29.2 C
ಪುತ್ತೂರು, ಬೆಳ್ತಂಗಡಿ
April 19, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

ವೇಣೂರು: ವೇಣೂರು ಕೆಥೋಲಿಕ್‌ ಬ್ಯಾಂಕ್‌ ಲೋನ್‌ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣವು ಕಳವುವಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಫೆ.5 ರಂದು ದೂರು ದಾಖಲಾಗಿದೆ.

ಘಟನೆ ವಿವರ: ಪೆರ್ಮುಡ ನಿವಾಸಿ ಪ್ರಭಾಕರ ರವರು ವೇಣೂರು ಕೆಥೋಲಿಕ್‌ ಬ್ಯಾಂಕ್‌ ಲೋನ್‌ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಬಂದ ರೂ 2.25 ಲಕ್ಷ ನಗದು ಹಣವನ್ನು ತನ್ನ ಮನೆಯಾದ ನಿಟ್ಟಡೆ ಗ್ರಾಮದ ಪೆರ್ಮುಡ ಉದಯಸದನ ಮನೆ ಎಂಬಲ್ಲಿ ಬೆಡ್‌ ರೂಮ್‌ ಒಂದರ ಸೆಲ್ಫ್‌ ನಲ್ಲಿ ಚಾಪೆ ಅಡಿಯಲ್ಲಿ ಇಟ್ಟಿದ್ದರು.ಸದ್ರಿ ಹಣವನ್ನು ಪ್ರಭಾಕರ ರವರು ಫೆ.03 ರಂದು ಬೆಳಿಗ್ಗೆ ನೋಡಿದ್ದರು. ಆದರೆ ಅದೇ ದಿನ ಸಂಜೆ ನೋಡಿದಾಗ ಹಣವು ಕಾಣೆಯಾಗಿರುತ್ತದೆ.


ಪ್ರಭಾಕರ ಅಡಿಕೆ ಮಾರಾಟ ಮಾಡಿರುವ ವಿಚಾರ ನೆರೆಮನೆಯ ವಿಜಯ ಮೋನಿಸ್‌ ಎಂಬಾತನಿಗೆ ತಿಳಿದಿರುತ್ತದೆ. ಫೆ. 03 ರಂದು ವಿಜಯ ಮೋನಿಸ್‌ ಪ್ರಭಾಕರ ರವರ ಮನೆಗೆ ಬಂದು ಹೋಗಿದ್ದರು.
ಪ್ರಭಾಕರ ರವರು ಕಾಣೆಯಾದ ಹಣದ ಬಗ್ಗೆ ಮನೆಯಲ್ಲಿ ಹುಡುಕಾಡಿ ಮನೆಗೆ ಬಂದಿದ್ದ ವಿಜಯ ಮೋನಿಸ್‌ ನನ್ನು ವಿಚಾರಿಸಿ ಹಣ ಪತ್ತೆಯಾಗದೇ ಇರುವುದರಿಂದ ಇದೀಗ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಣೆಯಾದ ಹಣವನ್ನು ವಿಜಯ ಮೋನಿಸ್‌ ಎಂಬಾತನೇ ತೆಗೆದಿರಬಹುದು ಎಂಬ ಬಗ್ಗೆ ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ . ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಷರೋತ್ಸವ: ನಾಡು – ನುಡಿಯ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Suddi Udaya

ಬಸ್ ದರ ಏರಿಕೆ ಮಾಡಿರುವುದು ರಾಜ್ಯ ಸರಕಾರ ಜನರ ಬದುಕಿನ‌ ಮೇಲೆ ದಾಳಿ ಮಾಡಿದಂತಾಗಿದೆ : ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್

Suddi Udaya

ಸುಲ್ಕೇರಿ: ಶ್ರೀರಾಮ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

Suddi Udaya

ಕಣಿಯೂರು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜು: ಸಿ ಇ ಟಿ ಯಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya

ಅಳದಂಗಡಿ ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!