23.8 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ: ತಾಲೂಕು ಮಟ್ಟದ ಮಂದಿರ ಅಧಿವೇಶನ

ಲಾಯಿಲ: ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಾಲೂಕು ಮಟ್ಟದ ಮಂದಿರ ಅಧಿವೇಶನದ ಉದ್ಘಾಟನಾ ಕಾರ್ಯಕ್ರಮವು ಫೆ.15ರಂದು ಲಾಯಿಲ ಶ್ರೀ ಸುಬ್ರಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ನಡೆಯಿತು.

ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಮನ್ವಯಕರು ಚಂದ್ರ ಮೊಗವೀರ್ ಮಾತನಾಡಿ, ನಕರಾತ್ಮಕ ವಿಚಾರಗಳನ್ನು ಸಕರಾತ್ಮವಾಗಿ ಮಾಡಬಲ್ಲ ಶಕ್ತಿ ದೇವಸ್ಥಾನಗಳಲ್ಲಿ ಇದೆ. ದೇವಸ್ಥಾನ ಗಳು ಸರ್ಕಾರೀಕರ ಆದ ಬಳಿಕ ಹುಂಡಿಯ ಹಣಗಳು ಯಾವುದಾವುದಕ್ಕೋ ದುರುಪಯೋಗ ಆಗುತ್ತಿದೆ. ಧಾರ್ಮಿಕ ವಿಚಾರಗಳು ನಾಶವಾಗುತ್ತಿದೆ. ದೇವಸ್ಥಾನಗಳ ರಕ್ಷಣೆ ಆಗಬೇಕು, ದೇವಸ್ಥಾನದ ಭೂಮಿ ಉಳಿಸಬೇಕು. ಎಲ್ಲಾ ದೇವಸ್ಥಾನದ ಸಂಪರ್ಕ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯ ನಡೆಯುತ್ತಿದೆ ಎಂದರು.

ವೇದಿಕೆಯಲ್ಲಿ ಸನಾತನ ಸಂತರಾದ ರಮಾನಂದ ಗೌಡ, ಮುಂಡಾಜೆ ಪರಶುರಾಮ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ನಾರಾಯಣ ಫದ್ಕೆ, ಬೆಳಾಲು ಅನಂತೋಡಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶರತ್ ಕೃಷ್ಣ ಪಡುವೇಟ್ನಾಯ, ಹಿಂದೂ ಜನ ಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕರು ವಿಜಯ ಕುಮಾರ್, ಸಾಂತಪ್ಪ ಗೌಡ, ಪ್ರಶಾಂತ್ ಶಬರಾಯ, ಸುಧಾಕರ ಅಮ್ಮಾಜೆ, ಜಯ ಸಾಲಿಯಾನ್, ಬಾಲಕೃಷ್ಣ ಗೌಡ, ಆನಂದ ಗೌಡ, ಶಿವಾನಂದ್ ರಾವ್ ಉಪಸ್ಥಿತರಿದ್ದರು.

ವಕೀಲರರಾದ ತೀರ್ಥಶ್ ನಿರೂಪಿಸಿದರು. ಅಕ್ಷಯ್ ರಾವ್ ವಂದಿಸಿದರು.

Related posts

ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ

Suddi Udaya

ಫೆ.12ರಿಂದ ಮರೋಡಿ ಕ್ಷೇತ್ರದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಅಳದಂಗಡಿ ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಕಾಯರ್ತಡ್ಕದಲ್ಲಿ ಮಾರಾಕಾಯುಧದಿಂದ ಹಲ್ಲೆ; ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

Suddi Udaya

ಬೆಳ್ತಂಗಡಿ ಗೃಹ ರಕ್ಷಕ ದಳದ ಘಟಕದ ವಾರದ ಕವಾಯತಿಗೆ ಡಾ. ಮುರಳಿ ಮೋಹನ್ ಚೂಂತಾರು ಭೇಟಿ

Suddi Udaya
error: Content is protected !!