37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಿತ್ತಬಾಗಿಲು ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರದಲ್ಲಿ ನಡೆಯಿತೊಂದು ಪವಾಡ: ಕಲಶೋತ್ಸವ ಸಂದರ್ಭದಲ್ಲಿ ಮಾಂಗಲ್ಯ ಸರಮಾಲೆ ಕಳೆದುಕೊಂಡ ಮಹಿಳೆಗೆ ಮಂದಿರದ ಆವರಣದಲ್ಲೇ ಸಿಕ್ಕಿತು ಮಾಂಗಲ್ಯ

ಬೆಳ್ತಂಗಡಿ: ಮಿತ್ತಬಾಗಿಲು -ಮಲವಂತಿಗೆ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣ ಪ್ರಾರಂಭದ ಸಂದರ್ಭ ನಾರಾಯಣ ಗುರುಗಳ ಆಶೀರ್ವಾದದಂತೆ ಅತೀ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ ನಾಲ್ಕು ತಿಂಗಳ ಒಳಗಾಗಿ ಭವ್ಯ ಮಂದಿರದ ಜೊತೆಗೆ ಗುರು ಭವನ ನಿರ್ಮಾಣ ಆಗಿತ್ತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕದ ದಿನದಂದು ಕಾಜೂರಿನ ಪದ್ಮಾವತಿಯವರ ಲಕ್ಷಾಂತರ ರೂಪಾಯಿ ಮೌಲ್ಯದ ಎರಡು ಪವನ್ ಮಾಂಗಲ್ಯ ಸರಮಾಲೆ ಕಳೆದುಕೊಂಡು ಬಿಟ್ಟಿದ್ದರು, ಹುಡುಕಾಟ ಕೂಡ ಆ ಸಮಯದಲ್ಲಿ ನಡೆಸಲಾಗಿತ್ತು,ಗುರುಗಳ ಮೌಲ್ಯ ಅರಿತ ಅವರು ಏನಾದರೂ ಮಾಂಗಲ್ಯ ಸರಮಾಲೆ ಸಿಕ್ಕಿದರೆ ಗುರುಪೂಜೆ ಇದೇ ಮಂದಿರದಲ್ಲಿ ನಡೆಸುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದರು.

ಹರಕೆ ಹೊತ್ತ ಫಲವೋ, ಅವರ ಪೂರ್ವ ಜನ್ಮದ ಪುಣ್ಯವೋ ಕಲಶೋತ್ಸವ ಕಳೆದು ಒಂದು ತಿಂಗಳ ಒಳಗಾಗಿ ಅವರ ಮಾಂಗಲ್ಯ ಸರಮಾಲೆ ಯಾವುದೇ ರೀತಿಯಲ್ಲಿ ಕಳೆಗುಂದದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ಆವರಣದಲ್ಲಿ ಸಿಕ್ಕಿದೆ.ಮಾಂಗಲ್ಯ ಸರಮಾಲೆ ಸಿಕ್ಕಿದ ಸಮಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ ಸಮಯ ಒಂದೇ ಆಗಿತ್ತು ಎಂದು ಸಂಘದ ಮುಖ್ಯಸ್ಥರಾದ ಸುರೇಂದ್ರ ಕೊಲ್ಲಿ ತಿಳಿಸಿದ್ದಾರೆ.

Related posts

ಉಜಿರೆ ಎಸ್.ಡಿ.ಎಂ. ಬಿ.ಎಡ್ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

Suddi Udaya

ಧರ್ಮಸ್ಥಳದಲ್ಲಿ ನೂತನ ಶಿಲಾಮಯ ಧ್ವಜಸ್ತಂಭಕ್ಕೆ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಎಸ್.ಎಸ್.ಎಲ್.ಸಿ ಉತ್ತಮ ಅಂಕ ಪಡೆದ ಬೆಳ್ತಂಗಡಿ ವಿದ್ಯಾರ್ಥಿ ಸಿಮ್ರಾ ಪರ್ವೀನ್ ಳಿಗೆ ಸನ್ಮಾನ

Suddi Udaya

ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ – ಮಾದಪ್ಪ ಸ್ಮಾರಕ ಟ್ರೋಫಿ

Suddi Udaya

ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜದ ನಂದಗೋಕುಲ ಗೋಶಾಲೆಯ ವತಿಯಿಂದ ಅಂಬೇಡ್ಕರ್ ಜಯಂತಿ ಮತ್ತು ವಿಶು ಹಬ್ಬ ಆಚರಣೆ

Suddi Udaya

ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!