29.2 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ :ಎಸ್.ಡಿ.ಎಂ ಪ್ರತಿಪಾದನೆಗೆ ರಾಷ್ಟಮಟ್ಟದ ಮನ್ನಣೆ

ಧರ್ಮಸ್ಥಳ : ಎಸ್ ಡಿ ಎಂ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್) ಸಂಸ್ಥೆ ಬಿಎನ್‌ವೈಎಸ್ (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಕೋರ್ಸ್‌ನ ಕೇಂದ್ರ ನಿಯಂತ್ರಣದ ಹೋರಾಟದಲ್ಲಿ ಯಶಸ್ಸು ಗಳಿಸಿದೆ.

2025ರ ಜನವರಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಪ್ರಮುಖ ಸಭೆಯ ನಂತರ, ನವದೆಹಲಿಯ ನಿರ್ಮಾಣ ಭವನದಲ್ಲಿ 2025ರ ಫೆ. 4ರಂದು ಎರಡನೆಯ ಪ್ರಮುಖ ಸಭೆಯನ್ನು ಆಯೋಜಿಸಿತ್ತು .

ಸಭೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಕೇಂದ್ರ ನಿಯಂತ್ರಣದ ನಿಯಮ ಜಾರಿಗೊಳಿಸುವಂತೆ ಕೋರಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಮನವಿ ಮಾಡಿದ್ದು, ಕೇಂದ್ರ ಆಯುಷ್ ಮಂಡಲ ಸಂಪೂರ್ಣ ಸಮ್ಮತಿ ಸೂಚಿಸಿದೆ.

ಈ ಸಭೆಯ ಅಧ್ಯಕ್ಷತೆಯನ್ನು ಆಯುಷ್ ಮಂತ್ರಿ ಪ್ರತಾಪರಾವ್ ಗಣಪತ್ರಾವ್ ಜಾಧವ್ ವಹಿಸಿದ್ದರು. ಆಯುಷ್ ಕಾರ್ಯದರ್ಶಿ, ಭಾರತದ ಸಿಸ್ಟಮ್ ಆಫ್ ಮೆಡಿಸಿನ್‌ನ ರಾಷ್ಟ್ರೀಯ ಆಯೋಗದ (NCISM) ಸದಸ್ಯರು, ಪ್ರಮುಖ ಮುಖಂಡರು ಅಲ್ಲದೆ ಮಾನ್ಯ ರಾಜ್ಯ ಸಭಾ ಸದಸ್ಯ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು SVYASA ಚಾನ್ಸೆಲೆರ್ ಡಾ. ಎಚ್. ಆರ್. ನಾಗೇಂದ್ರ ಭಾಗವಹಿಸಿದ್ದರು.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಪ್ರಬಲವಾದ ಪ್ರಸ್ತುತಿಗೆ ಮಂತ್ರಿ ಮಂಡಲ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ಎಸ್.ಡಿ.ಎಂ ಗುಣಮಟ್ಟದ ಶಿಕ್ಷಣ ಮತ್ತು ವಿಜ್ಞಾನಮಟ್ಟದ ಅನುಸರಿತ ಅಭ್ಯಾಸಗಳ ಸ್ಥಾಪನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಈ ನಿಯಂತ್ರಣವು ಶಿಕ್ಷಣದ ಪ್ರಾಮಾಣೀಕರಣಕ್ಕಾಗಿ ಮುಖ್ಯವಾಗಿದೆ. ಈಗಿನ ನಿಯಮಗಳಲ್ಲಿ ತಕ್ಷಣದ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬಹುದು.” ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಎಸ್ ಡಿ ಎಂ ಸಂಸ್ಥೆಯ ಈ ಪ್ರಯತ್ನವು ನೈಸರ್ಗಿಕ ವಿಜ್ಞಾನ ಮತ್ತು ಯೋಗದ ಕ್ಷೇತ್ರಗಳಲ್ಲಿ ಮಾನದಂಡಗಳನ್ನು ಮತ್ತು ಪ್ರಾಮಾಣಿಕತೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಭಾರತದ ಪಾರಂಪರಾಗತ ಶಿಕ್ಷಣ ಪದ್ಧತಿಯನ್ನು ಉತ್ತೇಜಿಸಿ, ಶಿಕ್ಷಣದ ಗುಣಮಟ್ಟ ವನ್ನು ಹೆಚ್ಚಿಸುವ ಎಸ್ ಡಿ ಎಂ ಪ್ರಯತ್ನಕ್ಕೆ ಇದೀಗ ರಾಷ್ಟ್ರ ಮಟ್ಟದ ಮನ್ನಣೆ ದೊರೆತಿದೆ.

Related posts

ಕಲ್ಮಂಜ 87 ವಾರ್ಡಿನಲ್ಲಿ ಒಂಬತ್ತು ನಾರಿಮಣಿಗಳಿಂದ ಪ್ರಥಮ ಮತ ಚಲಾವಣೆ

Suddi Udaya

ಎ.10-17: ಶ್ರೀರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ 64ನೇ ವರ್ಷದ ಶ್ರೀರಾಮ ನಾಮ ಸಪ್ತಾಹ: ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಪ್ರಧಾನಕಾರ್ಯದರ್ಶಿಯಾಗಿ ವಿಠ್ಠಲ್ ಭಟ್ ಆಯ್ಕೆ

Suddi Udaya

ನೇರ ನಗದು ವರ್ಗಾವಣೆ: ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಸೂಚನೆ

Suddi Udaya

ಕುಕ್ಕೆ ಲಿಂಗ ವಂಶಸ್ಥರಾದ ಮಲೆಕುಡಿಯ ಜನಾಂಗದವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಶಾಶ್ವತ ಮೂಲನಿವಾಸಿ ಸ್ಥಾನಮಾನ ನೀಡುವಂತೆ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಆಗ್ರಹ

Suddi Udaya

ಬೆಳ್ತಂಗಡಿ ಕ.ಸಾ.ಪ. ಕ್ಕೆ ಸಂಘಟನ ಕಾರ್ಯದರ್ಶಿಗಳ ನೇಮಕ

Suddi Udaya
error: Content is protected !!