July 23, 2026
ಆರೋಗ್ಯ

ಗುಂಡೂರಿಯ ‌ಶ್ರೀಗುರುಚೈತನ್ಯ ಸೇವಾ ಶ್ರಮದಲ್ಲಿ ವೇಣೂರಿನ ಡಾ| ಕೆ.ರವೀಂದ್ರ ಪ್ರಸಾದ್ ಇವರಿಂದ ವೈದ್ಯರ ಕೊಠಡಿಯ ಉದ್ಘಾಟನೆ

ಗುಂಡೂರಿ‌ : ಹಿರಿಯ ವೈದ್ಯ ಬಡಕೋಡಿ ಗುತ್ತು ಮನೆತನದ ವೇಣೂರಿನ ಡಾ| ಕೆ.ರವೀಂದ್ರ ಪ್ರಸಾದ್ ಇವರಿಂದ ಗುಂಡೂರಿಯ ‌ಶ್ರೀಗುರುಚೈತನ್ಯ ಸೇವಾಶ್ರಮದ ವೈದ್ಯರ ಕೊಠಡಿಯ ಉದ್ಘಾಟನೆ ಫೆ.9ರಂದು ನಡೆಯಿತು.
ಕರಿಮಣೇಲಿನ ಮೂಂಕಾಡಿಯ ರಾಮಚಂದ್ರ ನಾಯಕ್ ಮತ್ತು ಗೀತಾರವರ 40 ನೇ ವರುಷದ ವೈವಾಹಿಕ ಜೀವನದ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸೇವಾಶ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮ ಕೇಳದ ಪೇಟೆ ವೈದಿಕರಾದ ಶ್ರೀಪತಿ ಭಟ್ ರವರಿಂದ ಗಣಹೋಮ ನಡೆದು ದಂಪತಿಗಳಿಗೆ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವೇಣೂರಿನ ಹಿರಿಯ ವೈದ್ಯ ಸರಳ ಸಜ್ಜನ ಈ ವೈದ್ಯರ ಮೂಲಕ ವೈದ್ಯರ ಕೊಠಡಿಯನ್ನು ಉದ್ಘಾಟಿಸಲಾಯಿತು ಮತ್ತು ಇವರನ್ನು ಸಂಮ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಉದ್ಯಮಿ ರಮೇಶ್ ನಾಯಕ್ ಹಾಗೂ ಇವರ ಧರ್ಮಪತ್ನಿ ಸುಚಿತ್ರಾ, ಗೋಳಿಯಂಗಡಿಯ ಸತ್ಯರಾಜ್ ಪರಿವಾರ್ ನ ಉದ್ಯಮಿ ಸತ್ಯೇಂದ್ರ ರಾವ್,ಉದ್ಯಮಿ ಭಾಸ್ಕರ ಪೈ, ಸುದತ್ ಜೈನ್,ಆರಂಬೋಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರಭಾಕರ ಹುಲಿಮೇರು, ಬಂಧುಮಿತ್ರರು ಉಪಸ್ಥಿತರಿದ್ದರು. ಮನೋರಂಜನೆಗಾಗಿ ಆಗ್ನಿದುರ್ಗೆ ರಸಮಂಜರಿ ತಂಡದಿಂದ ಸಂಗೀತ ಕಾರ್ಯಕ್ರಮ ವಿತ್ತು. ನಿವೃತ್ತ ಸೇನಾನಿ ರಾಮಚಂದ್ರ ನಾಯಕ್ ರವರು ಸ್ವಾಗತಿಸಿದರು ಶ್ರೀಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯರವರು ಕಾರ್ಯಕ್ರಮ ನಿರೂಪಿಸಿದರು.

Related posts

ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ:-

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡಾ ವೀಲ್ ಚೇರ್ ವಿತರಣೆ.

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

Suddi Udaya

ಜೂನ್ 7: ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ-ಉಡುಪಿ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಜೂ.21: ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!