25.7 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಮಂಜುಶ್ರೀ ಮುದ್ರಣಾಲಯದ ಮೇಲ್ವಿಚಾರಕ ವಿಶ್ವನಾಥ ಶೆಟ್ಟಿಯವರಿಗೆ ಬೀಳ್ಕೊಡುಗೆ

ಉಜಿರೆಯ ಮಂಜುಶ್ರೀ ಮುದ್ರಣಾಲಯದಲ್ಲಿ ಸುದೀರ್ಘ 42 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರೊಡಕ್ಷನ್ ವಿಭಾಗದ ಮೇಲ್ವಿಚಾರಕರಾಗಿ, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ನಿವೃತ್ತರಾದ ವಿಶ್ವನಾಥ ಶೆಟ್ಟಿಯವರಿಗೆ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭವನ್ನು ಎಸ್.ಡಿ.ಎಂ. ಮಹಿಳಾ ಐ.ಟಿ.ಐ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿ ಉಜಿರೆ ಎಸ್.ಡಿಎಂ, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಪ್ರೊ. ಎಸ್. ಸತೀಶ್ಚಂದ್ರರವರು ವಿಶ್ವನಾಥ ಶೆಟ್ಟಿ ಮತ್ತು ಶ್ರೀಮತಿ ವನಿತಾ ವಿಶ್ವನಾಥ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿ, ಅವರು ಸಂಸ್ಥೆಗೆ ಸುದೀರ್ಘ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ವಿಶ್ವನಾಥ ಶೆಟ್ಟರ ಸೇವೆಯನ್ನು ಪ್ರಶಂಸಿಸಿದರು.

ಸಹೋದ್ಯೋಗಿ ಮೋನಪ್ಪ ಟಿ. ಹಾಗೂ ಚಿತ್ತರಂಜನ್ ವಿಶ್ವನಾಥ ಶೆಟ್ಟರ ಕಾರ್ಯವೈಖರಿ ಕುರಿತು ಅನುಭವ ಹಂಚಿಕೊಂಡರು.

ಮಂಜುಶ್ರೀ ಮುದ್ರಣಾಲಯದ ವ್ಯವಸ್ಥಾಪಕರಾದ ಶೇಖರ್ ಟಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ವ್ಯವಸ್ಥಾಪಕರಾದ ವೆಂಕಪ್ಪ ವಂದಿಸಿದರು, ರವಿ ಪರಕ್ಕಜೆ ನಿರೂಪಿಸಿದರು.

ಮುದ್ರಣಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ

Suddi Udaya

ನಾಲ್ಕೂರು: ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಚರ್ಚ್‌ರೋಡ್ ಬಾಡಿಗೆ ಮನೆಯಲ್ಲಿದ್ದ ರೋಷನ್ ನಾಪತ್ತೆ: ಪತ್ನಿ ಠಾಣೆಗೆ ದೂರು

Suddi Udaya

ಪ್ರಾಜೆಕ್ಟ್ ಡಿಸೈನ್ ವಿಭಾಗದಲ್ಲಿ ಎಕ್ಸ್ ಪ್ರೋ 201 ಅವಾರ್ಡ್, ವಾರಾಣಸಿ ಸುಬ್ರಾಯ ಭಟ್ ಅವಾರ್ಡ್, ಪ್ರೋಡೆಕ್ಟ್ ಇಂಜಿನಿಯರ್ ಅವಾರ್ಡ್ ಪಡೆದ ಅಜಿತ್ ಕುಮಾರ್ ತೆಂಕಕಾರಂದೂರು

Suddi Udaya

ಮಂಗಳೂರು: ಸೋಮೇಶ್ವರ ಪುರಸಭೆ ಚುನಾವಣೆ: ಬೆಳ್ತಂಗಡಿ ಮೂಲದ ಬಳಂಜ ಜಯ ಪೂಜಾರಿ ನಿಟ್ಟಡ್ಕ ರವರಿಗೆ ಭರ್ಜರಿ ಗೆಲುವು

Suddi Udaya

ಧರ್ಮಸ್ಥಳ: ಪಾಂಗಾಳ ಬಳಿ ರಸ್ತೆ ಅಪಘಾತ

Suddi Udaya
error: Content is protected !!