February 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಂಭ್ರಮ ಉದ್ಘಾಟನೆ

ಬೆಳ್ತಂಗಡಿ : ಶಾಲಾ ಅಮೃತ ಮಹೋತ್ಸವ ಸವಿನೆನಪಿನ ಕಟ್ಟಡ ನಿರ್ಮಾಣ ಮತ್ತು ಇತರ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ಒದಗಿಸುವ ಭರವಸೆ ನೀಡಿದರು.

ಬಂದಾರು ಗ್ರಾಮದ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ , ಊರ ದಾನಿಗಳ, ಪೋಷಕರ ವಿದ್ಯಾಭಿಮಾನಿಗಳ ಸಹಕಾರ, ಸಹಭಾಗಿತ್ವದಿಂದ ಉತ್ತಮ ಕಾರ್ಯ ಚಟುವಟಿಕೆಗಳ ಮೂಲಕ ಮೈರೋಳ್ತಡ್ಕ ಶಾಲೆ ಮಾದರಿ ಶಾಲೆಯಾಗಿ ಪರಿವರ್ತನೆಯಾಗಲಿ ಎಂದು ಅವರು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಧರ್ಮಗುರು ಮಹಮ್ಮದ್ ಶಫೀಕ್ ಅಹ್ಸನಿ ಈ ಶಾಲೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ವಿದ್ಯಾ ಸಂಸ್ಥೆಯ ದೊಡ್ಡ ಸಾಧನೆಯಾಗಿದೆ, ಇಲ್ಲಿ ಹಲವಾರು ದೇವಸ್ಥಾನಗಳಿವೆ, ಮಸೀದಿಗಳಿವೆ, ಚರ್ಚುಗಳಿವೆ, ಮಂದಿರಗಳಿವೆ, ಆದರೆ ಇದೆಲ್ಲದಕ್ಕೂ ಮಿಗಿಲಾಗಿ ಸರ್ವ ಧರ್ಮೀಯರಿಗೆ ಬೇಕಾಗುವ ಕೇಂದ್ರ ಶಾಲೆಯಾಗಿದೆ ಎಂದರು. ಮಕ್ಕಳನ್ನು ಬದುಕಿನಲ್ಲಿ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ಇಂಥ ವಿದ್ಯಾ ಸಂಸ್ಥೆಯಿಂದ ಮಾತ್ರ ಸಾಧ್ಯವಿದೆ. ವಿದ್ಯೆ ಇರುವವನಿಗೆ ಮಾತ್ರ ಉನ್ನತವಾದ ಸ್ಥಾನವಿದೆ ಎಂದು ಅವರು ಪ್ರತಿಪಾದಿಸಿದರು.

ನಿವೃತ್ತ ಶಿಕ್ಷಕ ನೋಣಯ್ಯ ಗೌಡ ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸುತ್ತಾ ಶಾಲೆ ಬೆಳೆದು ಬಂದ ದಾರಿಯನ್ನು ತಿಳಿಸಿದರು.

ಮಾಜಿ ತಾ.ಪಂ.ಸದಸ್ಯ , ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಅಧ್ಯಕ್ಷತೆವಹಿಸಿ ಮಾತನಾಡಿ ಎಲ್ಲಾ ವಿದ್ಯಾಭಿಮಾನಿಗಳು, ಪೋಷಕರು ಮತ್ತು ದಾನಿಗಳ ಸರಕಾರಗಳಿಂದ ಪಕ್ಷ, ಜಾತಿ ಮರೆತು ಎಲ್ಲರೂ ಒಗ್ಗಟ್ಟಾಗಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಗ್ರಾ.ಪಂ.ಅಧ್ಯಕ್ಷ ದಿನೇಶ್ ಕಂಡಿಗ ಮಾತನಾಡಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಡಗರ, ಸಂಭ್ರಮದಿಂದ ಆಚರಿಸಲು ಗ್ರಾಮಪಂಚಾಯತ್ ನಿಂದ ಅವಕಾಶವಿದ್ದಷ್ಟು ಸಹಕಾರವನ್ನು ನೀಡುವ ಭರವಸೆಯಿತ್ತು ಶುಭ ಹಾರೈಸಿದರು.


ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಅವರ ಪ್ರಸ್ತಾವನೆಯಲ್ಲಿ ಅಮೃತಮಹೋತ್ಸವದ ಸವಿನೆನಪಿನ ಎರಡು ಕೊಠಡಿ,
ರಂಗಮಂದಿರ ಬೇಡಿಕೆ ಹಾಗೂ ಅಮೃತ ಮಹೋತ್ಸವ ಪ್ರಯುಕ್ತ ಡಿಸೆಂಬರ್ ವರೆಗೆ ಹಮ್ಮಿಕೊಳ್ಳಲು ಚಿಂತನೆ ನಡೆಸಿರುವ ಕಾರ್ಯಕ್ರಮಗಳ ಮುನ್ನೋಟ ಸಹಿತ ಶಾಲೆಯ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳನ್ನು ಸಭೆಗೆ ತಿಳಿಸಿದರು.
ಕುಪ್ಪೆಟ್ಟಿ ವಲಯ ಸಿ.ರ್.ಪಿ. ವಾರಿಜ ಸೋಮಶೇಖರ್ ಮಾತನಾಡಿ ಶುಭಹಾರೈಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಾವತಿ, ಪ್ರಗತಿಪರ ಕೃಷಿಕ ಧರ್ಣಪ್ಪ ಗೌಡ ಬಾನಡ್ಕ, ಧರ್ಮದರ್ಶಿ ಆನಂದಗೌಡ, ನಿವೃತ್ತ ಯೋಧ ಸಂಜೀವ ಗೌಡ, ಧರ್ಮದರ್ಶಿ ಅನಂದ ಗೌಡ ಮುಂಡೂರು , ಭಾರತೀಯ ಅಂಚೆ ಇಲಾಖೆಯ ಉದ್ಯೋಗಿ , ಅ.ಮ. ಸಮಿತಿ
ಕೋಶಾಧಿಕಾರಿ ಮೋಹನ್ ಶೆಟ್ಟಿ , ಗ್ರಾ.ಪಂ. ಮಾಜಿ ಅಧ್ಯಕ್ಷೆ ಪರಮೇಶ್ವರಿ, ಮಂ. ಪಂ. ಮಾಜಿ ಸದಸ್ಯ ಬಿ.ಕೆ.ಅಮ್ಮು ಬಾಂಗೇರು, ಗ್ರಾ.ಪಂ. ಸದಸ್ಯೆ ಪವಿತ್ರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಅಭಿನಂದಿಸಲಾಯಿತು. ಸಹಶಿಕ್ಷಕ ಮಾಧವ ಗೌಡ ಕಾರ್ಯಕ್ರಮ ನಿರೂಪಿಸಿ ಸಹಶಿಕ್ಷಕ ಶ್ರೀಧರ್ ಸ್ವಾಗತಿಸಿದರು. ಸಹಶಿಕ್ಷಕಿ ರಾಜಶ್ರೀ ಪಿ.ವಿ. ಧನ್ಯವಾದವಿತ್ತರು.

Related posts

ಸೌತಡ್ಕ ಬಯಲು ಗಣಪತಿ ದೇವಸ್ಥಾನಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಭೇಟಿ

Suddi Udaya

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಮಂದಿರದಲ್ಲಿ ಭಜನಾ ವಾರ್ಷಿಕೋತ್ಸವ ಪ್ರಯುಕ್ತ ತಾಲೂಕಿನ ವಿವಿಧ ತಂಡಗಳಿಂದ ಕುಣಿತ ಭಜನೆ

Suddi Udaya

ತುಮಕೂರು ಮೂವರ ಹತ್ಯೆ ಪ್ರಕರಣ: ವಕ್ಫ್ ಜಿಲ್ಲಾ ಸಲಹಾ ಸಮಿತಿ ಪದಾಧಿಕಾರಿಗಳು, ಕಾಜೂರು ಆಡಳಿತ ಸಮಿತಿ ಭೇಟಿ: ಸಾಂತ್ವಾನ ಮತ್ತು ಸಹಾಯದ ಭರವಸೆ

Suddi Udaya

ಬೆಳ್ತಂಗಡಿ ಪಟ್ಲ ಫೌಂಡೇಷನ್ ಘಟಕದ ವತಿಯಿಂದ ಗುರುವಾಯನಕೆರೆ ನವಶಕ್ತಿ ಮೈದಾನದಲ್ಲಿ “ಯಕ್ಷ ಸಂಭ್ರಮ” : ಪೂರ್ವಭಾವಿ ಸಭೆ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ನಡ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!