20.5 C
ಪುತ್ತೂರು, ಬೆಳ್ತಂಗಡಿ
February 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಫೆ.7-10: ಶ್ರೀ ಕ್ಷೇತ್ರ ಒಟ್ಲದಲ್ಲಿ ವರ್ಷಾವಧಿ ಜಾತ್ರೋತ್ಸವ

ಶಿಶಿಲ: ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವವು ಫೆ.7ರಿಂದ ಫೆ.10 ವರೆಗೆ ನಡೆಯಲಿದೆ.


ಫೆ.07 ಬೆಳಿಗ್ಗೆ ಗಣಹೋಮ, ಕಲಶಾಭಿಷೇಕ, ನಾಗತಂಬಿಲ, ಮಾಕಲಬ್ಬೆ ತಂಬಿಲ, ಬ್ರಹ್ಮಬೈದೇರುಗಳ ತಂಬಿಲ, ದೈವಗಳಿಗೆ ತಂಬಿಲ, ಬೆಳಿಗ್ಗೆ ಹಸಿರುವಾಣಿ ಹೊರೆಕಾಣಿಕೆ (ಶಿಶಿಲ, ಶಿವಾಜೆ, ಹತ್ಯಡ್ಕ ಗ್ರಾಮಸ್ಥರಿಂದ) ಫೆ.೦೮ ಬೆಳಿಗ್ಗೆ ತೋರಣ ಮುಹೂರ್ತ, ಧರ್ಮರಸು ಉಳ್ಳಾಕ್ಲು ಮತ್ತು ಪರಿವಾರ ದೈವಗಳ ನೇಮೋತ್ಸವ, ಮಧ್ಯಾಹ್ನ ಕೊಡಮಂದಾಯ ನೇಮ, ಕಲ್ಲಾಜೆಯಿಂದ ಪಿಲಿಕಲ್ತಾಯ ಭಂಡಾರ ಬರುವುದು. ಶಿರಾಡಿ ದೈವ, ಪಂಜುರ್ಲಿ ದೈವಗಳ ಭಂಡಾರ ತೆಗೆಯುವುದು, ಸಂಜೆ ಸತ್ಯ ಜಾವತೆ ನೇಮ, ಕಲ್ಕುಡ ಕಲ್ಲುರ್ಟಿ ನೇಮ, ರಾತ್ರಿ ಲೆಕ್ಕೆಸಿರಿ ಬಾವನ ನೇಮ, ಪರಿವಾರ ದೈವಗಳ ನೇಮ, ಅನ್ನಸಂತರ್ಪಣೆ, ರಾತ್ರಿ 10.30ಕ್ಕೆ ಪಿಲಿಕಲ್ತಾಯ ನೇಮ, ಫೆ. 09 ಉದಯತ್ಪೂರ್ವ 1.30ಕ್ಕೆ ಬಿರ್ಮೆರ್, ಶಿರಾಡಿ ದೈವಂಗಳು ಪರಿವಾರ ನೇಮ (ಜುಮ್ರಾಲಿ), ಬೆಳಿಗ್ಗೆ ೮ಕ್ಕೆ ಪಂಜುರ್ಲಿ, ಮಾಲದ ಕೊರಗ ನೇಮ, ಬೆಳಿಗ್ಗೆ 10ಕ್ಕೆ ಬಚ್ಚನಾಯಕ ಹಾಗೂ ಗುಳಿಗ ನೇಮ, ಸಂಜೆ 5ಕ್ಕೆ ಬೈದೇರುಗಳು ಭಂಡಾರ ತೆಗೆಯುವುದು, ರಾತ್ರಿ ಬೈದೇರುಗಳು ಗರಡಿ ಇಳಿಯುವುದು, ದೇಯಿ ಬೈದಿತಿ ಉತ್ಸವ ಹಾಗೂ ಬೈದೇರುಗಳು ಭೇಟಿ, ಫೆ.10 ಉದಯತ್ಪೂರ್ವ 1.30ಕ್ಕೆ ಮಾನಿಬಾಲೆ ಗರಡಿ ಇಳಿಯುವುದು, ಪ್ರಾತಃಕಾಲ 4.30ಕ್ಕೆ ಸುರಿಯ ಹಾಕುವುದು, ಬೆಳಿಗ್ಗೆ ಹರಿಕೆ ಮತ್ತು ಗಂಧ ಪ್ರಸಾದ ನೀಡಲಾಗುವುದು ಎಂದು ಕ್ಷೇತ್ರದ ಅನುವಂಶೀಯ ಧರ್ಮದರ್ಶಿಗಳಾದ ಜನಾರ್ದನ ಬಂಗೇರ ವಿ ತಿಳಿಸಿದ್ದಾರೆ.


ಸಾಂಸ್ಕೃತಿಕ ಕಾರ್ಯಕ್ರಮ: ಫೆ.09 ಸಂಜೆ ಜೆಸಿ ಕುಶಾಲಪ್ಪ ಸಾರಥ್ಯದ ಬೆಸ್ಟ್ ಡ್ಯಾನ್ಸ್ ಇನ್ಸಿಟ್ಯೂಟ್ ಪ್ರಶಸ್ತಿ ವಿಜೇತ ಸಂಸ್ಥೆ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನೃತ್ಯ ರೂಪಕ ವೈಭವ ನಡೆಯಲಿದೆ.

Related posts

ಧರ್ಮಸ್ಥಳ: ನದಿಯ ತೀರದಲ್ಲಿ ಅಪರಿಚಿತ ಶವ ಪತ್ತೆ

Suddi Udaya

ನಡ : ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಅಳದಂಗಡಿ ಬಡಗಕಾರಂದೂರು ಪ್ರಗತಿ ಬಂಧು ಎ’ಬಿ ಒಕ್ಕೂಟದ ಅಧ್ಯಕ್ಷರುಗಳಾಗಿ ಹರೀಶ್ ಸಾಲಿಯನ್, ಕೃಷ್ಣಪ್ಪ ಪೂಜಾರಿ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ಆಶಾ ಹರೀಶ್ ಆಯ್ಕೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶ ಮತ್ತು ಭಿತ್ತಿಪತ್ರಗಳ ಅನಾವರಣ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಾಧಿಕಾರಿಗಳ ಪದಪ್ರದಾನ

Suddi Udaya

ತೆಕ್ಕಾರು ಗ್ರಾ.ಪಂ. ನಿಂದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!