23 C
ಪುತ್ತೂರು, ಬೆಳ್ತಂಗಡಿ
February 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪುತ್ತಿಲ ನಡುಕೇಯ೯ ತರವಾಡು ಟ್ರಸ್ಟ್‌ನಿಂದ ಕೊಯ್ಯೂರು ರಾಮಣ್ಣ ಪೂಜಾರಿ ದಂಪತಿಗೆ ಸನ್ಮಾನ

ಪುತ್ತಿಲ: ಪುತ್ತಿಲ ಗ್ರಾಮದ ನಡುಕೇಯ೯ ತರವಾಡು ಟ್ರಸ್ಟ್ ಆಶ್ರಯದಲ್ಲಿ ಫೆ. 9 ಆದಿತ್ಯವಾರದಂದು ಮೂಲ ತರವಾಡು ಮನೆಯಲ್ಲಿ ನಾಗತಂಬಿಲ ದೈವಗಳಿಗೆ ಪರ್ವ ಸೇವೆ, ಅಗೇಲು ಸೇವೆ ಹಾಗೂ ತರವಾಡು ಟ್ರಸ್ಟ್‌ನ ಸಭೆ ಟ್ರಸ್ಟ್ ಅಧ್ಯಕ್ಷ ಆನಲೆ ಶೇಖರ ಪೂಜಾರಿರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.


ಇದೇ ಸಂದರ್ಭದಲ್ಲಿ ಕುಟುಂಬದ ಹಿರಿಯರೂ, ಯಜಮಾನರಾದ ಕೇರ್ಯ ರಾಮಪ್ಪ ಪೂಜಾರಿಯವರನ್ನೂ, ಕುಟುಂಬದ ಸದಸ್ಯರಾದ ಡಾ| ರಿತೇಶ್ ಕುಮಾರ್‌ರವರ ಬಾಬ್ತು ಅವರ ಹೆತ್ತವರಾದ ಕೆ.ರಾಮಣ್ಣ ಪೂಜಾರಿ ಕೊಯ್ಯೂರು ಮತ್ತು ಶಾಂತಿ ದಂಪತಿ ಹಾಗೂ ಕ್ರೀಡಾಪಟು ಲಿಶನ್ ಪುರಿಯ, ಸುಪ್ರೀತ್ ನಡುಕೇರ ಇವರನ್ನು ಸನ್ಮಾನಿಸಲಾಯಿತು. ಅಕ್ಷಿತಾ ಬೇನಪ್ಪು ಸನ್ಮಾನ ಪತ್ರ ವಾಚಿಸಿದರು. ದೈವಗಳಿಗೆ ಪರಿಚಾಲಕರಾಗಿ ಜಯಾನಂದ ಆನ ಸೇವೆಗೈದರು. ಕಾರ್ಯಕ್ರಮ ಸಂಯೋಜಕರಾದ ಸತೀಶ್ ಮಿತ್ತೇರಿಪಾದೆ ಸ್ವಾಗತಿಸಿ, ಚಂದ್ರಶೇಖರ ಮಿತ್ತೇರಿಪಾದೆ ವಂದಿಸಿದರು. ಕುಟುಂಬಸ್ಥರು ಭಾಗವಹಿಸಿದ್ದರು.
ವರದಿ:ಕೆ. ರಾಮಣ್ಣ ಪೂಜಾರಿ

Related posts

ಚಾರ್ಮಾಡಿ ಘಾಟಿ ಪರಿಸರದಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಉಜಿರೆ: ಮಾಚಾರು ನಿವಾಸಿ ಕೃಷ್ಣ ಬೊಳ್ಮಿಣ್ಣಾಯ ನಿಧನ

Suddi Udaya

ಪುದುವೆಟ್ಟು: ಮುಳಿಮಜಲು ನಿವಾಸಿ ಲಕ್ಷ್ಮೀನಾರಾಯಣ ರಾವ್ ನಿಧನ

Suddi Udaya

ಅಳದಂಗಡಿ ಶೋಚನೀಯ ಸ್ಥಿತಿಯಲ್ಲಿ ಸೋರುವ ಮನೆಯಲ್ಲಿ ತಾಯಿ ಮಕ್ಕಳ ಜೀವನ: ಅಳದಂಗಡಿ ಗ್ರಾಮ ಪಂಚಾಯತನಿಂದ ಮನೆಗೆ ಶೀಟ್ ಹಾಗೂ ಮುಖ್ಯ ಬಾಗಿಲು ಅಳವಡಿಕೆಗೆ ನಿರ್ಧಾರ: ಪಂಚಾಯತ್ ಅಧ್ಯಕ್ಷೆ ಸೌಮ್ಯ ಹರೀಪ್ರಸಾದ್ ಸುದ್ದಿ ಉದಯ ಪತ್ರಿಕೆಗೆ ಹೇಳಿಕೆ

Suddi Udaya

ಧರ್ಮಸ್ಥಳ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರ ಮತ್ತು ಉಪನ್ಯಾಸಕರುಗಳ ವಾರ್ಷಿಕ ಕಾರ್ಯಾಗಾರ

Suddi Udaya

ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!