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

Suddi Udaya

ಪುಂಜಲ್ ಕಟ್ಟೆ ಕ್ಲಸ್ಟರ್ ವತಿಯಿಂದ ರಘುಪತಿ ಕೆ ರಾವ್ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ಕಾರುಣ್ಯ ಸ್ಪರ್ಶ ಯೋಜನೆಯಡಿಯಲ್ಲಿ ಸಹಾಯಧನ ಹಸ್ತಾಂತರ

Suddi Udaya

ಪಡಂಗಡಿ: ಹಿರಿಯ ನಾಗರಿಕ ಧರ್ಣಪ್ಪ ಶೆಟ್ಟಿ ಯವರಿಂದ ಮತ ಚಲಾವಣೆ

Suddi Udaya
error: Content is protected !!