23.8 C
ಪುತ್ತೂರು, ಬೆಳ್ತಂಗಡಿ
June 7, 2025
Uncategorized

ಉಜಿರೆ ಗುರು ಮಂದಿರ ನಿರ್ಮಾಣದ ಸಮಾಲೋಚನೆ ಸಭೆ

ಉಜಿರೆ: ಗುರು ನಾರಾಯಣ ಸ್ವಾಮಿ ಸೇವಾ ಸಂಘ ಉಜಿರೆ ಹಾಗೂ ಯುವ ವಾಹಿನಿ ಸಂಚಲನ ಸಮಿತಿ ಉಜಿರೆ ಇದರ ಜಂಟಿ ಸಹಯೋಗದೊಂದಿಗೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಮಂದಿರ ನಿರ್ಮಾಣದ ಬಗ್ಗೆ ಸಮಾಲೋಚನೆ ಸಭೆ ಉಜಿರೆ ಗ್ರಾಮದ ಇಚ್ಚಿಲ ಎಂಬಲ್ಲಿ ಫೆ. 2ರಂದು ನಡೆಯಿತು.

ಸಮಾಲೋಚನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಹಿರಿಯರಾದ ಜೈ ಶಂಕ‌ರ್, ಎಂ. ಶ್ರೀಧ‌ರ್ ಪೂಜಾರಿ ಕಲಾಯಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಗುರುನಾರಾಯಣ ಸ್ವಾಮಿ ಸೇವಾ ಸಂಘ ಉಜಿರೆ ಇದರ ಅಧ್ಯಕ್ಷ ಹರೀಶ್ ಬರಮೇಲು, ಯುವ ವಾಹಿನಿ ಸಂಚಲನ ಸಮಿತಿ ಉಜಿರೆ ಇದರ ಅಧ್ಯಕ್ಷ ರಿತೇಶ್‌ ರೆಂಜಾಳ, ಕೆ. ಕೆ. ಬ್ರದರ್ಸ್ ನ ಕಿರಣ್ ರೆಂಜಾಳ, ಬಿಜೋಯ್ ಅಶ್ವತಕಟ್ಟೆ, ಮನೋಜ್ ಕುಂಜರ್ಪ, ಉಮೇಶ್‌ ಪೂಜಾರಿ ಅತ್ತಾಜೆ, ಸ್ಥಳ ದಾನಿ ಸಚ್ಚಿದನಂದ ಇಚ್ಚಿಲ ಉಪಸ್ಥಿತರಿದ್ದರು.

ಶ್ರೀ ಗುರು ನಾರಾಯಣ ಮಂದಿರ ಸೇವಾ ಸಮಿತಿ ಶಿವಗಿರಿ ಇಚ್ಚಿಲ ಉಜಿರೆ ಇದರ ನೂತನ ಸಮಿತಿಯನ್ನು ರಚಿಸಲಾಯಿತು, ಗೌರವ ಅಧ್ಯಕ್ಷರಾಗಿ ಶ್ರೀಧರ ಪೂಜಾರಿ ಕಲಯಿ ಜಯಶಂಕ‌ರ್ ಎಂ. ರೆಂಜಾಳ, ಅಧ್ಯಕ್ಷರಾಗಿ ರವಿ ಕುಮಾರ್ ಬರಮೆಲ್, ಉಪಾಧ್ಯಕ್ಷರಾಗಿ ಕಿರಣ್ ರೆಂಜಾಳ ಕೆ. ಕೆ. ಬ್ರದರ್ಸ್, ಬಿಜೋಯ್ ಅಶ್ವತಕಟ್ಟೆ, ತಾರಾನಾಥ ಬ್ರಹ್ಮಸ ಗುರಿಪಳ್ಳ, ದಿನೇಶ್ ಪೂಜಾರಿ ರಂಜಿತ್ ಮಣಿಕ್ಕೆ, ವಿನಿ ಕುಮಾರ್ ತಿಮರೋಡಿ, ಗುರು ಪ್ರಸಾದ್ ಪಾಲೆಂಜಾ, ಭಾರತಿ ಬ್ರಹ್ಮಸ ಗುರಿಪಳ್ಳ, ಪ್ರದಾನ ಕಾರ್ಯದರ್ಶಿಯಾಗಿ ಮನೋಜ್ ಕುಂಜರ್ಪ, ಜೊತೆ ಕಾರ್ಯದರ್ಶಿಯಾಗಿ ಸಚ್ಚಿದಾನಂದ ಇಚ್ಚಿಲ, ಕಿಶೋರ್ ಪೆರ್ಲ, ಯುವರಾಜ್ ಮಣಿಕ್ಕೆ, ಅಶೋಕ್ ಪೂಜಾರಿ ಪಾದೆ, ಸುರೇಶ್ ಪೂಜಾರಿ ಮಾಚಾರು, ಕೊಶಧಿಕಾರಿಯಾಗಿ ಹರೀಶ್ ಬರಮೆಲ್, ಪ್ರದಾನ ಸಂಚಾಲಕರಾಗಿ ಉಮೇಶ್ ಪೂಜಾರಿ ಅತ್ತಾಜೆ, ಹಾಗೂ ಸಹ ಸಂಚಾಲಕರು, ಬೂತುವಾರು ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ಕಿಶೋರ್ ಪೆರ್ಲ ಸ್ವಾಗತಿಸಿ, ವಂದಿಸಿದರು.

Related posts

ಉಜಿರೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ

Suddi Udaya

ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ಅಬ್ದುಲ್ ರಹಿಮಾನ್ ಪಡ್ಪು

Suddi Udaya

ಅರಸಿನಮಕ್ಕಿ -ಶಿಶಿಲ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಕೊಕ್ಕಡ ಸರಕಾರಿ ಆಸ್ಪತ್ರೆಯ ಬಾವಿಯ ಸ್ವಚ್ಛತಾ ಕಾರ್ಯ

Suddi Udaya

ಗೇರುಕಟ್ಟೆ ನೂತನ ಹಿಂದೂ ರುದ್ರ ಭೂಮಿ ಲೋಕಾರ್ಪಣೆ ಪೂರ್ವಭಾವಿ ಸಭೆ

Suddi Udaya

ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್ ಸ್ಥಾಪನ ದಿನಾಚರಣೆ

Suddi Udaya

ಕಾಂಗ್ರೆಸ್ ಕಾರ್ಯಕರ್ತ ಯೋಗೀಶ್ ಗೌಡ ನೂಜಿಲ ಬಿಜೆಪಿಗೆ ಸೇರ್ಪಡೆ

Suddi Udaya
error: Content is protected !!