37.5 C
ಪುತ್ತೂರು, ಬೆಳ್ತಂಗಡಿ
February 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ‘ಮರು ಉತ್ಪಾದನೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಮಾರು ರಸ್ತೆ ನಿರ್ಮಾಣ” ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ

ಉಜಿರೆ: ‘ಮರು ಉತ್ಪಾದನೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಮಾರು ರಸ್ತೆ ನಿರ್ಮಾಣ” ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣದ ಎರಡನೇ ದಿನದ ತರಬೇತಿಯನ್ನು ಉಜಿರೆಯ ಎಂ ಆರ್ ಎಫ್ ಘಟಕದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಹಮ್ಮಿಕೊಳ್ಳಲಾಯಿತು.

ತರಬೇತಿ ಮೊದಲ ಹಂತದಲ್ಲಿ ಎಂ ಆರ್ ಎಫ್ ಘಟಕದ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ಎಂಆರ್‌ಎಫ್ ಘಟಕದ ಆಪರೇಟರ್ ಸುದೇಶ್ ಕಿಣಿ ನೀಡಿದರು. ನಂತರ ಮಿಕ್ಸಿಂಗ್ ಪ್ಲಾಂಟ್ ನಲ್ಲಿ ಬಿಟುಮಿನ್ ಪ್ಲಾಸ್ಟಿಕ್ ಮಿಕ್ಸಿಂಗ್ ಬಗ್ಗೆ ಪಂಚಾಯತ್ ರಾಜ್ ಸಹಾಯಕ ಕಾರ್ಯಪಾಲಕ ಅಭಿಯಂತರರು ನಿತಿನ್ ಮಾಹಿತಿ ನೀಡಿದರು.

ಬಳಿಕ ಮಲ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಮಲ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಲಾಯಿತು.

ಸ್ವಚ್ಛ ಸಂಕೀರ್ಣದಲ್ಲಿ ಸಂಗ್ರಹವಾಗುವ ಕಸಗಳಲ್ಲಿ ಮಿಶ್ರಿತವಾಗಿ ಬಂದಿರುವಂತಹ ಗಾಜಿನ ಬಳೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಉಡುಪುಗಳು, ಗಾಜಿನ ಬಾಟಲಿಗಳು ಹೀಗೆ ದಿನನಿತ್ಯ ಬಳಕೆ ಆದಂತಹ ವಸ್ತುಗಳು ಕಸವಾಗಿ ಬಂದಿರುವ ಈ ಎಲ್ಲ ವಸ್ತುಗಳನ್ನು ಪ್ರತ್ಯೇಕವಾಗಿ ತ್ಯಾಜ್ಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ಪ್ರದರ್ಶನಕ್ಕೆ ಇರಿಸಲಾದ ವಸ್ತುಗಳನ್ನು ವೀಕ್ಷಿಸಲಾಯಿತು.

ಅಲ್ಲೇ ಇನ್ನೊಂದು ಘಟಕದಲ್ಲಿ ಸಂಗ್ರಹವಾದಂತ ಪ್ಲಾಸ್ಟಿಕ್ ನಿಂದ ಟೈಲ್ಸ್ ಗಳನ್ನು ಕೂಡ ಮಾಡಲಾಗುತ್ತಿದ್ದು ಅದರ ಒಂದು ಕಾರ್ಯವೈಖರಿಯನ್ನು ಅಲ್ಲಿನ ಮೇಲ್ವಿಚಾರಕರು ವಿವರಿಸಿದರು.

ತರಬೇತಿಯ ಮುಂದುವರಿದ ಭಾಗವಾಗಿ ಎಂ ಆರ್ ಎಫ್ ಘಟಕದ ಮುಂಭಾಗದಲ್ಲಿ ಸಂಪರ್ಕಿಸುವ ರಸ್ತೆಗೆ ಬಿಟುಮಿನ್ ಹಾಕುವ ಮೂಲಕ ನೇರ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದ. ಕ ಜಿ. ಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ. , ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರು ವೇಣುಗೋಪಾಲ್ , ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ರಘುನಾಥ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಬೆಳ್ತಂಗಡಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಪ್ ಶೆಟ್, ಪಂಚಾಯತ್ ರಾಜ್ ಪುತ್ತೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಭರತ್, ಕರ್ನಾಟಕ ರಾಜ್ಯದ ಎಲ್ಲಾ ಎಸ್ ಬಿ ಎಂ (ಗ್ರಾ) ನೋಡಲ್ ಅಧಿಕಾರಿಗಳು, ಜಿಲ್ಲೆಯ ಉಪಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಕಾರ್ಯಕಾರಿ ಅಭಿಯಂತರರು, ರಾಜ್ಯ ಸಮಾಲೋಚಕರು, ಜಿಲ್ಲಾ ಪಂಚಾಯತ್ SBMG ಜಿಲ್ಲಾ ಸಮಾಲೋಚಕರು, ಉಜಿರೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿಗಳು, ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಮಂಜೊಟ್ಟಿ ಸ್ಟಾರ್ ಲೈನ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹತೆಗೊಳಿಸಿರುವುದಕ್ಕೆ ಖಂಡನೆ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರತಿಭಟನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ

Suddi Udaya

ಚಾರ್ಮಾಡಿ : ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಜನರ ಪ್ರತಿಭಟನೆ

Suddi Udaya

ಪುತ್ತೂರು ಗೇರು ಸಂಶೋಧನ ಕೇಂದ್ರದ ಎರಡು ತಳಿ ಪ್ರಧಾನಿಯಿಂದ ಬಿಡುಗಡೆ

Suddi Udaya

ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.13 ಡಿವಿಡೆಂಡ್

Suddi Udaya
error: Content is protected !!