24.1 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ :ಎಸ್.ಡಿ.ಎಂ ಪ್ರತಿಪಾದನೆಗೆ ರಾಷ್ಟಮಟ್ಟದ ಮನ್ನಣೆ

ಧರ್ಮಸ್ಥಳ : ಎಸ್ ಡಿ ಎಂ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್) ಸಂಸ್ಥೆ ಬಿಎನ್‌ವೈಎಸ್ (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಕೋರ್ಸ್‌ನ ಕೇಂದ್ರ ನಿಯಂತ್ರಣದ ಹೋರಾಟದಲ್ಲಿ ಯಶಸ್ಸು ಗಳಿಸಿದೆ.

2025ರ ಜನವರಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಪ್ರಮುಖ ಸಭೆಯ ನಂತರ, ನವದೆಹಲಿಯ ನಿರ್ಮಾಣ ಭವನದಲ್ಲಿ 2025ರ ಫೆ. 4ರಂದು ಎರಡನೆಯ ಪ್ರಮುಖ ಸಭೆಯನ್ನು ಆಯೋಜಿಸಿತ್ತು .

ಸಭೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಕೇಂದ್ರ ನಿಯಂತ್ರಣದ ನಿಯಮ ಜಾರಿಗೊಳಿಸುವಂತೆ ಕೋರಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಮನವಿ ಮಾಡಿದ್ದು, ಕೇಂದ್ರ ಆಯುಷ್ ಮಂಡಲ ಸಂಪೂರ್ಣ ಸಮ್ಮತಿ ಸೂಚಿಸಿದೆ.

ಈ ಸಭೆಯ ಅಧ್ಯಕ್ಷತೆಯನ್ನು ಆಯುಷ್ ಮಂತ್ರಿ ಪ್ರತಾಪರಾವ್ ಗಣಪತ್ರಾವ್ ಜಾಧವ್ ವಹಿಸಿದ್ದರು. ಆಯುಷ್ ಕಾರ್ಯದರ್ಶಿ, ಭಾರತದ ಸಿಸ್ಟಮ್ ಆಫ್ ಮೆಡಿಸಿನ್‌ನ ರಾಷ್ಟ್ರೀಯ ಆಯೋಗದ (NCISM) ಸದಸ್ಯರು, ಪ್ರಮುಖ ಮುಖಂಡರು ಅಲ್ಲದೆ ಮಾನ್ಯ ರಾಜ್ಯ ಸಭಾ ಸದಸ್ಯ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು SVYASA ಚಾನ್ಸೆಲೆರ್ ಡಾ. ಎಚ್. ಆರ್. ನಾಗೇಂದ್ರ ಭಾಗವಹಿಸಿದ್ದರು.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಪ್ರಬಲವಾದ ಪ್ರಸ್ತುತಿಗೆ ಮಂತ್ರಿ ಮಂಡಲ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ಎಸ್.ಡಿ.ಎಂ ಗುಣಮಟ್ಟದ ಶಿಕ್ಷಣ ಮತ್ತು ವಿಜ್ಞಾನಮಟ್ಟದ ಅನುಸರಿತ ಅಭ್ಯಾಸಗಳ ಸ್ಥಾಪನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಈ ನಿಯಂತ್ರಣವು ಶಿಕ್ಷಣದ ಪ್ರಾಮಾಣೀಕರಣಕ್ಕಾಗಿ ಮುಖ್ಯವಾಗಿದೆ. ಈಗಿನ ನಿಯಮಗಳಲ್ಲಿ ತಕ್ಷಣದ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬಹುದು.” ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಎಸ್ ಡಿ ಎಂ ಸಂಸ್ಥೆಯ ಈ ಪ್ರಯತ್ನವು ನೈಸರ್ಗಿಕ ವಿಜ್ಞಾನ ಮತ್ತು ಯೋಗದ ಕ್ಷೇತ್ರಗಳಲ್ಲಿ ಮಾನದಂಡಗಳನ್ನು ಮತ್ತು ಪ್ರಾಮಾಣಿಕತೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಭಾರತದ ಪಾರಂಪರಾಗತ ಶಿಕ್ಷಣ ಪದ್ಧತಿಯನ್ನು ಉತ್ತೇಜಿಸಿ, ಶಿಕ್ಷಣದ ಗುಣಮಟ್ಟ ವನ್ನು ಹೆಚ್ಚಿಸುವ ಎಸ್ ಡಿ ಎಂ ಪ್ರಯತ್ನಕ್ಕೆ ಇದೀಗ ರಾಷ್ಟ್ರ ಮಟ್ಟದ ಮನ್ನಣೆ ದೊರೆತಿದೆ.

Related posts

ನಾಲ್ಕೂರು ಕುದ್ರೋಟ್ಟು ಪರಿಸರದಲ್ಲಿ ಗುಡ್ಡ ಕುಸಿತ, ರಸ್ತೆ ಬಂದ್

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

Suddi Udaya

ಹಿರಿಯ ಪುರುಷ ಮತ್ತು ಮಹಿಳಾ ಥ್ರೋಬಾಲ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಕರ್ನಾಟಕವನ್ನು ಪ್ರತಿನಿಧಿಸಲು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿ ಯುನಿತ್ ಕೆ. ಆಯ್ಕೆ

Suddi Udaya

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಕಾರ್ಮಿಕರ ಮಹಾಸಭೆ

Suddi Udaya

ಕಾಂಗ್ರೆಸ್‌ ಕಾರ್ಯಕರ್ತರಾದ ಜೋಜಿ ಕಳೆಂಜ ಹಾಗೂ ಗಂಡಿಬಾಗಿಲಿನ ಅಜಿತ್ ಪಿ.ಎಮ್ ರವರು ಬಿಜೆಪಿ ಸೇರ್ಪಡೆ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಿದ್ಧತೆ

Suddi Udaya
error: Content is protected !!